Warning: Undefined array key "options" in /home/nagendra/public_html/content/plugins/elementor-pro/modules/theme-builder/widgets/site-logo.php on line 124

ಮೇ.10 ರಂದು ಹೇಮರೆಡ್ಡಿ ಮಲ್ಲಮ್ಮ ಜಯಂತಿ ಅಂಗವಾಗಿ ವಿಶೇಷ ಲೇಖನ ; ಲಕ್ಷ್ಮೀಪತಿ.ಡಿ

Facebook
Twitter
Telegram
WhatsApp

ಸಂತ ಶಿಶುನಾಳ ಶರೀಫ ಮೆಚ್ಚಿದ ಮಹಾಸಾಧ್ವಿ ಹೇಮರೆಡ್ಡಿ ಮಲ್ಲಮ್ಮ

15 ಶತಮಾನದ ಪ್ರಸಿದ್ದ ಶಿವಶರಣೆ ಹೇಮರೆಡ್ಡಿ ಮಲ್ಲಮ್ಮ ಜನಮಾನಸದಲ್ಲಿ ತನ್ನ ಭಕ್ತಿ ಹಾಗೂ ಕಾಯಕದಿಂದ ಮನೆಮಾತಾಗಿದ್ದಾಳೆ. ಕೌಟುಂಬಿಕ ಸಂಕಷ್ಟಗಳನ್ನು ಮೆಟ್ಟಿ ನಿಂತು, ಆದರ್ಶ ಮೌಲ್ಯಗಳನ್ನು ಬುದಕಿನಲ್ಲಿ ರೂಢಿಸಿಕೊಂಡು ಸಾಮಾಜಿಕ ಹಾಗೂ ಧಾರ್ಮಿಕ ಚಿಂತನೆಯಲ್ಲಿ ಸಾಧನೆಗೈದ ಮಹಾಶಿವಶರಣೆ ಹೇಮರೆಡ್ಡಿ ಮಲ್ಲಮ್ಮ ಸ್ತ್ರೀ ಕುಲಕ್ಕೆ ಮಾದರಿ. ಶ್ರೀಶೈಲ ಮಲ್ಲಿಕಾರ್ಜುನನನ್ನು ಆರಾಧ್ಯ ದೈವವಾಗಿ ಸ್ವೀಕರಿಸಿ, ಸಾಕ್ಷಾತ್ಕರಿಸಿಕೊಂಡ ಸಾಧ್ವಿ ಮಲ್ಲಮ್ಮ. ವೇಮನ ಮಹಾಯೋಗಿಯಾಗಿ ಬದಲಾಗಲು ಪ್ರೇರಣೆಯಾದವಳು. ಹೇಮರೆಡ್ಡಿ ಮಲ್ಲಮ್ಮನ ಪವಾಡ ಹಾಗೂ ಭಕ್ತಿಯ ಕುರಿತು ಹಲವು ಪ್ರತೀತಿ ಹಾಗೂ ಕಥನಗಳಿವೆ. ಸಂತ ಶಿಶುನಾಳ ಶರೀಫರು ಹೇಮರೆಡ್ಡಿ ಮಲ್ಲಮ್ಮಳನ್ನು ರೆಡ್ಡಿ ಕುಲದ ಉದ್ಧಾರಕಳು ಎಂದು ಬಣ್ಣಿಸಿದ್ದಾರೆ.

ಆಂದ್ರಪ್ರದೇಶದ ಶ್ರೀಶೈಲದ ದಕ್ಷಿಣ ದಿಕ್ಕಿನಲ್ಲಿರುವ ವೆಲ್ಲಟೂರು ಬಳಿಯ ರಾಮಪುರ ಗ್ರಾಮದ ಸುಸಂಸ್ಕೃತ ಮನೆತನದ ರಾಮರೆಡ್ಡಿ ಹಾಗೂ ಗೌರಮ್ಮ ದಂಪತಿಗಳಿಗೆ ಮಗಳಾಗಿ ಹೇಮರೆಡ್ಡಿ ಮಲ್ಲಮ್ಮ ಜನಿಸಿದಳು. ಚಿಕ್ಕಂದಿನಿಂದಲೂ ಶಿವಭಕ್ತೆಯಾದ ಮಲ್ಲಮ್ಮ ತನ್ನ ಹದಿನಾರನೆ ವಯಸ್ಸಿಗೆ ಸಿದ್ದಾಪುರ ಸಂಸ್ಥಾನದ ಒಡೆಯ ಹೇಮರಡ್ಡಿ ಅವರ ಮೂರನೆ ಮಗ ಭರಮರೆಡ್ಡಿಯನ್ನು ಮದುವೆಯಾದಳು. ಮುಗ್ಧ, ಹಾಗೂ ಸಾಧು ಸ್ವಭಾವದ ಭರಮರೆಡ್ಡಿ ಲೋಕರೂಢಿಯ ವ್ಯವಹಾರದಲ್ಲಿ ಕಡಿಮೆ ಜ್ಞಾನ ಹೊಂದಿದವನು. ಇವನ ತಮ್ಮ ವೇಮನ ಮದ್ಯವೆಸನಿ ಹಾಗೂ ಸ್ತ್ರೀಯರ ಲಂಪಟನಾಗಿದ್ದ. ಇಂತಗ ಸಂದಿಗ್ಧ ಮನೆತನದಲ್ಲಿ ತನ್ನ ಸಂಸಾರ ನಡೆಸಿದ ಮಲ್ಲಮ್ಮ ಮನೆಯ ಎಲ್ಲಾ ಸದಸ್ಯರಲ್ಲೂ ಪರಿವರ್ತನೆ ತರುತ್ತಾಳೆ. ದಾನ ಚಿಂತಾಮಣಿಯಾದ ಮಲ್ಲಮ್ಮ ಕಾಯದಲ್ಲಿ ದೇವರನ್ನು ಕಾಣುವ ಮಾರ್ಗವನ್ನು ತೋರಿದಳು.

ಸಂತ ಶಿಶುನಾಳ ಶರೀಫರು ಹೇಮರೆಡ್ಡಿ ಮಲ್ಲಮ್ಮ ಜೀವನ ಹಾಗೂ ಔದಾರ್ಯ ಗುಣಗಳನ್ನು ಹೊಗಳಿ ರಚಿಸಿದ ಗೀತೆ ಜನರ ಬಾಯಲ್ಲಿ ನಲಿದಾಡುತ್ತಿದೆ. ಸಮಸ್ತ ರೆಡ್ಡಿ ಕುಲದ ಧರ್ಮ ಉದ್ಧಾರ ಮಾಡಲು ಅವತರಿಸಿದ ಶರಣೆ ಎಂದು ಕರೆದಿದ್ದಾರೆ. ಮಲ್ಲಮ್ಮ ಭಕ್ತಿ ಗಂಡನ ಮೇಲಿನ ಪ್ರೇಮ ಅಗಾಧವಾದು. ವೇಮನ ತತ್ವಜ್ಞಾನಿಯಾಗಿ ಬದಲಾಗಲು ಕಾರಣಳಾದ ಹೇಮರೆಡ್ಡಿ ಮಲ್ಲಮ್ಮ ಸಾಕ್ಷತ್ ಶ್ರೀಶೈಲ ಮಲ್ಲಿಕಾರ್ಜುನ ಅನುಗ್ರಹಕ್ಕೆ ಪಾತ್ರಳಾದವಳು ಎಂದು ಶಿಶುನಾಳ ಶರೀಫರು ಮಲ್ಲಮ್ಮ ಗರಿಮೆ ಹಾಡಿ ಹೊಗಳಿದ್ದಾರೆ.

ರುದ್ರಕವಿ ಹೇಮರೆಡ್ಡಿ ಮಲ್ಲಮ್ಮನ ಪುರಾಣವನ್ನು ಹಾಗೂ ಲೇಖಕ ಸಂ.ಹನುಮಂತಪ್ಪ ಅಂಡಗಿ ಮಲ್ಲಮ್ಮನ ಕುರಿತು ಮೂಗುತಿ ಮಹಿಮೆ ರಚಿಸಿದ್ದಾರೆ. ಶರಣೆ ಹೇಮರೆಡ್ಡಿ ಮಲ್ಲಮ್ಮನ ಪವಾಡಗಳ ಕುರಿತು ಅನೇಕ ರೀತಿಯ ಚಲನಚಿತ್ರಗಳು ಮೂಡಿ ಬಂದಿವೆ. 1946 ರಲ್ಲಿ ಗುಬ್ಬಿ ವೀರಣ್ಣನವರ ನಿರ್ಮಾಣ ಹಾಗೂ ಎಸ್. ಸೌಂದರ್ಯ ರಾಜನ್ ನಿರ್ದೇಶನದಲ್ಲ್ಲಿ ಬಿ.ಜಯಮ್ಮ , ಹೊನ್ನಪ್ಪ ಭಾಗವತರ್ , ವೀರಣ್ಣ ಮತ್ತು ಸಿ.ಬಿ.ಮಲ್ಲಪ್ಪ ಮುಖ್ಯ ಭೂಮಿಕೆಯಲ್ಲಿ ನಟಿಸಿದ ಹೇಮರೆಡ್ಡಿ ಮಲ್ಲಮ್ಮ ಚಲನಚಿತ್ರ ಬಿಡುಗಡೆಯಾಗಿ ಜನರ ಮೆಚ್ಚಿಗೆ ಪಾತ್ರವಾಗಿದೆ.

ಜನಪದ ಸಾಹಿತ್ಯದಲ್ಲಿ ಹೇಮರೆಡ್ಡಿ ಮಲ್ಲಮ್ಮ ಜೀವನದ ಬಗ್ಗೆ ಕರುಹುಗಳಿವೆ. “ರಾಂಪುರದ ರಾಮರೆಡ್ಡಿ-ಗೌರಮ್ಮರ ಸುಪುತ್ರಿ, ಹೇಮರೆಡ್ಡಿ ಮಲ್ಲಮ್ಮ ಸಿದ್ದಾಪುರದ ಸೊಸಿ, ಶ್ರೀಶೈಲ ಮಲ್ಲಿಕಾರ್ಜುನನನ್ನು ಪೂಜಿಸಿ, ಅತ್ತೆ-ನೆಗೆಣ್ಣಿಯರ ಕಾಟ ಸಹಿಸಿ, ಮಬ್ಬು ಗಂಡನ ಮಹಾದೇವನೆಂದು ಮನ್ನಿಸಿ, ಮತಿಗೇಡಿ ಮೈದುನನ ಯೋಗಿ ವೇಮನನ ಮಾಡಿ, ಮಹಾಯೋಗಿಯ ಮಹಾತಾಯಿಯಾಗಿ, ಮಲ್ಲಮಾಂಬೆ ಬೆಳಗಿದಳು ರೆಡ್ಡಿಕುಲವ” ಎಂದು ಜನರು ಮಲ್ಲಮ್ಮನ ಕುರಿತು ಹಾಡಿದ್ದಾರೆ.

ಲೇಖನ: ಲಕ್ಷ್ಮೀಪತಿ.ಡಿ ಪ್ರಶಿಕ್ಷಣಾರ್ಥಿ, ವಾರ್ತಾ ಇಲಾಖೆ ಚಿತ್ರದುರ್ಗ.

Facebook
Twitter
Telegram
WhatsApp
suddionenews

suddionenews

Leave a Comment

Top Stories

ದೇಹದಲ್ಲಿ ರಕ್ತ ಹೆಪ್ಪುಗಟ್ಟಲು ಕಾರಣವೇನು ?

ಸುದ್ದಿಒನ್ : ದೇಹದಲ್ಲಿ ರಕ್ತ ಹೆಪ್ಪುಗಟ್ಟುವುದು ತುಂಬಾ ಅಪಾಯಕಾರಿ. ಪರಿಣಾಮವಾಗಿ, ಅನೇಕ ರೀತಿಯ ಮಾರಣಾಂತಿಕ ಸಮಸ್ಯೆಗಳು ಉದ್ಭವಿಸುತ್ತವೆ. ದೇಹದಲ್ಲಿ ರಕ್ತ ಹೆಪ್ಪುಗಟ್ಟುವಿಕೆಗೆ ಅಪಾಯಕಾರಿ ಅಂಶಗಳು ಯಾವುವು ? ಅವುಗಳನ್ನು ತಡೆಯುವುದು ಹೇಗೆ ? ಮುಂತಾದ

ನಿಮ್ಮದೇ ರಾಶಿ ಹೊಂದಿರುವರು ಶ್ರೀಮಂತರಾಗಿದ್ದಾರೆ, ಸರಕಾರಿ ಉದ್ಯೋಗದಲ್ಲಿದ್ದಾರೆ ನೀವೇಕೆ ಇಲ್ಲ?

ನಿಮ್ಮದೇ ರಾಶಿ ಹೊಂದಿರುವರು ಶ್ರೀಮಂತರಾಗಿದ್ದಾರೆ, ಸರಕಾರಿ ಉದ್ಯೋಗದಲ್ಲಿದ್ದಾರೆ ನೀವೇಕೆ ಇಲ್ಲ? ಶನಿವಾರ ರಾಶಿ ಭವಿಷ್ಯ -ಮೇ-4,2024 ಸೂರ್ಯೋದಯ: 05:52, ಸೂರ್ಯಾಸ್ತ : 06:33 ಶಾಲಿವಾಹನ ಶಕೆ1945, ಶ್ರೀ ಕ್ರೋಧಿ ನಾಮ ಸಂವತ್ಸರ , ಸಂವತ್2079,

ಆಗ್ನೇಯ ಶಿಕ್ಷಕರ ಕ್ಷೇತ್ರದ ಚುನಾವಣೆ : ಜೂನ್ 3 ರಂದು ಮತದಾನ : ಜಿಲ್ಲಾಧಿಕಾರಿ ಟಿ.ವೆಂಕಟೇಶ್

ಚಿತ್ರದುರ್ಗ. ಮೇ.03: ಆಗ್ನೇಯ ಶಿಕ್ಷಕರ ಕ್ಷೇತ್ರದ ವಿಧಾನ ಪರಿಷತ್ ಸದಸ್ಯರ ಆಯ್ಕೆಯ ಚುನಾವಣೆಗೆ ವೇಳಾಪಟ್ಟಿ ಪ್ರಕಟವಾಗಿದೆ. ಚಿತ್ರದುರ್ಗ ಜಿಲ್ಲೆಯಲ್ಲಿ 4615 ಮತದಾರರು ಇದ್ದು , ಜೂನ್ 3 ರಂದು ಮತದಾನ ಜರುಗಲಿದೆ ಎಂದು ಆಗ್ನೇಯ

error: Content is protected !!