Warning: Undefined array key "options" in /home/nagendra/public_html/content/plugins/elementor-pro/modules/theme-builder/widgets/site-logo.php on line 124

ಕಾಶ್ಮೀರದಿಂದ ಕನ್ಯಾಕುಮಾರಿಯವರೆಗೂ ಸೈಕಲ್ ಯಾತ್ರೆ ಹೊರಟ ವೀರನಾರಾಯಣ ಕುಲಕುರ್ಣಿ ಅವರಿಗೆ ಚಿತ್ರದುರ್ಗದಲ್ಲಿ ಸನ್ಮಾನ

Facebook
Twitter
Telegram
WhatsApp

 

ವರದಿ ಮತ್ತು ಫೋಟೋ ಕೃಪೆ
ಸುರೇಶ್ ಪಟ್ಟಣ್,                         
ಮೊ : 87220 22817

ಚಿತ್ರದುರ್ಗ,(ಮಾ.10) :  ಜೀವನ ಪದ್ದತಿಯನ್ನು ಬದಲಾವಣೆ ವ್ಯಾಯಾಮ ಮತ್ತು ಯೋಗ ಮಾಡುವುದರ ಮೂಲಕ ಡಯಾಬಿಟೀಸ್‍ನ್ನು ದೂರ ಮಾಡಬಹುದಾಗಿದೆ ಎಂದು ವೀರನಾರಾಯಣ ಕುಲಕುರ್ಣಿ ತಿಳಿಸಿದರು.

ಕಾಶ್ಮೀರದಿಂದ ಕನ್ಯಾಕುಮಾರಿಯವರೆಗೂ ಸೈಕಲ್ ಯಾತ್ರೆಯನ್ನು ನಡೆಸುತ್ತಿರುವ ಇವರು ಚಿತ್ರದುರ್ಗದಲ್ಲಿ ರೋಟರಿಬಾಲಭವನದಲ್ಲಿ ಹಮ್ಮಿಕೊಂಡಿದ್ದ ಸನ್ಮಾನ ಸಮಾರಂಭದಲ್ಲಿ ಭಾಗವಹಿಸಿ ಮಾತನಾಡಿದರು.

ಇಂದಿನ ಜೀವನದಲ್ಲಿ ಆಧುನಿಕತೆ ಮೈಗೂಡಿಸಿಕೊಂಡಿದೆ, ಎಲ್ಲದಕ್ಕೂ ಸಹಾ ಬೇರೆಯವರನ್ನು ಅನುಸರಿಸಬೇಕಾದ ಪರಿಸ್ಥಿತಿ ನಿರ್ಮಾಣವಾಗಿದೆ. ಇಂದಿನ ದಿನದಲ್ಲಿ ದೇಹಕ್ಕೆ ಅನುಕೂಲವಾಗುವಂತ ಆಹಾರವನ್ನು ಸೇವಿಸುವ ಬದಲಿಗೆ ನಾಲಿಗೆಗೆ ಅನುಕೂಲವಾಗುವಂತ ಆಹಾರವನ್ನು ಸೇವನೆ ಮಾಡಲಾಗುತ್ತಿದೆ. ಇದರಿಂದ ದೇಹಕ್ಕೆ ಆನಾರೋಗ್ಯ ಉಂಟಾಗುತ್ತದೆ ಇದರಿಂದ ವಿವಿಧ ರೀತಿಯ ಖಾಯಿಲೆಗಳಿಗೆ ತುತ್ತಾಗುತ್ತದೆ ಎಂದರು.

ಇತ್ತೀಚಿನ ದಿನಮಾನದಲ್ಲಿ ಎಲ್ಲಡೆ ಡಯಾಬೀಟಿಸ್ ಖಾಯಿಲೆ ಹೆಚ್ಚಾಗಿದೆ ಇದರಿಂದ ನರಳುವವರ ಸಂಖ್ಯೆಯೂ ಸಹಾ ಹೆಚ್ಚಾಗಿದೆ. ನಮ್ಮ ಆರೋಗ್ಯ ಪದ್ದತಿಯನ್ನು ನಾವು ಬದಲಾವಣೆ ಮಾಡುವುದರ ಮೂಲಕ ಈ ರೋಗವನ್ನು ನಿಯಂತ್ರಿಸಬಹುದಾಗಿದೆ, ಅಲ್ಲದೆ ದೂರ ಇಡಬಹುದಾಗಿದೆ. ಇದರ ಬಗ್ಗೆ ಜನ ಜಾಗೃತಿಯನ್ನು ಮೂಡಿಸುವ ಸಲುವಾಗಿ ಕಾಶ್ಮೀರದಿಂದ ಕನ್ಯಾಕುಮಾರಿಯವರೆಗು ಸೈಕಲ್ ಯಾತ್ರೆಯನ್ನು ಹಮ್ಮಿಕೊಳ್ಳಲಾಗಿದೆ. ಉತ್ತಮವಾದ ಆಹಾರ ಪದ್ದತಿಯನ್ನು ಮೈಗೂಡಿಸಿಕೊಳ್ಳಬೇಕಿದೆ ಇದರೊಂದಿಗೆ ಯೋಗ ಮತ್ತು ವ್ಯಾಯಾಮವನ್ನು ಸಹಾ ಬಿಡದೆ ಮಾಡುವುದರ ಮೂಲಕ ಈ ರೋಗದಿಂದ ದೂರ ಇರಬಹುದಾಗಿದೆ ಎಂದು ವೀರನಾರಾಯಣ ತಿಳಿಸಿದರು.

ಮಾನವ ಇಂದಿನ ದಿನದಲ್ಲಿ ಒತ್ತಡದಲ್ಲಿ ಕೆಲಸವನ್ನು ಮಾಡುತ್ತಿದ್ದಾನೆ ಇದರಿಂದ ಮಾನಸಿಕವಾಗಿ ಕುಗ್ಗುತ್ತಾನೆ ಇದರಿಂದ ರೋಗಕ್ಕೆ ಬಲಿಯಾಗುತ್ತಾನೆ. ಈ ಹಿನ್ನಲೆಯಲ್ಲಿ ಒತ್ತಡ ನಿವಾರಣೆಯಿಂದ ಕೆಲಸವನ್ನು ಮಾಡಬೇಕಿದೆ. ಇದಕ್ಕೆ ಉತ್ತಮವಾದ ಆಹಾರ, ವ್ಯಾಯಾಮ, ಯೋಗಗಳು ಸಹಕಾರಿಯಾಗಿದೆ ಎಂದು ತಿಳಿಸಿದರು.

ಈ ಯಾತ್ರೆಯಲ್ಲಿ ಸುಮಾರು 4000 ಕೀ.ಮೀ. ದೂರವನ್ನು ಕ್ರಮಿಸಲಾಗುವುದು ಈಗಾಗಲೇ 3200 ಕೀ. ಮೀ ದೂರವನ್ನು ಕ್ರಮಿಸಲಾಗಿದೆ. ಉಳಿದ 800 ಕಿ.ಮೀ. ದೂರವನ್ನು ಸವೆಸುವುದರ ಮೂಲಕ ಕನ್ಯಾಕುಮಾರಿಯನ್ನು ತಲುಪಲಾಗುವುದು. ಈ ಯಾತ್ರೆಯಲ್ಲಿ ಒಂದೊಂದು ರಾಜ್ಯದಲ್ಲಿ ಒಂದೊಂದು ರೀತಿಯ ಅನುಭವ ಆಗಿದೆ ಎಂದರು.

ಈ ಸಂದರ್ಭದಲ್ಲಿ ಪತ್ನಿ ಪೂರ್ಣಮಾ, ಮಗಳಾದ ಅಮೋದಿನಿ, ಸ್ನೇಹಿತ ಪೃಥ್ವಿ ಸಾಥ್ ನೀಡಿದ್ದಾರೆ.

ಕಾರ್ಯಕ್ರಮದಲ್ಲಿ ರೋಟೇರಿಯನ್‍ಗಳಾದ ಕೆ.ಮಧುಪ್ರಸಾದ್, ಎಸ್.ವೀರೇಶ್, ಎ.ಮೈಲೇಶ್ ಕುಮಾರ್, ವೀರಭದ್ರಸ್ವಾಮಿ, ತಿಪ್ಪೇಸ್ವಾಮಿ, ಹರೀಶ್, ಮಹಡಿ ಶಿವಮೂರ್ತಿ, ಸ್ವಾಮಿ, ಮಧು ಕುಮಾರ್, ಕನಕ ರಾಜ್  ಸೇರಿದಂತೆ ಇತರರು ಭಾಗವಹಿಸಿದ್ದರು.

Facebook
Twitter
Telegram
WhatsApp
suddionenews

suddionenews

Leave a Comment

Top Stories

ಈಗ ನಡೆಯುತ್ತಿರುವ ಲೋಕಸಭಾ ಚುನಾವಣೆ ಎರಡನೇ ಸ್ವಾತಂತ್ರ್ಯ ಹೋರಾಟ : ಮುಖ್ಯಮಂತ್ರಿ ಸಿದ್ದರಾಮಯ್ಯ

  ಬೆಳಗಾವಿ , ಮೇ 05 : ಲೋಕಸಭಾ ಚುನಾವಣೆಯಲ್ಲಿ ಬಿಜೆಪಿಗೆ 400 ಸ್ಥಾನಗಳನ್ನು ನೀಡಿದರೆ ಸಂವಿಧಾನವನ್ನು ಬದಲಾವಣೆ ಮಾಡುವುದಾಗಿ ಬಿಜೆಪಿ ಹಾಗೂ ಆರ್ ಎಸ್ ಎಸ್ ಹೇಳುತ್ತಿದ್ದು, ಈ ಚುನಾವಣೆ ಎರಡನೇ ಸ್ವಾತಂತ್ರ್ಯ

ರೇವಣ್ಣ ಬಂಧನದ ಬೆನ್ನಲ್ಲೇ ದೂರು ನೀಡಲು ಬಂದ ಮೂವರು ಸಂತ್ರಸ್ತೆಯರು : ಮತ್ತಷ್ಟು ಸಂಕಷ್ಟ..!

ಬೆಂಗಳೂರು: ಮಹಿಳೆಯನ್ನು ಕಿಡ್ನ್ಯಾಪ್ ಮಾಡಿದ ಆರೋಪದ ಹಿನ್ನೆಲೆ ಮಾಜಿ ಸಚಿವ ಹೆಚ್ ಡಿ ರೇವಣ್ಣ ಅವರನ್ನು ಎಸ್ಐಟಿ ಪೊಲೀಸರು ಬಂಧಿಸಿದ್ದಾರೆ. ಸಂತ್ರಸ್ತೆಯೊಬ್ಬರು ದೂರು ನೀಡಿರುವುದು ಹಾಗೂ ಇನ್ನೊಬ್ಬ ಸಂತ್ರಸ್ತೆಯ ಮಗ ಕಿಡ್ನ್ಯಾಪ್ ಪ್ರಕರಣದಲ್ಲಿ ದೂರು

ಭಾಷಣದಲ್ಲಿ ಯಡವಟ್ಟು : ದಿಂಗಾಲೇಶ್ವರ ಸ್ವಾಮೀಜಿ ವಿರುದ್ಧ ಕುಮಾರಸ್ವಾಮಿ ದೂರು.. ಎಫ್ಐಆರ್ ದಾಖಲು..!

ಹುಬ್ಬಳ್ಳಿ: ಧಾರವಾಡ ಲೋಕಸಭಾ ಚುನಾವಣಾ ಕ್ಷೇತ್ರಕ್ಕೆ ಬಿಜೆಪಿ ಅದ್ಯಾವಾಗ ಮತ್ತೆ ಪ್ರಹ್ಲಾದ್ ಜೋಶಿ ಅವರಿಗೇನೆ ಟಿಕೆಟ್ ಕೊಟ್ಟಿತೇ ಅಂದಿನಿಂದಾನೇ ದಿಂಗಾಲೇಶ್ವರ ಸ್ವಾಮೀಜಿಗೆ ಬೇಸರ ಉಂಟಾಗಿತ್ತು. ಅಭ್ಯರ್ಥಿಯನ್ನು ಬದಲಾಯಿಸಿ ಎಂದು ಮನವಿ ಕೂಡ ಅಭ್ಯರ್ಥಿಯ ಬದಲಾವಣೆ

error: Content is protected !!