Notice: Undefined index: options in /home/nagendra/public_html/content/plugins/elementor-pro/modules/theme-builder/widgets/site-logo.php on line 124

ಎದೆ ಮೇಲೂ ವಿಜಿನೆ..ಕೈ ಮೇಲೂ ವಿಜಿನೆ..ಹೇಗಿದೆ ಗೊತ್ತಾ ‘ಸಲಗ’ ಕ್ರೇಜ್..?

Facebook
Twitter
Telegram
WhatsApp

ಒಂದು ಸಿನಿಮಾ ರಿಲೀಸ್ ಗೂ ಮೊದಲೇ ಸೌಂಡ್ ಮಾಡುತ್ತೆ ಅಂದ್ರೆ ಅದು ಸುಮ್ನೆ ಅಲ್ಲ..ಆ ಸಿನಿಮಾ ಹಿಂದಿನ ಪರಿಶ್ರಮವೂ ಅಷ್ಟೇ ಇರುತ್ತೆ..ಸದ್ಯಕ್ಕೆ ಗಾಂಧಿನಗರವನ್ನಷ್ಟೇ ಅಲ್ಲ ಇಡೀ ಸಿನಿಮಾ ಭಕ್ತಕುಲವೇ ಕಾತುರದ ಕಣ್ಗಳಿಂದ ನೋಡುವಂತೆ ಮಾಡಿರೋ ಸಿನಿಮಾ ಸಲಗ.

ಎಸ್..ದುನಿಯಾ ವಿಜಯ್ ಮೊದಲ ನಿರ್ದೇಶನದ ಸಿನಿಮಾ ಕ್ರೇಜ್ ಎಷ್ಟಿದೆ ಅನ್ನೋದನ್ನ ನಾವ್ ಹೇಳ್ಬೇಕಿಲ್ಲ..ಇಡೀ ಸೋಷಿಯಲ್ ಮೀಡಿಯಾದಲ್ಲೆಲ್ಲಾ ಆ ಕ್ರೇಜ್ ಕಣ್ಣಿಗೆ ರಾಚುವಂತೆ ಅದಾಗಲೇ ನಿಮ್ಗೂ ಬಿದ್ದಾಗಿದೆ ಅನ್ಸುತ್ತೆ. ಕರಿಚಿರತೆಗಾಗಿ ಕಾಯ್ತಿರೋ ಭಕ್ತಗಣ ಸಲಗ ಸಲಗ ಅಂತ ಗೀಳಿಡ್ತಾ ಇದ್ದಾರೆ.ನಾಡದೇವಿ ಮೆರವಣಿಗೆ ಹೊರಟಾಗ ಸಲಗ ಸೌಂಡ್ ಮಾಡ್ಲೇಬೇಕಲ್ಲ. ಎಸ್. ಅಂದೇ ಅಂದ್ರೆ ಅಕ್ಟೋಬರ್14 ರಂದೇ ಸಲಗ ಸಿನಿಮಾ ರಾಜ್ಯಾದ್ಯಂತ ಚಿತ್ರಮಂದಿರಗಳಲ್ಲಿ ಪ್ರದರ್ಶನಕ್ಕೆ ಸಜ್ಜಾಗಿದೆ. ಈಗಾಗ್ಲೇ ಮೈನ್ ಥಿಯೇಟರ್ ಗಳಲ್ಲಿ ಕಟೌಟ್ ಎದ್ದು ನಿಂತಿದೆ.

ಜಿಲ್ಲೆಜಿಲ್ಲೆಗಳಲ್ಲೂ ಸಲಗ ಹವಾ ಜೋರಾಗಿದೆ. ದುನಿಯಾ ವಿಜಿ ಹುಡುಗ್ರು ಇನ್ನು ವಾರ ಇರುವಾಗ್ಲೇ ಹಬ್ಬ ಶುರು ಮಾಡವ್ರೆ. ಎಲ್ಲೆಲ್ಲೂ ಸಲಗನ ಸೌಂಡ್ ಕೇಳ್ತಾ ಇದೆ. ಅಭಿಮಾನಿಗಳು ಕೈ ಮೇಲೆ ಹಚ್ಚೆ ಹಾಕಿಸಿಕೊಂಡು ಅಭಿಮಾನ ಮೆರೀತಾ ಇದ್ದಾರೆ. ಅಷ್ಟೇ ಅಲ್ಲ ಪಕ್ಕಾ ಅಭಿಮಾನಿಯೊಬ್ಬ ಎದೆ ಮೇಲೆ ‘ಸಲಗ’ ಟ್ಯಾಟೂ ಹಾಕಿಸಿಕೊಂಡಿದ್ದಾನೆ. 10 ಕ್ಕೂ ಹೆಚ್ಚು ಅಭಿಮಾನಿಗಳು ಈ ರೀತಿ ಟ್ಯಾಟೂ ಹಾಕಿಸಿಕೊಂಡು ತಮ್ಮ ಅಭಿಮಾನವನ್ನ ತೋರಿದ್ದಾರೆ. ಸಲಗನ ಕ್ರೇಜ್ ಗಡಿದಾಟಿ ಹೋಗಿದೆ. ಗೋವಾದಲ್ಲೆಲ್ಲಾ ತಮ್ಮ ಅಭಿಮಾನ ತೋರಿಸುತ್ತಿದ್ದಾರೆ. ಇದು ಸಹಜವಾಗಿಯೇ ವಿಜಿಯನ್ನ ಭಾವುಕರನ್ನಾಗಿದೆ.

ಸಿನಿಮಾದ ಟ್ರೇಲರ್, ಸಾಂಗ್ಸ್ ಹೆಚ್ಚಿಸಿರೋ ಕೌತುಕಕ್ಕೆ ತೆರೆ ಬೀಳೊದಕ್ಕೆ ಇನ್ನೊಂದೆ ವಾರ ಬಾಕಿ ಇದೆ. ಅದಕ್ಕಾಗಿಯೇ ಗಂಧದ ಗುಡಿ ಕೂಡ ಕಾಯ್ತಾ ಕುಳಿತಿದೆ. ಇಡೀ ಭಕ್ತ ಗಣ ಲೆಕ್ಕಾ ಹಾಕ್ತಾ ಇದ್ದಾರೆ. ಸಿನಿಮಾಗೆ ಎ ಸರ್ಟಿಫಿಕೇಟ್ ಕೂಡ ಸಿಕ್ಕಿದೆ. ಇನ್ನೇನಿದ್ರು ಥಿಯೇಟರ್ ನಲ್ಲಿ ವಾದ್ಯ ಮೇಳದೊಂದಿಗೆ ಸಲಗನ ಆರ್ಭಟ ನೋಡೋದೊಂದೆ ಬಾಕಿ.

Facebook
Twitter
Telegram
WhatsApp
suddionenews

suddionenews

Leave a Comment

Top Stories

ಚಿತ್ರದುರ್ಗ | ಚಲಪತಿ ನಿಧನ

  ಸುದ್ದಿಒನ್, ಚಿತ್ರದುರ್ಗ, ಸೆಪ್ಟೆಂಬರ್. 28 :ನಗರದ ತುರುವನೂರು ರಸ್ತೆ ನಿವಾಸಿ, ಶಿಕ್ಷಣ ಇಲಾಖೆ ನಿವೃತ್ತ ನೌಕರ ಚಲಪತಿ (66) ಅನಾರೋಗ್ಯದಿಂದ ಶನಿವಾರ ರಾತ್ರಿ ನಿಧನರಾದರು. ಮೃತರು ಪತ್ನಿ, ವಿಜಯಕರ್ನಾಟಕ ಚಿತ್ರದುರ್ಗ ಜಿಲ್ಲಾ ಪ್ರಸರಾಂಗ

ಮನು ಕುಲದ ಆಯಸ್ಸನ್ನು ಹೆಚ್ಚಿಸಿದ್ದು ವೈದ್ಯರು: ಸಿ.ಎಂ.ಸಿದ್ದರಾಮಯ್ಯ ಪ್ರಶಂಸೆ

ಮೈಸೂರು ಸೆ 28 : ವೈದ್ಯರು ಮತ್ತು ವೈದ್ಯಕೀಯ ಕ್ಷೇತ್ರ ಮನುಕುಲದ ಆಯಸ್ಸನ್ನು ಹೆಚ್ಚಿಸುವಲ್ಲಿ ಯಶಸ್ವಿಯಾಗಿದೆ ಎಂದು ಸಿ.ಎಂ.ಸಿದ್ದರಾಮಯ್ಯ ಪ್ರಶಂಸೆ ವ್ಯಕ್ತಪಡಿಸಿದರು.   ಮೈಸೂರು ವೈದ್ಯಕೀಯ ಕಾಲೇಜು ಮತ್ತು ಸಂಶೋಧನಾ ಸಂಸ್ಥೆಯ ಶತಮಾನೋತ್ಸವದ ಸಮಾರೋಪ

ಈ ಬಾರಿಯ ಬಿಗ್ ಬಾಸ್ ಗೆ ಹೋಗ್ತಿದ್ದಾರೆ ಈ ಸ್ಟಾರ್ ಗಳು : ಕನ್ಫರ್ಮ್ ಸುದ್ದಿ ಇದು..!

ಬೆಂಗಳೂರು : ಬಿಗ್ ಬಾಸ್ ಕನ್ನಡ‌ ಸೀಸನ್ 11ಗೆ ಕ್ಷಣಗಣನೆ ಶುರುವಾಗಿದೆ. ಬಿಗ್ ಬಾಸ್ ಮನೆಯೊಳಗೆ ಹೋಗೋದು ಯಾರು ಎಂಬ ಕುತೂಹಲ ಇಡೀ ಕರ್ನಾಟಕದ ಜನತೆಗೆ ಇದೆ. ಇಂದು ಸಂಜೆ ಅದಕ್ಕೆ ಕೊಂಚ ತೆರೆ

error: Content is protected !!