Warning: Undefined array key "options" in /home/nagendra/public_html/content/plugins/elementor-pro/modules/theme-builder/widgets/site-logo.php on line 124

ಡಾಲಿ-ವಿಜಿ ಜುಗಲ್ ಬಂದಿಗೆ ಪ್ರೇಕ್ಷಕರು ಫಿದಾ- ಭರ್ಜರಿ ಓಪನಿಂಗ್ ಪಡೆದುಕೊಂಡ ಸಲಗ

Facebook
Twitter
Telegram
WhatsApp

ಬೆಂಗಳೂರು : ಚಿತ್ರರಂಗದಲ್ಲಿ ಕಡೆಗೂ ಕತ್ತಲು ಸರಿದು ಬೆಳಕು ಬಂದಿದೆ.. ಸಲಗ ನಡೆದದ್ದೆ ದಾರಿ ಅಂತ ಸಿನಿಮಾ ಭರ್ಜರಿ ಓಪನಿಂಗ್ ಕೊಟ್ಟಿದ್ದಾರೆ. ಇಡೀ ಚಿತ್ರರಂಗ ಗರಿಗೆದರಿ ನಿಂತಿದೆ.. ದುನಿಯಾ ವಿಜಿ ಮೊದಲ ಬಾರಿಗೆ ನಿರ್ದೇಶನದಲ್ಲೂ ಸೈ ಎನಿಸಿಕೊಂಡಿದ್ದಾರೆ. ವಿಜಿ ಆಕ್ಷನ್ ಕಟ್ ದೃಶ್ಯಗಳನ್ನ ಫ್ಯಾನ್ಸ್ ಅಭಿಮಾನದಿಂದ ಅಪ್ಪಿಕೊಂಡಿದ್ದಾರೆ.

ಮೊದಲ ದಿನವೇ ಸಹಸ್ರಾರು ಮಂದಿ ಅಭಿಮಾನಿಗಳು ಸಲಗನನ್ನ ಒಪ್ಪಿ ಅಪ್ಪಿದ್ದಾರೆ. ಇಡೀ ಸಿನಿಮಾದಲ್ಲಿ ಡೈಲಾಗ್ ಗೆ ಚಪ್ಪಾಳೆಗಳು ಬಿದ್ದಿವೆ. ಸಿನಿಮಾ ರಿಲೀಸ್ ಮೊದಲು ಅಭಿಮಾನಿಗಳು ಯಾವ ಮಟ್ಟಿಗಿನ ನಿರೀಕ್ಷೆ ಇಟ್ಟುಕೊಂಡಿದ್ದರೋ, ಆ ನಿರೀಕ್ಷೆಯನ್ನ ನಿರ್ದೇಶಕರ ಸ್ಥಾನದಲ್ಲಿ ನಿಂತು ದುನಿಯಾ ವಿಜಿ ಫುಲ್ ಫಿಲ್ ಮಾಡಿದ್ದಾರೆ. ಭೂಗತ ಲೋಕದ, ಸೇಡಿನ ಎಳೆ ಇಟ್ಟುಕೊಂಡು ಕಥೆಯನ್ನ ಅದ್ಭುತವಾಗಿ ಹೆಣೆಯಲಾಗಿದೆ. ಮಾಸ್ ಪ್ರೇಕ್ಷಕರಿಗೆ ಹಬ್ಬದೂಟವೇ ಸಿಕ್ಕಿದೆ.. ಮೈ ನವಿರೇಳುವಂತ ಫೈಟ್ಗಳು.. ಸಲಗ ಡಾಲಿ ಮುಖಾಮುಖಿ ದೃಶ್ಯ ಈ ಎಲ್ಲವೂ ಮಾಸ್ ಪ್ರಿಯರಿಗೆ ಆನಂದ ತರಿಸಿದೆ.

ಒಂದಷ್ಟು ಎಮೋಷನ್ಸ್ ಕೂಡ ಸಿನಿಮಾದಲ್ಲಿಪ್ರೇಕ್ಷಕರನ್ನು ಕಟ್ಟಿ ಹಾಕಿ ಕೂರಿಸುತ್ತವೆ. ಸಾಂಗ್ ಈ ಮುಂಚೆಯೇ ಕೇಳಿರುವಂತೆ ಮಸ್ತ್ ಫೀಲ್ ಕೊಡುತ್ತೆ. ಮಾಸ್ತಿ ಡೈಲಾಗ್ ಎಲ್ಲರನ್ನ ಮೆಚ್ಚಿಸಿದೆ. ಒಟ್ಟಾರೆ ಎರಡು ವರ್ಷಗಳ ಗ್ಯಾಪ್ ಬಳಿಕ ಚಿತ್ರರಂಗಕ್ಕೆ ಅದ್ಭುತವೆನಿಸೋ ಸಿನಿಮಾ ಸಿಕ್ಕಿದೆ. ಫ್ಯಾಮಿಲಿ ಕುಳಿತು ನೋಡೋಕೆ ಸಲಗ ಕೊಂಚ ಕಷ್ಟವೇ. ಆದ್ರೆ ಮಾಸ್ ಪ್ರಿಯರಿಗೆ ಇದು ಹಬ್ಬದೂಟ. ಒಟ್ನಲ್ಲಿ, ಸ್ಯಾಂಡಲ್ ವುಡ್ ಗೆ ಮತ್ತೊಬ್ಬ ಮಾಸ್ ಡೈರೆಕ್ಟರ್ ಸಿಕ್ಕ ಖುಷಿಯಲ್ಲಿದ್ದಾರೆ ಮಾಸ್ ಸಿನಿ ಪ್ರಿಯರು.

Facebook
Twitter
Telegram
WhatsApp
suddionenews

suddionenews

Leave a Comment

Top Stories

ಈ ರಾಶಿಯವರಿಗೆ ಗುಡ್ ಲಕ್ ಗಳ ಸುರಿಮಳೆ….

ಈ ರಾಶಿಯವರಿಗೆ ಗುಡ್ ಲಕ್ ಗಳ ಸುರಿಮಳೆ….   ಬುಧವಾರ ರಾಶಿ ಭವಿಷ್ಯ -ಮೇ-8,2024 ಸೂರ್ಯೋದಯ: 05:50, ಸೂರ್ಯಾಸ್ತ : 06:34 ಶಾಲಿವಾಹನ ಶಕೆ1945, ಶ್ರೀ ಕ್ರೋಧಿ ನಾಮ ಸಂವತ್ಸರ , ಸಂವತ್2079, ಚೈತ್ರಮಾಸ,

ಚಿತ್ರದುರ್ಗದಲ್ಲಿ ಅಕ್ಕ-ತಂಗಿಯರ ಸಂಭ್ರಮದ ಭೇಟಿ, ಸಂಭ್ರಮಿಸಿದ ಜನತೆ : ತಿಪ್ಪಿನಘಟ್ಟಮ್ಮ, ಬರಗೇರಮ್ಮ ದೇವಿಯ ಭೇಟಿಗೆ ಕಾತರದಿಂದ ಕಾದ ಭಕ್ತರು

  ವರದಿ ಮತ್ತು ಫೋಟೋ ಕೃಪೆ ಸುರೇಶ್ ಪಟ್ಟಣ್, ಮೊ : 98862 95817 ಚಿತ್ರದುರ್ಗ ಮೇ. 07 :  ನಗರ ದೇವತೆಗಳಾದ ತ್ರಿಪುರ ಸುಂದರಿ ತಿಪ್ಪಿನಘಟ್ಟಮ್ಮ ಮತ್ತು ಬರಗೇರಮ್ಮ ದೇವಿ ಭೇಟಿ ಉತ್ಸವ

ಸಂಜೆ ವೇಳೆಗೆ ಹಿರಿಯೂರಿನಾದ್ಯಂತ ಗುಡುಗು ಸಹಿತ ಬಾರಿ ಮಳೆ..!

ಹಿರಿಯೂರು: ಮಳೆಯಿಲ್ಲದೆ ಕಂಗಲಾಗಿದ್ದ ಹಿರಿಯೂರಿನ ಮಂದಿಗೆ ವರುಣಾರಾಯ ತಂಪೆರೆದಿದ್ದಾನೆ. ಸಂಜೆ ವೇಳೆ ಜೋರು ಮಳೆ ಬಂದಿದ್ದು, ಜನ ಫುಲ್ ಖುಷಿಯಾಗಿದ್ದಾರೆ. ಕಳೆದ ಬಾರಿ ಹಿಂಗಾರು-ಮುಂಗಾರು ಮಳೆಯಿಲ್ಲದೆ ಬಿಸಿ ಗಾಳಿಯನ್ನು ಅನುಭವಿಸಿ ಅನುಭವಿಸು ಜನ ಸುಸ್ತಾಗಿ

error: Content is protected !!