Kannada news ಚಿತ್ರದುರ್ಗ ದಾವಣಗೆರೆ ಬೆಂಗಳೂರು ರಾಜಕೀಯ ಚುನಾವಣೆ ಮಳೆ ಕ್ರಿಕೆಟ್ ಭಾರತ ಚಿನ್ನ ಬೆಳ್ಳಿ ಹವಾಮಾನ ಕ್ರಿಕೆಟ್  ಕನ್ನಡ ನ್ಯೂಸ್

512 ಕೆಜಿ ಈರುಳ್ಳಿ‌ ಮಾರಿದ್ರು ರೈತನಿಗೆ ಸಿಕ್ಕಿದ್ದು 2 ರೂಪಾಯಿ ಲಾಭ..!

---Advertisement---

ಲಾಭ ಬರುತ್ತೋ.. ಬರಲ್ವೋ.. ಅದನ್ನೆಲ್ಲಾ ರೈತ ಮೊದಲೇ ಯೋಚಿಸುವುದಿಲ್ಲ. ಬದಲಿಗೆ ಮೊದಲು ಕಷ್ಟಪಟ್ಟು, ಶ್ರಮವಹಿಸಿ ಬೆಳೆ ಬೆಳೆಯುತ್ತಾನೆ. ಫಸಲು ಬಂದ ಮೇಲೆ ಲಾಭ ನಷ್ಟದ ಬಗ್ಗೆ ಯೋಚನೆ ಮಾಡುತ್ತಾನೆ. ಇದು ರೈತನ ಕಾಯಕ‌. ಆದ್ರೆ ಆ ರೈತನಿಗೆ ಕೆಲವೊಂದು ಸಲ ಲಕ್ ಅನ್ನೋದು ಕೈ ಕೊಟ್ಟು ಬಿಡುತ್ತದೆ. ಅಂಥದ್ದೇ ಪರಿಸ್ಥಿತಿ ಇಲ್ಲೊಬ್ಬ ರೈತನಿಗೆ ಒದಗಿದೆ. ಅಳುವಂತೆಯೂ ಇಲ್ಲ, ಸಮಾಧಾನ ಮಾಡಿಕೊಳ್ಳುವಂತೆಯೂ ಇಲ್ಲ. ಯಾಕಂದ್ರೆ ಅಲ್ಲಿ ರೈತನಿಗೆ ನಷ್ಟವಾಗಿಲ್ಲ. ಬದಲಿಗೆ ಎರಡು ರೂಪಾಯಿ ಲಾಭ ಬಂದಿದೆ.

ಸೊಲ್ಲಾಪುರದ ಬಾರ್ಶಿ ತಹಸಿಲ್ ನ ನಿವಾಸಿ ರಾಜೇಂದ್ರ ಚೌಹಾಣ್ ಎಂಬ ರೈತ ಈರುಳ್ಳಿಯನ್ನು ಬೆಳೆದಿದ್ದರು. ತಮ್ಮ ಊರಿನ ಮಾರುಕಟ್ಟೆಗೆ ಹಾಕಿದರೆ ಅಷ್ಟೊಂದು ಬೆಲೆ ಸಿಗಲ್ಲ ಎಂಬ ಕಾರಣಕ್ಕೆ ದೂರದ ಸುಮಾರು 70 ಕಿಲೋ ಮೀಟರ್ ದೂರದಲ್ಲಿರುವ ಸೊಲ್ಲಾಪುರ ಮಾರುಕಟ್ಟೆಗೆ ಈರುಳ್ಳಿಯನ್ನು ತಂದಿದ್ದರು. ಬಸ್ ಖರ್ಚು, ಕೂಲಿಗಾರನ ಖರ್ಚು ಅಂತ ಸಿಕ್ಕಾಪಟ್ಟೆ ಖರ್ಚು ಕೂಡ ಆಗಿತ್ತು. ಆದರೆ ರೈತನಿಗೆ ಬಂದ ಲಾಭ ನೋಡಿದ್ರೆ ಎಲ್ಲರೂ ಶಾಕ್ ಆಗಬೇಕು.

ಸುಮಾರು 512ಕೆಜಿ ಈರುಳ್ಳಿಯನ್ನು ರೈತ ಮಾರಾಟ ಮಾಡಿದ್ದ. ಆದ್ರೆ ರೈತನ ನತಾದೃಷ್ಟ ಎಂಬಂತೆ ಈರುಳ್ಳಿ ಬೆಲೆ ಕುಸಿತವಾಗಿತ್ತು. ಇದರಿಂದ ಒಂದು ಕೆಜಿಯನ್ನು ಒಂದು ರೂಪಾಯಿಗೆ ಮಾರಾಟ ಮಾಡಿದ್ದರು. ಹೀಗಾಗಿ 512 ರೂಪಾಯಿ ಹಣ ಬಂದಿದೆ. ಅದರಲ್ಲಿ ಎಲ್ಲಾ ಖರ್ಚು ವೆಚ್ಚಗಳನ್ನು ಕಳೆದು ನೋಡಿದಾಗ ರೈತನಿಗೆ ಸಿಕ್ಕಿದ್ದು, ಉಳಿದಿದ್ದು ಎರಡು ರೂಪಾಯಿ ಮಾತ್ರ. ಅದನ್ನು ಚೆಕ್ ನಲ್ಲಿಯೇ ನೀಡಿದ್ದಾರೆ.

suddionenews

ಕನ್ನಡ ಸುದ್ದಿಗಳ ವಿಶ್ವಾಸಾರ್ಹ ಮೂಲ — suddione.com ನಲ್ಲಿ ಓದಿ ರಾಷ್ಟ್ರೀಯ, ಅಂತರರಾಷ್ಟ್ರೀಯ, ರಾಜಕೀಯ, ಕ್ರೀಡೆ, ಮನರಂಜನೆ, ವಾಣಿಜ್ಯ, ಶಿಕ್ಷಣ ಮತ್ತು ತಂತ್ರಜ್ಞಾನಕ್ಕೆ ಸಂಬಂಧಿಸಿದ ಪ್ರತಿಯೊಂದು ಪ್ರಮುಖ ಅಪ್‌ಡೇಟ್. ನೀವು ಯಾವಾಗಲೂ ಅಪ್‌ಡೇಟ್ ಆಗಿರಲು ನಾವು ವೇಗವಾದ, ನಿಖರವಾದ ಮತ್ತು ನಿಷ್ಪಕ್ಷಪಾತವಾದ ಸುದ್ದಿಗಳನ್ನು ಸರಳ ಹಾಗೂ ಸ್ಪಷ್ಟ ಭಾಷೆಯಲ್ಲಿ ನೀಡುತ್ತೇವೆ. ಸಂಪಾದಕರು: ನಾಗೇಂದ್ರ ರೆಡ್ಡಿ ಪಿ.ಎಲ್

Join WhatsApp

Join Now

Join Telegram

Join Now

Leave a Comment

🏫 ಅಡ್ಮಿಷನ್ ಓಪನ್
🔒

ಇಂಡಿಯನ್ ಇಂಟರ್ ನ್ಯಾಷನಲ್ ಸ್ಕೂಲ್

ಸ್ವಾಗತ...