Warning: Undefined array key "options" in /home/nagendra/public_html/content/plugins/elementor-pro/modules/theme-builder/widgets/site-logo.php on line 124

512 ಕೆಜಿ ಈರುಳ್ಳಿ‌ ಮಾರಿದ್ರು ರೈತನಿಗೆ ಸಿಕ್ಕಿದ್ದು 2 ರೂಪಾಯಿ ಲಾಭ..!

Facebook
Twitter
Telegram
WhatsApp

ಲಾಭ ಬರುತ್ತೋ.. ಬರಲ್ವೋ.. ಅದನ್ನೆಲ್ಲಾ ರೈತ ಮೊದಲೇ ಯೋಚಿಸುವುದಿಲ್ಲ. ಬದಲಿಗೆ ಮೊದಲು ಕಷ್ಟಪಟ್ಟು, ಶ್ರಮವಹಿಸಿ ಬೆಳೆ ಬೆಳೆಯುತ್ತಾನೆ. ಫಸಲು ಬಂದ ಮೇಲೆ ಲಾಭ ನಷ್ಟದ ಬಗ್ಗೆ ಯೋಚನೆ ಮಾಡುತ್ತಾನೆ. ಇದು ರೈತನ ಕಾಯಕ‌. ಆದ್ರೆ ಆ ರೈತನಿಗೆ ಕೆಲವೊಂದು ಸಲ ಲಕ್ ಅನ್ನೋದು ಕೈ ಕೊಟ್ಟು ಬಿಡುತ್ತದೆ. ಅಂಥದ್ದೇ ಪರಿಸ್ಥಿತಿ ಇಲ್ಲೊಬ್ಬ ರೈತನಿಗೆ ಒದಗಿದೆ. ಅಳುವಂತೆಯೂ ಇಲ್ಲ, ಸಮಾಧಾನ ಮಾಡಿಕೊಳ್ಳುವಂತೆಯೂ ಇಲ್ಲ. ಯಾಕಂದ್ರೆ ಅಲ್ಲಿ ರೈತನಿಗೆ ನಷ್ಟವಾಗಿಲ್ಲ. ಬದಲಿಗೆ ಎರಡು ರೂಪಾಯಿ ಲಾಭ ಬಂದಿದೆ.

ಸೊಲ್ಲಾಪುರದ ಬಾರ್ಶಿ ತಹಸಿಲ್ ನ ನಿವಾಸಿ ರಾಜೇಂದ್ರ ಚೌಹಾಣ್ ಎಂಬ ರೈತ ಈರುಳ್ಳಿಯನ್ನು ಬೆಳೆದಿದ್ದರು. ತಮ್ಮ ಊರಿನ ಮಾರುಕಟ್ಟೆಗೆ ಹಾಕಿದರೆ ಅಷ್ಟೊಂದು ಬೆಲೆ ಸಿಗಲ್ಲ ಎಂಬ ಕಾರಣಕ್ಕೆ ದೂರದ ಸುಮಾರು 70 ಕಿಲೋ ಮೀಟರ್ ದೂರದಲ್ಲಿರುವ ಸೊಲ್ಲಾಪುರ ಮಾರುಕಟ್ಟೆಗೆ ಈರುಳ್ಳಿಯನ್ನು ತಂದಿದ್ದರು. ಬಸ್ ಖರ್ಚು, ಕೂಲಿಗಾರನ ಖರ್ಚು ಅಂತ ಸಿಕ್ಕಾಪಟ್ಟೆ ಖರ್ಚು ಕೂಡ ಆಗಿತ್ತು. ಆದರೆ ರೈತನಿಗೆ ಬಂದ ಲಾಭ ನೋಡಿದ್ರೆ ಎಲ್ಲರೂ ಶಾಕ್ ಆಗಬೇಕು.

ಸುಮಾರು 512ಕೆಜಿ ಈರುಳ್ಳಿಯನ್ನು ರೈತ ಮಾರಾಟ ಮಾಡಿದ್ದ. ಆದ್ರೆ ರೈತನ ನತಾದೃಷ್ಟ ಎಂಬಂತೆ ಈರುಳ್ಳಿ ಬೆಲೆ ಕುಸಿತವಾಗಿತ್ತು. ಇದರಿಂದ ಒಂದು ಕೆಜಿಯನ್ನು ಒಂದು ರೂಪಾಯಿಗೆ ಮಾರಾಟ ಮಾಡಿದ್ದರು. ಹೀಗಾಗಿ 512 ರೂಪಾಯಿ ಹಣ ಬಂದಿದೆ. ಅದರಲ್ಲಿ ಎಲ್ಲಾ ಖರ್ಚು ವೆಚ್ಚಗಳನ್ನು ಕಳೆದು ನೋಡಿದಾಗ ರೈತನಿಗೆ ಸಿಕ್ಕಿದ್ದು, ಉಳಿದಿದ್ದು ಎರಡು ರೂಪಾಯಿ ಮಾತ್ರ. ಅದನ್ನು ಚೆಕ್ ನಲ್ಲಿಯೇ ನೀಡಿದ್ದಾರೆ.

Facebook
Twitter
Telegram
WhatsApp
suddionenews

suddionenews

Leave a Comment

Top Stories

ಮೈಸೂರಿನಲ್ಲಿ ಅಭ್ಯರ್ಥಿ ಬದಲಾಯಿಸಿದ್ದೇಕೆ..? ಯದುವೀರ್ ಗೆ ಟಿಕೆಟ್ ಕೊಟ್ಟಿದ್ದೇಕೆ..?: ಸ್ಪಷ್ಟನೆ ನೀಡಿದ ವಿಜಯೇಂದ್ರ

ಬೆಂಗಳೂರು: ಲೋಕಸಭಾ ಚುನಾವಣೆಯ ಪ್ರಚಾರ ಭರ್ಜರಿಯಾಗಿ ನಡೆಯುತ್ತಿದೆ. ಇಂದು ಬಹಿರಂಗ ಪ್ರಚಾರಕ್ಕೆ ತೆರೆ ಬೀಳಲಿದೆ. ಅದರಲ್ಲೂ ಈ ಬಾರಿ ಬಿಜೆಪಿಯಲ್ಲಿ ಹೊಸಬರಿಗೆ ಹೆಚ್ಚಿನ ಆದ್ಯತೆ ನೀಡಲಾಗಿದೆ. ಘಟಾನುಘಟಿಗಳಿಗೆ ಟಿಕೆಟ್ ಮಿಸ್ ಆಗಿದೆ. ಮೈಸೂರಿನಿಂದ ಪ್ರತಾಪ್

ಡಾ.ರಾಜ್ 95ನೇ ಹುಟ್ಟುಹಬ್ಬ : ಸಮಾಧಿಗೆ ಪೂಜೆ ಸಲ್ಲಿಸಿದ ರಾಘಣ್ಣ, ಅಶ್ವಿನಿ, ವಂದಿತಾ

ಬೆಂಗಳೂರು: ಇಂದು ವರನಟ ಡಾ.ರಾಜ್ ಕುಮಾರ್ ಅವರ 95ನೇ ವರ್ಷದ ಹುಟ್ಟುಹಬ್ಬ. ಅವರ ಅಭಿಮಾನಿಗಳು ರಾಜ್ಯಾದ್ಯಂತ ಈ ಸಂಭ್ರಮವನ್ನು ಆಚರಿಸುತ್ತಿದ್ದಾರೆ. ಸಮಾಜಮುಖಿ ಕೆಲಸಗಳನ್ನು ಮಾಡುತ್ತಾ, ಅಣ್ಣಾವ್ರ ಹುಟ್ಟುಹಬ್ಬವನ್ನು ಸಾರ್ಥಕ ಮಾಡುತ್ತಿದ್ದಾರೆ. ಅವರ ಅಭಿಮಾನಿಗಳಿಂದ ಪ್ರತಿ

Summer Migraine: ಬಿಸಿಲಿಗೆ ಹೋದಾಗ ಈ ನಿಯಮಗಳನ್ನು ಪಾಲಿಸಿ : ಮೈಗ್ರೇನ್‌ ನಿಂದ ದೂರವಿರಿ….!

ಸುದ್ದಿಒನ್ : ಈ ಬೇಸಿಗೆಯಲ್ಲಿ ಬಿಸಿಲು ಜೋರಾಗಿದೆ. ತಾಪಮಾನವು 37 ರಿಂದ 40 ಡಿಗ್ರಿ  ಆಸುಪಾಸಿನಲ್ಲಿದೆ. ವಿಪರೀತ ಬಿಸಿಲಿನಿಂದ ಮಕ್ಕಳಿಂದ ವೃದ್ಧರವರೆಗೆ ಬಹುತೇಕ ಎಲ್ಲರೂ ಅನಾರೋಗ್ಯಕ್ಕೆ ತುತ್ತಾಗುತ್ತಿದ್ದಾರೆ. ಆದರೆ ಮೈಗ್ರೇನ್ ಪೀಡಿತರು ಸ್ವಲ್ಪ ಹೆಚ್ಚು

error: Content is protected !!