Warning: Undefined array key "options" in /home/nagendra/public_html/content/plugins/elementor-pro/modules/theme-builder/widgets/site-logo.php on line 124

ಚಿತ್ರದುರ್ಗದ ಜನ 30 ವರ್ಷದಿಂದ ಹೋರಾಟ ಮಾಡಿದ ಯೋಜನೆಗೆ ಅಸ್ತು ಎಂದವನು ನಾನು : ಕುಮಾರಸ್ವಾಮಿ

Facebook
Twitter
Telegram
WhatsApp

ಬೆಂಗಳೂರು: ಮೈತ್ರಿ ಸರ್ಕಾರದಲ್ಲಿದ್ದಾಗ ಆದ ಸಮಸ್ಯೆಗಳ ಬಗ್ಗೆ ಮಾಜಿ ಸಿಎಂ ಕುಮಾರಸ್ವಾಮಿ ಮಾತನಾಡಿದ್ದು, ನಾನು ಎರೆಉ ಬಾರಿ ಮುಖ್ಯಮಂತ್ರಿಯಾಗಿದ್ದು, ಒಂದು ಬಾರಿ ಬಿಜೆಪಿ ಜೊತೆ, ಮತ್ತೊಂದು ಬಾರಿ ಕಾಂಗ್ರೆಸ್ ಜೊತೆ ಸರ್ಕಾರ ಮಾಡಿದ್ದು ಎರಡು ಬಾರಿಯೂ ನಾನು ಸ್ವತಂತ್ರವಾದ ಸರ್ಕಾರ ಮಾಡಲಿಲ್ಲ. ಮೊದಲನೇ ಬಾರಿ ಬಿಜೆಪಿ ಜೊತೆ ಸರ್ಕಾರ ಮಾಡಿದಾಗ ಅಪ್ಪರ್ ಭದ್ರ ಯೋಜನೆಗೆ ಸಚಿವ ಸಂಪುಟದಲ್ಲಿ ಒಪ್ಪಿಗೆ ಕೊಟ್ಟವನು ನಾನಿ. 30 ವರ್ಷದಿಂದ ನೆನೆಗುದಿಗೆ ಬಿದ್ದಂತ, ನಿಜ ಲಿಂಗಪ್ಪ ಅವರ ಕಾಲದಿಂದ ಚಿತ್ರದುರ್ಗದ ಜನತೆ ಏನು ಹೋರಾಟ ಮಾಡುತ್ತಿದ್ದರು ಅದಕ್ಕೆ ಒಂದು ತೀರ್ಮಾನ ಮಾಡಿದವನು ನಾನು.

ಕಳಸಾ ಬಂಡೂರಿ ಯೋಜನೆಗೆ ಸಚಿವ ಸಂಪುಟದಲ್ಲಿಒಪ್ಪಿಗೆ ಕೊಟ್ಟವನು ನಾನು. ಆ ಕಾರ್ಯಕ್ರಮ ಆಗಬೇಕು ಅಂತ ಪ್ರಥಮವಾಗಿ ಹಣ ರಿಲೀಸ್ ಮಾಡಿದವನು ನಾನು. ಅವತ್ತು ಕೂಡ ನಮ್ಮ ಪಕ್ಷದವರು ನೀರಾವರಿ ಸಚಿವರಿರಲಿಲ್ಲ. ಅವತ್ತು ಬಿಜೆಪಿಯವರು ನೀರಾವರಿ ಸಚಿವರಾಗಿದ್ದರು. ಕಳಸಾ ಬಂಡೂರಿಯ ಕೆಲವು ಟೆಕ್ನಿಕಲ್ ಸಮಸ್ಯೆಯನ್ನು ಸಂಪುಟದಲ್ಲಿ ಎತ್ತಿ ಹಿಡಿದಾಗ ನಮಗೆ ಈ ಯೋಜನೆ ಸಂಪೂರ್ಣ ಆದರೆಷ್ಟು ಬಿಟ್ಟರೆಷ್ಟು ನಮಗೆ ಪ್ರಚಾರಕ್ಕೆ ಈ ಕಾರ್ಯಕ್ರಮ ಮಾಡಬೇಕು ಎಂದವರು ಕುಮಾರಸ್ವಾಮಿ ಅಲ್ಲ ಇದೇ ಬಿಜೆಪಿ ನಾಯಕರು.

ಯಾರ್ಯಾರು ಏನೇನು ಮಾತನಾಡಿದರು ಅವರೆಲ್ಲಾ ಬದುಕಿದ್ದಾರೆ. ಇದರಲ್ಲಿ ನಾನು ಸುಳ್ಳೆಳುವ ಪ್ರಶ್ನೆಯೇ ಇಲ್ಲ. ಎರೆನೇ ಬಾರಿ ಮುಖ್ಯಮಂತ್ರಿಯಾದಾಗ ನೀರಾವರಿ ಸಚಿವರು ಯಾರು. ಕಾಂಗ್ರೆಸ್ ಪಕ್ಷದ ಮಹಾನಾಯಕರು. ನಾನು ಯಾವುದಕ್ಕೊ ತಲೆ ಹಾಕುವ ಆಗಿರಲಿಲ್ಲ. ಯಾವುದೇ ತೀರ್ಮಾನ ತೆಗೆದುಕೊಳ್ಳಬೇಕಾದರು ನೀವ್ಯಾರು ತೆಗೆದುಕೊಳ್ಳುವುದಕ್ಕೆ ಎನ್ನುತ್ತಿದ್ದರು. ಈ ಎರಡು ರಾಷ್ಟ್ರೀಯ ಪಕ್ಷಗಳು ಇದನ್ನೇ ಹೇಳಿಕೊಂಡು ಬಂದವರು ಎಂದು ಕಾಂಗ್ರೆಸ್ ಮತ್ತು ಬಿಜೆಪಿ ವಿರುದ್ಧ ಮಾಜಿ ಸಿಎಂ ಕುಮಾರಸ್ವಾಮಿ ಹರಿಹಾಯ್ದಿದ್ದಾರೆ.

Facebook
Twitter
Telegram
WhatsApp
suddionenews

suddionenews

Leave a Comment

Top Stories

ಎಳಸು, ರಾಜಕೀಯ ಜ್ಞಾನ ಇರದವನು : ವಿಜಯೇಂದ್ರ ಮೇಲೆ ಈಶ್ವರಪ್ಪ ಮಾತಿನ ಪ್ರಹಾರ

ಉಡುಪಿ: ಹಾವೇರಿಯಿಂದ ಟಿಕೆಟ್ ಆಕಾಂಕ್ಷಿಯಾಗಿದ್ದ ಈಶ್ವರಪ್ಪ ಅವರಿಗೆ ಬಿಜೆಪಿ ನಿರಾಸೆ ಮಾಡಿದಾಗಿನಿಂದ ಮಾಜಿ ಸಿಎಂ ಯಡಿಯೂರಪ್ಪ ಹಾಗೂ ಮಕ್ಕಳ ಮೇಲೆ ಹರಿಹಾಯುತ್ತಲೇ ಇದ್ದಾರೆ. ಬಿಜೆಪಿ ನಾಯಕರ ಮಾತನ್ನು ಮೀರಿ, ಸದ್ಯ ಪಕ್ಷೇತರ ಅಭ್ಯರ್ಥಿಯಾಗಿ ನಾಮಪತ್ರ

ನಾಳೆಯಿಂದ ಮೊದಲ ಹಂತದ ಚುನಾವಣೆ ಆರಂಭ : ಕರ್ನಾಟಕದಲ್ಲೂ ಎರಡು ಹಂತದಲ್ಲಿ ಮತದಾನ

ಲೋಕಸಭಾ ಚುನಾವಣೆಯ ಕಾವು ಈಗಾಗಲೇ ದೇಶದೆಲ್ಲೆಡೆ ಹಬ್ಬಿದೆ. ನಾಳೆಯಿಂದ ಲೋಕಸಭೆ ಚುನಾವಣೆಯ ಮೊದಲ ಹಂತದ ಮತದಾನ ಆರಂಭವಾಗಲಿದೆ. ಒಟ್ಟು 7 ಹಂತದಲ್ಲಿ ನಡೆಯಲಿರುವ ಲೋಕಸಭಾ ಚುನಾವಣೆ ನಡೆಯಲಿದೆ. ಮೊದಲ ಹಂತದ ಮತದಾನ ಕ್ಷೇತ್ರಗಳಿಗೆ ಇಂದು

ಯದುವೀರ್ ಸಿಕ್ತಿಲ್ಲ ಒಕ್ಕಲಿಗರ ಸಪೋರ್ಟ್ : ಕಾಂಗ್ರೆಸ್ ಗೆ ಬೆಂಬಲ ತಿಳಿಸಿದ ಮರಿಸ್ವಾಮಿ

ಮೈಸೂರು: ಈ ಬಾರಿ ಪ್ರತಾಪ್ ಸಿಂಹಗೆ ಟಿಕೆಟ್ ಮಿಸ್ ಮಾಡಿರುವ ಬಿಜೆಪಿ ರಾಜ ವಂಶಸ್ಥರಿಗೆ ಟಿಕೆಟ್ ನೀಡಿದೆ. ಆದರೆ ಪ್ರತಾಪ್ ಸಿಂಹಗೆ ಟಿಕೆಟ್ ಸಿಗದ ಕಾರಣ, ಒಕ್ಕಲಿಗರು ಕಾಂಗ್ರೆಸ್ ಗೆ ಬೆಂಬಲ ಘೋಷಿಸಿದ್ದಾರೆ. ಈ

error: Content is protected !!