Warning: Undefined array key "options" in /home/nagendra/public_html/content/plugins/elementor-pro/modules/theme-builder/widgets/site-logo.php on line 124

512 ಕೆಜಿ ಈರುಳ್ಳಿ‌ ಮಾರಿದ್ರು ರೈತನಿಗೆ ಸಿಕ್ಕಿದ್ದು 2 ರೂಪಾಯಿ ಲಾಭ..!

Facebook
Twitter
Telegram
WhatsApp

ಲಾಭ ಬರುತ್ತೋ.. ಬರಲ್ವೋ.. ಅದನ್ನೆಲ್ಲಾ ರೈತ ಮೊದಲೇ ಯೋಚಿಸುವುದಿಲ್ಲ. ಬದಲಿಗೆ ಮೊದಲು ಕಷ್ಟಪಟ್ಟು, ಶ್ರಮವಹಿಸಿ ಬೆಳೆ ಬೆಳೆಯುತ್ತಾನೆ. ಫಸಲು ಬಂದ ಮೇಲೆ ಲಾಭ ನಷ್ಟದ ಬಗ್ಗೆ ಯೋಚನೆ ಮಾಡುತ್ತಾನೆ. ಇದು ರೈತನ ಕಾಯಕ‌. ಆದ್ರೆ ಆ ರೈತನಿಗೆ ಕೆಲವೊಂದು ಸಲ ಲಕ್ ಅನ್ನೋದು ಕೈ ಕೊಟ್ಟು ಬಿಡುತ್ತದೆ. ಅಂಥದ್ದೇ ಪರಿಸ್ಥಿತಿ ಇಲ್ಲೊಬ್ಬ ರೈತನಿಗೆ ಒದಗಿದೆ. ಅಳುವಂತೆಯೂ ಇಲ್ಲ, ಸಮಾಧಾನ ಮಾಡಿಕೊಳ್ಳುವಂತೆಯೂ ಇಲ್ಲ. ಯಾಕಂದ್ರೆ ಅಲ್ಲಿ ರೈತನಿಗೆ ನಷ್ಟವಾಗಿಲ್ಲ. ಬದಲಿಗೆ ಎರಡು ರೂಪಾಯಿ ಲಾಭ ಬಂದಿದೆ.

ಸೊಲ್ಲಾಪುರದ ಬಾರ್ಶಿ ತಹಸಿಲ್ ನ ನಿವಾಸಿ ರಾಜೇಂದ್ರ ಚೌಹಾಣ್ ಎಂಬ ರೈತ ಈರುಳ್ಳಿಯನ್ನು ಬೆಳೆದಿದ್ದರು. ತಮ್ಮ ಊರಿನ ಮಾರುಕಟ್ಟೆಗೆ ಹಾಕಿದರೆ ಅಷ್ಟೊಂದು ಬೆಲೆ ಸಿಗಲ್ಲ ಎಂಬ ಕಾರಣಕ್ಕೆ ದೂರದ ಸುಮಾರು 70 ಕಿಲೋ ಮೀಟರ್ ದೂರದಲ್ಲಿರುವ ಸೊಲ್ಲಾಪುರ ಮಾರುಕಟ್ಟೆಗೆ ಈರುಳ್ಳಿಯನ್ನು ತಂದಿದ್ದರು. ಬಸ್ ಖರ್ಚು, ಕೂಲಿಗಾರನ ಖರ್ಚು ಅಂತ ಸಿಕ್ಕಾಪಟ್ಟೆ ಖರ್ಚು ಕೂಡ ಆಗಿತ್ತು. ಆದರೆ ರೈತನಿಗೆ ಬಂದ ಲಾಭ ನೋಡಿದ್ರೆ ಎಲ್ಲರೂ ಶಾಕ್ ಆಗಬೇಕು.

ಸುಮಾರು 512ಕೆಜಿ ಈರುಳ್ಳಿಯನ್ನು ರೈತ ಮಾರಾಟ ಮಾಡಿದ್ದ. ಆದ್ರೆ ರೈತನ ನತಾದೃಷ್ಟ ಎಂಬಂತೆ ಈರುಳ್ಳಿ ಬೆಲೆ ಕುಸಿತವಾಗಿತ್ತು. ಇದರಿಂದ ಒಂದು ಕೆಜಿಯನ್ನು ಒಂದು ರೂಪಾಯಿಗೆ ಮಾರಾಟ ಮಾಡಿದ್ದರು. ಹೀಗಾಗಿ 512 ರೂಪಾಯಿ ಹಣ ಬಂದಿದೆ. ಅದರಲ್ಲಿ ಎಲ್ಲಾ ಖರ್ಚು ವೆಚ್ಚಗಳನ್ನು ಕಳೆದು ನೋಡಿದಾಗ ರೈತನಿಗೆ ಸಿಕ್ಕಿದ್ದು, ಉಳಿದಿದ್ದು ಎರಡು ರೂಪಾಯಿ ಮಾತ್ರ. ಅದನ್ನು ಚೆಕ್ ನಲ್ಲಿಯೇ ನೀಡಿದ್ದಾರೆ.

Facebook
Twitter
Telegram
WhatsApp
suddionenews

suddionenews

Leave a Comment

Top Stories

ಇಂದಿನ ರಾಶಿ ಭವಿಷ್ಯ. ಕರ್ಕಾಟಕ ರಾಶಿಯವರಿಗೆ ಅಷ್ಟಮ ಶನಿ ಮತ್ತು ಸಿಂಹ ರಾಶಿಯವರಿಗೆ ಸಪ್ತಮ ಶನಿ ಏನು ಸಮಸ್ಯೆ ಕಾಡಬಹುದು?

ಇಂದಿನ ರಾಶಿ ಭವಿಷ್ಯ. ಕರ್ಕಾಟಕ ರಾಶಿಯವರಿಗೆ ಅಷ್ಟಮ ಶನಿ ಮತ್ತು ಸಿಂಹ ರಾಶಿಯವರಿಗೆ ಸಪ್ತಮ ಶನಿ ಏನು ಸಮಸ್ಯೆ ಕಾಡಬಹುದು? ಸೋಮವಾರ ರಾಶಿ ಭವಿಷ್ಯ -ಮೇ-6,2024 ಸೂರ್ಯೋದಯ: 05:51, ಸೂರ್ಯಾಸ್ತ : 06:34 ಶಾಲಿವಾಹನ

ಹಿರಿಯೂರು | ಬೈಕ್ ಅಪಘಾತ, ಸ್ಥಳದಲ್ಲೇ ಓರ್ವ ಸಾವು..!

ಸುದ್ದಿಒನ್,  ಹಿರಿಯೂರು, ಮೇ. 05 : ನಗರದ ರಾಷ್ಟ್ರೀಯ ಹೆದ್ದಾರಿ ನಾಲ್ಕರ ಆಲೂರು ಕ್ರಾಸ್ ಚಾನೆಲ್ ಬಳಿ ಸ್ಕೂಟಿ ಮತ್ತು ಬೈಕ್ ನಡುವೆ ನಡೆದ ಅಪಘಾತದಲ್ಲಿ ಓರ್ವ ವ್ಯಕ್ತಿ ಸ್ಥಳದಲ್ಲೇ ಸಾವನ್ನಪ್ಪಿದ್ದು, ಮೂವರು ಗಾಯಗೊಂಡ

ಪ್ರಜ್ವಲ್ ರೇವಣ್ಣ ಜೊತೆ ವಿಡಿಯೋದಲ್ಲಿದ್ದ ಮಹಿಳಾ ಅಧಿಕಾರಿಗಳಿಗೂ ಸಂಕಷ್ಟ : ಎಸ್ಐಟಿಯಿಂದ ನೋಟೀಸ್

ಬೆಂಗಳೂರು: ಪ್ರಜ್ವಲ್ ರೇವಣ್ಣ ಅಶ್ಲೀಲ ವಿಡಿಯೋದಲ್ಲಿ ಸರ್ಕಾರಿ ಅಧಿಕಾರಿಗಳು ಕೂಡ ಇರುವುದು ಗಮನಕ್ಕೆ ಬಂದಿದೆ. ಪೊಲೀಸ್ ಅಧಿಕಾರಿ, ಅರಣ್ಯಾಧಿಕಾರಿ, ಬೆಂಗಳೂರಿನ ಎಇಇ ಫೋಟೋ, ವಿಡಿಯೋಗಳು ವೈರಲ್ ಆಗಿದ್ದವು. ಇದೀಗ ಅವರಿಗೆಲ್ಲಾ ಟೆನ್ಶನ್ ಶುರುವಾಗಿದೆ. ಎಸ್ಐಟಿ

error: Content is protected !!