ಕಿಚ್ಚನ ವೇದಿಕೆ ಬಂತು ಗಟ್ಟಿ ಹಾಲಿನ ವಿಚಾರ..!

suddionenews
1 Min Read

ಬಿಗ್ ಬಾಸ್ ಮನೆಯಲ್ಲಿ ಕಾಮಿಡಿ, ಪ್ರತಿಭೆ ಅನಾವರಣವಾದಂತೆ ತಾಳ್ಮೆಯ ಕಟ್ಟೆ ಒಡೆದು, ಕೋಪವೂ ಅನಾವರಣವಾಗುತ್ತಾ ಇರುತ್ತದೆ. ಈ ವಾರ ಬಿಗ್ ಬಾಸ್ ಮನೆಯಲ್ಲಿ ಹಲವು ವಿಚಾರಗಳು ಗಮನ ಸೆಳೆದವು. ಅದರಲ್ಲೂ ಎಲ್ಲರ ಮನೆಯವರು ಬಂದು ಮಕ್ಕಳ ಜೊತೆ ಸಮಯ ಕಳೆದರು. ವಾರಪೂರ್ತಿ ಬಿಗ್ ಬಾಸ್ ಸ್ಪರ್ಧಿಗಳ ಮನಸ್ಸು ಉಲ್ಲಾಸದಿಂದ ಕುಣಿದಾಡುತ್ತಾ ಇತ್ತು. ಸುಮಾರು 69 ದಿನಗಳ ಕಾಲ ಮನೆಯೊಳಗೆ ಅವರವರೇ ಇದ್ದು, ಈಗ ಒಬ್ಬೊಬ್ಬರೆ ಅದರಲ್ಲೂ ಮನೆ ಮಂದಿ ಬರುತ್ತಿದ್ದಾಗ ಖುಷ ಆಗದೆ ಇರುತ್ತದೆಯೆ.

ಮನೆ ಮಂದಿ ಬಂದಿದ್ದು ಒಂದು ವಿಚಾರವಾದರೆ ಇನ್ನು ಹಾಲಿಗಾಗಿ ನಡೆದ ಕಿತ್ತಾಟ. ಬಿಗ್ ಬಾಸ್ ಎಲ್ಲರಿಗೂ ಒಂದೊಂದು ಪ್ಯಾಕೆಟ್ ಹಾಲನ್ನು ಕಳುಹಿಸಿತ್ತು. ಒಟ್ಟಿಗೆ ಟೀ ಮಾಡಿದರೆ ಮೊಸರು ಮಾಡುವುದಕ್ಕೂ ಅನುಕೂಲವಾಗುತ್ತದೆ ಎಂದು ಎಲ್ಲರೂ ಚರ್ಚೆಯಲ್ಲಿದ್ದರು. ಆಗ ಅಮೂಲ್ಯ ನನಗೆ ನನ್ನ ಒಂದು ಪ್ಯಾಕ್ ಕೊಟ್ಟು ಬಿಡಿ. ಗಟ್ಟಿ ಹಾಲು ಬೇಕು ನೀರು ಹಾಕಿದರೆ ಆಗಲ್ಲ ಅಂದ್ರು. ಆಗ ರೂಪೇಶ್ ರಾಜಣ್ಣ ಹಾಗೂ ಸಂಬರ್ಗಿ ಅಪೋಸ್ ಮಾಡಿದ್ದರು.

ಇವತ್ತು ವಾರದ ಕಥೆ ಕಿಚ್ಚನ ಜೊತೆಯಲ್ಲಿ ಇಂದು ಮತ್ತೆ ಹಾಲಿನ ವಿಚಾರವನ್ನು ಕಿಚ್ಚ ಸುದೀಪ್ ಪ್ರಸ್ತಾಪ ಮಾಡಿದ್ದಾರೆ. ಅಮೂಲ್ಯ ಅವರೇ ನಿಮಗೆ ಗಟ್ಟಿ ಹಾಲು ಬೇಕು. ನನ್ನ ಪ್ಯಾಕ್ ನನಗೆ ಕೊಡಿ. ನಿಮಗೆ ಹೊಂದಿಕೊಂಡು ಹೋಗುವುದಕ್ಕೆ ತೊಂದರೆಯಾಗುತ್ತಾ ಇದೆಯಾ ಎಂದು ಕೇಳಿದ್ದಾರೆ. ಆಗ ಅಮೂಲ್ಯ, ಸಿಗ್ತಾ ಇದ್ದದ್ದು ಒಂದು ಟೀ. ನಂಗೆ ಗಟ್ಟಿ ಹಾಲು ಬೇಕಿತ್ತು. ನಂಗೆ ಅದೆಲ್ಲ ಸುಪಿರಿಟಿ ಫಾರ್ಮಾಲಿಟಿಯ ಪರಮಾವಧಿ ಅನ್ನಿಸ್ತು ಎಂದು ಸಂಬರ್ಗಿ ಹೇಳಿದರೆ, ನಮ್ಗೆ ಬೇಕಾದಾಗ ಹಾಲನ್ನು ಎತ್ತಿಕೊಂಡು ಕುಡಿಯುತ್ತೀವಿ ಎಂದು ರಾಕಿ ಸಪೋರ್ಟ್ ಮಾಡಿದರು. ಬಳಿಕ ರಾಜಣ್ಣ, ನಾವೂ ಅಗ್ರಿ ಆದ್ವಿ ಸರ್ ನಾಳೆಯಿಂದ ಎಲ್ಲರು ಜೊತೆಗೆ ಕುಡಿಯೋಣಾ ಅಂತ ಎಂದಾಗ ಅಮೂಲ್ಯ ಆಕ್ರೋಶಗೊಂಡಿದ್ದಾರೆ. ಈ ಮನೆಯಲ್ಲಿ ಎಲ್ಲರು ಯಾವ ಮಟ್ಟಕ್ಕೆ ಒಟ್ಟಿಗೆ ಕೂತು ಕುಡಿಯುತ್ತಾರೆ ಎನ್ನೋದು ಅವರಿಗೆ ಗೊತ್ತು ಸರ್ ಎಂದಿದ್ದಾರೆ.

Share This Article
Leave a Comment

Leave a Reply

Your email address will not be published. Required fields are marked *