Warning: Undefined array key "options" in /home/nagendra/public_html/content/plugins/elementor-pro/modules/theme-builder/widgets/site-logo.php on line 124

ಚಿತ್ರದುರ್ಗದ ಜನ 30 ವರ್ಷದಿಂದ ಹೋರಾಟ ಮಾಡಿದ ಯೋಜನೆಗೆ ಅಸ್ತು ಎಂದವನು ನಾನು : ಕುಮಾರಸ್ವಾಮಿ

Facebook
Twitter
Telegram
WhatsApp

ಬೆಂಗಳೂರು: ಮೈತ್ರಿ ಸರ್ಕಾರದಲ್ಲಿದ್ದಾಗ ಆದ ಸಮಸ್ಯೆಗಳ ಬಗ್ಗೆ ಮಾಜಿ ಸಿಎಂ ಕುಮಾರಸ್ವಾಮಿ ಮಾತನಾಡಿದ್ದು, ನಾನು ಎರೆಉ ಬಾರಿ ಮುಖ್ಯಮಂತ್ರಿಯಾಗಿದ್ದು, ಒಂದು ಬಾರಿ ಬಿಜೆಪಿ ಜೊತೆ, ಮತ್ತೊಂದು ಬಾರಿ ಕಾಂಗ್ರೆಸ್ ಜೊತೆ ಸರ್ಕಾರ ಮಾಡಿದ್ದು ಎರಡು ಬಾರಿಯೂ ನಾನು ಸ್ವತಂತ್ರವಾದ ಸರ್ಕಾರ ಮಾಡಲಿಲ್ಲ. ಮೊದಲನೇ ಬಾರಿ ಬಿಜೆಪಿ ಜೊತೆ ಸರ್ಕಾರ ಮಾಡಿದಾಗ ಅಪ್ಪರ್ ಭದ್ರ ಯೋಜನೆಗೆ ಸಚಿವ ಸಂಪುಟದಲ್ಲಿ ಒಪ್ಪಿಗೆ ಕೊಟ್ಟವನು ನಾನಿ. 30 ವರ್ಷದಿಂದ ನೆನೆಗುದಿಗೆ ಬಿದ್ದಂತ, ನಿಜ ಲಿಂಗಪ್ಪ ಅವರ ಕಾಲದಿಂದ ಚಿತ್ರದುರ್ಗದ ಜನತೆ ಏನು ಹೋರಾಟ ಮಾಡುತ್ತಿದ್ದರು ಅದಕ್ಕೆ ಒಂದು ತೀರ್ಮಾನ ಮಾಡಿದವನು ನಾನು.

ಕಳಸಾ ಬಂಡೂರಿ ಯೋಜನೆಗೆ ಸಚಿವ ಸಂಪುಟದಲ್ಲಿಒಪ್ಪಿಗೆ ಕೊಟ್ಟವನು ನಾನು. ಆ ಕಾರ್ಯಕ್ರಮ ಆಗಬೇಕು ಅಂತ ಪ್ರಥಮವಾಗಿ ಹಣ ರಿಲೀಸ್ ಮಾಡಿದವನು ನಾನು. ಅವತ್ತು ಕೂಡ ನಮ್ಮ ಪಕ್ಷದವರು ನೀರಾವರಿ ಸಚಿವರಿರಲಿಲ್ಲ. ಅವತ್ತು ಬಿಜೆಪಿಯವರು ನೀರಾವರಿ ಸಚಿವರಾಗಿದ್ದರು. ಕಳಸಾ ಬಂಡೂರಿಯ ಕೆಲವು ಟೆಕ್ನಿಕಲ್ ಸಮಸ್ಯೆಯನ್ನು ಸಂಪುಟದಲ್ಲಿ ಎತ್ತಿ ಹಿಡಿದಾಗ ನಮಗೆ ಈ ಯೋಜನೆ ಸಂಪೂರ್ಣ ಆದರೆಷ್ಟು ಬಿಟ್ಟರೆಷ್ಟು ನಮಗೆ ಪ್ರಚಾರಕ್ಕೆ ಈ ಕಾರ್ಯಕ್ರಮ ಮಾಡಬೇಕು ಎಂದವರು ಕುಮಾರಸ್ವಾಮಿ ಅಲ್ಲ ಇದೇ ಬಿಜೆಪಿ ನಾಯಕರು.

ಯಾರ್ಯಾರು ಏನೇನು ಮಾತನಾಡಿದರು ಅವರೆಲ್ಲಾ ಬದುಕಿದ್ದಾರೆ. ಇದರಲ್ಲಿ ನಾನು ಸುಳ್ಳೆಳುವ ಪ್ರಶ್ನೆಯೇ ಇಲ್ಲ. ಎರೆನೇ ಬಾರಿ ಮುಖ್ಯಮಂತ್ರಿಯಾದಾಗ ನೀರಾವರಿ ಸಚಿವರು ಯಾರು. ಕಾಂಗ್ರೆಸ್ ಪಕ್ಷದ ಮಹಾನಾಯಕರು. ನಾನು ಯಾವುದಕ್ಕೊ ತಲೆ ಹಾಕುವ ಆಗಿರಲಿಲ್ಲ. ಯಾವುದೇ ತೀರ್ಮಾನ ತೆಗೆದುಕೊಳ್ಳಬೇಕಾದರು ನೀವ್ಯಾರು ತೆಗೆದುಕೊಳ್ಳುವುದಕ್ಕೆ ಎನ್ನುತ್ತಿದ್ದರು. ಈ ಎರಡು ರಾಷ್ಟ್ರೀಯ ಪಕ್ಷಗಳು ಇದನ್ನೇ ಹೇಳಿಕೊಂಡು ಬಂದವರು ಎಂದು ಕಾಂಗ್ರೆಸ್ ಮತ್ತು ಬಿಜೆಪಿ ವಿರುದ್ಧ ಮಾಜಿ ಸಿಎಂ ಕುಮಾರಸ್ವಾಮಿ ಹರಿಹಾಯ್ದಿದ್ದಾರೆ.

Facebook
Twitter
Telegram
WhatsApp
suddionenews

suddionenews

Leave a Comment

Top Stories

ಇಂದಿನಿಂದ ರಾಜ್ಯಾದ್ಯಂತ ಮಳೆ : ಬೆಂಗಳೂರಿಗೆ ಮಳೆ ದರ್ಶನ ಯಾವಾಗಿಂದ..?

ಬೆಂಗಳೂರು: ಬಿಸಿಲಿನ ತಾಪ ಅದ್ಯಾಕೆ ದಿನೇ ದಿನೇ ಏರಿಕೆಯಾಗುತ್ತಿದೆಯೋ ತಿಳಿದಿಲ್ಲ. ಜನರಂತು ಬಿಸಿಲಿನ ಬೇಗೆಗೆ ಹೈರಾಣಾಗಿ ಹೋಗಿದ್ದಾರೆ. ಕಳೆದ ವರ್ಷವಂತು ಮಳೆಯಿಲ್ಲ ಈ ವರ್ಷ ಮೊದಲ ಮಳೆಯೂ ಸರಿಯಾಗಿ ಆಗಿಲ್ಲ. ಮೇ ತಿಂಗಳಿಗೆ ಬಂದರೂ

ಆದಷ್ಟು ಬೇಗ ಸತ್ಯ ಹೊರಬರಲಿದೆ ಎಂದು ಪೋಸ್ಟ್ ಹಾಕಿ ಕಮೆಂಟ್ ಆಫ್ ಮಾಡಿದ ಪ್ರಜ್ವಲ್ ರೇವಣ್ಣ..!

ಬೆಂಗಳೂರು: ಅಶ್ಲೀಲ ವಿಡಿಯೋಗಳಿರುವ ಪೆನ್ ಡ್ರೈವ್ ಎಲ್ಲೆಡೆ ವೈರಲ್ ಆಗುತ್ತಿದ್ದಂತೆ ಪ್ರಜ್ವಲ್ ರೇವಣ್ಣ ಸೀದಾ ಜರ್ಮನಿ ಪ್ರವಾಸಕ್ಕೆ ಹೊರಟಿದ್ದರು. ವಿಚಾರ ದೊಡ್ಡದಾದ ಕೂಡಲೇ ಎಚ್ಚೆತ್ತ ರಾಜ್ಯ ಸರ್ಕಾರ, ಪ್ರಕರಣವನ್ನು ಎಸ್ಐಟಿ ತನಿಖೆಗೆ ವಹಿಸಿತ್ತು. ಎಸ್ಐಟಿ

ಹೆಚ್ಚಾದ ಬಿಸಿಲು ಕುರಿ-ಮೇಕೆ ಇನ್ನಿತರೆ ಜಾನುವಾರುಗಳನ್ನು ರಕ್ಷಿಸಿಕೊಳ್ಳಿ : ವಿ.ಎ.ಪ್ರಕಾಶ್‍ರೆಡ್ಡಿ

ವರದಿ ಮತ್ತು ಫೋಟೋ ಕೃಪೆ ಕೆ.ಎಂ.ಮುತ್ತುಸ್ವಾಮಿ ಕಣ್ಣನ್,   ಮೊ : 78998 64552 ಸುದ್ದಿಒನ್, ಚಿತ್ರದುರ್ಗ, ಮೇ. 01 : ಈ ವರ್ಷದ ಬೇಸಿಗೆ ಬಿಸಿಲು ಅತಿಯಾಗಿರುವುದರಿಂದ ಕುರಿ-ಮೇಕೆ ಇನ್ನಿತರೆ ಜಾನುವಾರುಗಳನ್ನು ಬೆಳಿಗ್ಗೆ ಆರು

error: Content is protected !!