Warning: Undefined array key "options" in /home/nagendra/public_html/content/plugins/elementor-pro/modules/theme-builder/widgets/site-logo.php on line 124

15 ವರ್ಷದ ಹಿಂದೆ ನೆಟ್ಟಿದ್ದ ತೆಂಗಿನ ಮರ ಫಸಲು ಕೊಡುವ ಸಮಯಕ್ಕೆ ಪ್ರಕೃತಿ ಮುನಿಸಿಗೆ ನಾಶ.!

Facebook
Twitter
Telegram
WhatsApp

ಮಂಡ್ಯ: ವ್ಯವಸಾಯ ಎಂದರೆ ಮೊದಲೆ ಮೂಗು ಮುರಿಯುವ ಜನ ಹೆಚ್ಚು. ಇದರ ನಡುವೆ ಹಾಗೋ ಹೀಗೋ ಕಷ್ಟಪಟ್ಟು ವ್ಯವಸಾಯವನ್ನು ಮಾಡಿದವರಿಗೆ ಪ್ರಕೃತಿಯ ಮುನಿಸಿನಿಂದಾಗಿ ಎಲ್ಲವೂ ನೆಲಸಮವಾಗಿ ಹೋದರೆ ಪರಿಸ್ಥಿತಿ ಹೇಗಿರಬೇಡ. ಅಂತದ್ದೊಂದು ಹೃದಯ ವಿದ್ರಾವಕ ಘಟನೆ ಮಂಡ್ಯ ಜಿಲ್ಲೆಯಲ್ಲಿ ನಡೆದಿದೆ.

ಕೆ ಆರ್ ಪೇಟೆಯ ಅಂಚನಹಳ್ಳಿಯ ಹೀರಾಜಮ್ಮ ಎನ್ನುವವರು ಕಳೆದ 15 ವರ್ಷಗಳ ಹಿಂದೆ‌ 100ಕ್ಕೂ ಹೆಚ್ಚು ತೆಂಗಿನ ಮರಗಳನ್ನು ನೆಟ್ಟು, ಇಲ್ಲಿಯವರೆಗೂ ಪೋಷಿಸುತ್ತಾ ಬಂದಿದ್ದರು. ಮರ ನೋಡಿದರೆ ಆನಂದವಾಗುವಷ್ಟು ಫಸಲು ಬಂದಿತ್ತು. ಈ ಹದಿನೈದು ವರ್ಷ ಪಟ್ಟ ಕಷ್ಟಕ್ಕೆ ಸಾರ್ಥಕತೆ ಸಿಗುವ ಮಟ್ಟಕ್ಕೆ ಮರಗಳ ಫಲ ಕಾಣುತ್ತಿತ್ತು. ಆದರೆ ದುರಾದೃಷ್ಟವಶಾತ್ ಅಜ್ಜಿಯ ಅಷ್ಟು ಕನಸನ್ನು ಪ್ರಕೃತಿಯ ಕೋಪ ಭಗ್ನ ಮಾಡಿಟ್ಟಿದೆ.

ಕಳೆದ 15 ದಿನದಿಂದ ರಾಜ್ಯದಲ್ಲಿ ಸಾಕಷ್ಟು ಮಳೆಯಾಗುತ್ತಿದೆ. ನಿನ್ನೆ ರಾತ್ರಿಯೂ ಮಳೆ ಸುರಿದಿದ್ದು, ಬಿರುಗಾಳಿಯೂ ಜೋರಾಗಿ ಬೀಸಿದೆ. ಇದರ ಪರಿಣಾಮ ಅಜ್ಜಿಯ 90 ತೆಂಗಿನ ಮರಗಳು ನೆಲಕ್ಕೆ ಉರುಳಿವೆ. ತೆಂಗು, ಅಡಿಕೆ, ಬಾಳೆ ಎಲ್ಲವೂ ನೆಲದ ಪಾಲಾಗಿವೆ. ಇದನ್ನು ಕಂಡು ಅಜ್ಜಿಗೆ ಆಘಾತವಾಗಿದೆ. ಊರವರೆಲ್ಲಾ ಸಮಾಧಾನ ಮಾಡಿದರೂ ಅಜ್ಜಿ ಸಮಾಧಾನವಾಗದೆ, ಊಟ ತಿಂಡಿ ಬಿಟ್ಟು ಕೂತಿದ್ದಾರೆ. ಘಟನಾ ಸ್ಥಳಕ್ಕೆ ಬಂದ ತಹಶೀಲ್ದಾರ್ ಅಜ್ಜಿಗೆ ಸಮಾಧಾನದ ಮಾತಗಳನ್ನು ಹೇಳಿ, ಪರಿಹಾರ ನೀಡುವ ಭರವಸೆ ನೀಡಿದ್ದಾರೆ.

Facebook
Twitter
Telegram
WhatsApp
suddionenews

suddionenews

Leave a Comment

Top Stories

ಆಗ್ನೇಯ ಶಿಕ್ಷಕರ ಕ್ಷೇತ್ರದ ಚುನಾವಣೆ : ಜೂನ್ 3 ರಂದು ಮತದಾನ : ಜಿಲ್ಲಾಧಿಕಾರಿ ಟಿ.ವೆಂಕಟೇಶ್

ಚಿತ್ರದುರ್ಗ. ಮೇ.03: ಆಗ್ನೇಯ ಶಿಕ್ಷಕರ ಕ್ಷೇತ್ರದ ವಿಧಾನ ಪರಿಷತ್ ಸದಸ್ಯರ ಆಯ್ಕೆಯ ಚುನಾವಣೆಗೆ ವೇಳಾಪಟ್ಟಿ ಪ್ರಕಟವಾಗಿದೆ. ಚಿತ್ರದುರ್ಗ ಜಿಲ್ಲೆಯಲ್ಲಿ 4615 ಮತದಾರರು ಇದ್ದು , ಜೂನ್ 3 ರಂದು ಮತದಾನ ಜರುಗಲಿದೆ ಎಂದು ಆಗ್ನೇಯ

ಚಿತ್ರದುರ್ಗದ ರಾಜಬೀದಿಗಳಲ್ಲಿ ವಿಜೃಂಭಣೆಯಿಂದ ಸಾಗಿದ ಏಕನಾಥೇಶ್ವರಿ ಅಮ್ಮನವರ ಮೆರವಣಿಗೆ ಮತ್ತು ಗ್ರಾಮ ದೇವತೆ ಬರಗೇರಮ್ಮನವರ ಮೆರವಣಿಗೆ

  ವರದಿ ಮತ್ತು ಫೋಟೋ ಕೃಪೆ ಕೆ.ಎಂ.ಮುತ್ತುಸ್ವಾಮಿ ಕಣ್ಣನ್,  ಮೊ : 78998 64552 ಸುದ್ದಿಒನ್, ಚಿತ್ರದುರ್ಗ, ಮೇ. 03 : ಏಕನಾಥೇಶ್ವರಿ ಅಮ್ಮನ ಮೆರವಣಿಗೆ ನಗರದ ರಾಜಬೀದಿಗಳಲ್ಲಿ ಶುಕ್ರವಾರ ವಿಜೃಂಭಣೆಯಿಂದ ನಡೆಯಿತು. ಕೋಟೆ

ನೇಹಾ ಹತ್ಯೆ ವೇಳೆ ನೆರವಿಗೆ ಧಾವಿಸಿದ ಜೋಶಿ ವಿರುದ್ಧ ಪ್ರಚಾರ ಮಾಡ್ತಿದ್ದೀರಾ ಎಂದು ಕೇಳಿದ್ದಕ್ಕೆ ನೇಹಾ ತಂದೆ ಏನಂದ್ರು..?

ಹುಬ್ಬಳ್ಳಿ: ಲೋಕಸಭಾ ಚುನಾವಣೆಯ ಮೊದಲ ಹಂತದ ಚುನಾವಣೆ ನಡೆದಿದ್ದು, ಈಗ ಎರಡನೇ ಹಂತದ ಚುನಾವಣೆಗೆ ಭರ್ಜರಿ ಪ್ರಚಾರ ಕಾರ್ಯವೂ ನಡೆಯುತ್ತಿದೆ. ಹುಬ್ಬಳ್ಳಿ ಧಾರವಾಢ ಕಾಂಗ್ರೆಸ್ ಅಭ್ಯರ್ಥಿಯಾಗಿ ವಿನೋದ್ ಸೂಟಿ ಸ್ಪರ್ಧೆ ಮಾಡಿದ್ದು ಅದಕ್ಕೆ ವಿರುದ್ಧ

error: Content is protected !!