Warning: Undefined array key "options" in /home/nagendra/public_html/content/plugins/elementor-pro/modules/theme-builder/widgets/site-logo.php on line 124

ಕಿಚ್ಚನ ವೇದಿಕೆ ಬಂತು ಗಟ್ಟಿ ಹಾಲಿನ ವಿಚಾರ..!

Facebook
Twitter
Telegram
WhatsApp

ಬಿಗ್ ಬಾಸ್ ಮನೆಯಲ್ಲಿ ಕಾಮಿಡಿ, ಪ್ರತಿಭೆ ಅನಾವರಣವಾದಂತೆ ತಾಳ್ಮೆಯ ಕಟ್ಟೆ ಒಡೆದು, ಕೋಪವೂ ಅನಾವರಣವಾಗುತ್ತಾ ಇರುತ್ತದೆ. ಈ ವಾರ ಬಿಗ್ ಬಾಸ್ ಮನೆಯಲ್ಲಿ ಹಲವು ವಿಚಾರಗಳು ಗಮನ ಸೆಳೆದವು. ಅದರಲ್ಲೂ ಎಲ್ಲರ ಮನೆಯವರು ಬಂದು ಮಕ್ಕಳ ಜೊತೆ ಸಮಯ ಕಳೆದರು. ವಾರಪೂರ್ತಿ ಬಿಗ್ ಬಾಸ್ ಸ್ಪರ್ಧಿಗಳ ಮನಸ್ಸು ಉಲ್ಲಾಸದಿಂದ ಕುಣಿದಾಡುತ್ತಾ ಇತ್ತು. ಸುಮಾರು 69 ದಿನಗಳ ಕಾಲ ಮನೆಯೊಳಗೆ ಅವರವರೇ ಇದ್ದು, ಈಗ ಒಬ್ಬೊಬ್ಬರೆ ಅದರಲ್ಲೂ ಮನೆ ಮಂದಿ ಬರುತ್ತಿದ್ದಾಗ ಖುಷ ಆಗದೆ ಇರುತ್ತದೆಯೆ.

ಮನೆ ಮಂದಿ ಬಂದಿದ್ದು ಒಂದು ವಿಚಾರವಾದರೆ ಇನ್ನು ಹಾಲಿಗಾಗಿ ನಡೆದ ಕಿತ್ತಾಟ. ಬಿಗ್ ಬಾಸ್ ಎಲ್ಲರಿಗೂ ಒಂದೊಂದು ಪ್ಯಾಕೆಟ್ ಹಾಲನ್ನು ಕಳುಹಿಸಿತ್ತು. ಒಟ್ಟಿಗೆ ಟೀ ಮಾಡಿದರೆ ಮೊಸರು ಮಾಡುವುದಕ್ಕೂ ಅನುಕೂಲವಾಗುತ್ತದೆ ಎಂದು ಎಲ್ಲರೂ ಚರ್ಚೆಯಲ್ಲಿದ್ದರು. ಆಗ ಅಮೂಲ್ಯ ನನಗೆ ನನ್ನ ಒಂದು ಪ್ಯಾಕ್ ಕೊಟ್ಟು ಬಿಡಿ. ಗಟ್ಟಿ ಹಾಲು ಬೇಕು ನೀರು ಹಾಕಿದರೆ ಆಗಲ್ಲ ಅಂದ್ರು. ಆಗ ರೂಪೇಶ್ ರಾಜಣ್ಣ ಹಾಗೂ ಸಂಬರ್ಗಿ ಅಪೋಸ್ ಮಾಡಿದ್ದರು.

ಇವತ್ತು ವಾರದ ಕಥೆ ಕಿಚ್ಚನ ಜೊತೆಯಲ್ಲಿ ಇಂದು ಮತ್ತೆ ಹಾಲಿನ ವಿಚಾರವನ್ನು ಕಿಚ್ಚ ಸುದೀಪ್ ಪ್ರಸ್ತಾಪ ಮಾಡಿದ್ದಾರೆ. ಅಮೂಲ್ಯ ಅವರೇ ನಿಮಗೆ ಗಟ್ಟಿ ಹಾಲು ಬೇಕು. ನನ್ನ ಪ್ಯಾಕ್ ನನಗೆ ಕೊಡಿ. ನಿಮಗೆ ಹೊಂದಿಕೊಂಡು ಹೋಗುವುದಕ್ಕೆ ತೊಂದರೆಯಾಗುತ್ತಾ ಇದೆಯಾ ಎಂದು ಕೇಳಿದ್ದಾರೆ. ಆಗ ಅಮೂಲ್ಯ, ಸಿಗ್ತಾ ಇದ್ದದ್ದು ಒಂದು ಟೀ. ನಂಗೆ ಗಟ್ಟಿ ಹಾಲು ಬೇಕಿತ್ತು. ನಂಗೆ ಅದೆಲ್ಲ ಸುಪಿರಿಟಿ ಫಾರ್ಮಾಲಿಟಿಯ ಪರಮಾವಧಿ ಅನ್ನಿಸ್ತು ಎಂದು ಸಂಬರ್ಗಿ ಹೇಳಿದರೆ, ನಮ್ಗೆ ಬೇಕಾದಾಗ ಹಾಲನ್ನು ಎತ್ತಿಕೊಂಡು ಕುಡಿಯುತ್ತೀವಿ ಎಂದು ರಾಕಿ ಸಪೋರ್ಟ್ ಮಾಡಿದರು. ಬಳಿಕ ರಾಜಣ್ಣ, ನಾವೂ ಅಗ್ರಿ ಆದ್ವಿ ಸರ್ ನಾಳೆಯಿಂದ ಎಲ್ಲರು ಜೊತೆಗೆ ಕುಡಿಯೋಣಾ ಅಂತ ಎಂದಾಗ ಅಮೂಲ್ಯ ಆಕ್ರೋಶಗೊಂಡಿದ್ದಾರೆ. ಈ ಮನೆಯಲ್ಲಿ ಎಲ್ಲರು ಯಾವ ಮಟ್ಟಕ್ಕೆ ಒಟ್ಟಿಗೆ ಕೂತು ಕುಡಿಯುತ್ತಾರೆ ಎನ್ನೋದು ಅವರಿಗೆ ಗೊತ್ತು ಸರ್ ಎಂದಿದ್ದಾರೆ.

Facebook
Twitter
Telegram
WhatsApp
suddionenews

suddionenews

Leave a Comment

Top Stories

ರಾತ್ರಿ ಮಲಗುವ ಮುನ್ನ ಈ ಚಿಕ್ಕ ಕೆಲಸ ಮಾಡಿದರೆ, ಆರೋಗ್ಯಕ್ಕೆ ಎಷ್ಟೆಲ್ಲಾ ಉಪಯೋಗ ಗೊತ್ತಾ ?

ಸುದ್ದಿಒನ್ : ಯಾಂತ್ರಿಕ ಓಟದ ಬದುಕಿನಲ್ಲಿ ಹಲವು ಸಮಸ್ಯೆಗಳು ನಮ್ಮನ್ನು ಕಾಡುತ್ತವೆ. ಹೀಗಾಗಿ ಆರೋಗ್ಯವಂತರಾಗಿರಲು ಈಗಿನಿಂದಲೇ ಹೆಜ್ಜೆ ಇಡಬೇಕು. ಮತ್ತು ಹೆಚ್ಚು ಗಮನ ಕೊಡಬೇಕು. ಜೀವನಶೈಲಿ, ಆಹಾರ ಪದ್ಧತಿ ಬದಲಿಸಿಕೊಳ್ಳಿ ಎಂದು ವೈದ್ಯಕೀಯ ತಜ್ಞರು

ಈ ರಾಶಿಯವರಿಗೆ ಮದುವೆ ಯೋಗ,ಈ ರಾಶಿಯವರಿಗೆ ಸಂತಾನ ಭಾಗ್ಯ, ಈ ರಾಶಿಯವರಿಗೆ ಸಾಲದಿಂದ ಋಣ ಮುಕ್ತಿ

ಈ ರಾಶಿಯವರಿಗೆ ಮದುವೆ ಯೋಗ,ಈ ರಾಶಿಯವರಿಗೆ ಸಂತಾನ ಭಾಗ್ಯ, ಈ ರಾಶಿಯವರಿಗೆ ಸಾಲದಿಂದ ಋಣ ಮುಕ್ತಿ. ಶುಕ್ರವಾರ- ರಾಶಿ ಭವಿಷ್ಯ ಏಪ್ರಿಲ್-26,2024 ಸೂರ್ಯೋದಯ: 05:56, ಸೂರ್ಯಾಸ್ತ : 06:31 ಶಾಲಿವಾಹನ ಶಕೆ1945, ಶ್ರೀ ಕ್ರೋಧಿ

ಜೆಇಇ” ಮೈನ್ಸ್‌ ಫಲಿತಾಂಶ | ಆಲ್‌ ಇಂಡಿಯಾ ರ್ಯಾಂಕ್‌ ಪಡೆದು ದಾಖಲೆ ನಿರ್ಮಿಸಿದ ಚಿತ್ರದುರ್ಗದ ʼಎಸ್‌ ಆರ್‌ ಎಸ್‌ʼ ವಿದ್ಯಾರ್ಥಿಗಳು

ಸುದ್ದಿಒನ್, ಚಿತ್ರದುರ್ಗ, ಏಪ್ರಿಲ್.25 :  ನಗರದ ಎಸ್‌ ಆರ್‌ ಎಸ್‌ ಪಿಯು ಕಾಲೇಜಿನ ವಿದ್ಯಾರ್ಥಿಗಳು ಇದೇ ಏಪ್ರಿಲ್‌ ತಿಂಗಳಲ್ಲಿ ನಡೆದ “ಜೆಇಇ ಮೈನ್ಸ್‌”ನ (ರಾಷ್ಟ್ರೀಯ ಅರ್ಹತಾ ಪರೀಕ್ಷೆ) ಎರಡನೇ ಸ್ಲಾಟ್‌ ಪರೀಕ್ಷೆಯಲ್ಲಿ ಕಾಲೇಜಿನ ವಿದ್ಯಾರ್ಥಿ

error: Content is protected !!