Warning: Undefined array key "options" in /home/nagendra/public_html/content/plugins/elementor-pro/modules/theme-builder/widgets/site-logo.php on line 124

15 ವರ್ಷದ ಹಿಂದೆ ನೆಟ್ಟಿದ್ದ ತೆಂಗಿನ ಮರ ಫಸಲು ಕೊಡುವ ಸಮಯಕ್ಕೆ ಪ್ರಕೃತಿ ಮುನಿಸಿಗೆ ನಾಶ.!

Facebook
Twitter
Telegram
WhatsApp

ಮಂಡ್ಯ: ವ್ಯವಸಾಯ ಎಂದರೆ ಮೊದಲೆ ಮೂಗು ಮುರಿಯುವ ಜನ ಹೆಚ್ಚು. ಇದರ ನಡುವೆ ಹಾಗೋ ಹೀಗೋ ಕಷ್ಟಪಟ್ಟು ವ್ಯವಸಾಯವನ್ನು ಮಾಡಿದವರಿಗೆ ಪ್ರಕೃತಿಯ ಮುನಿಸಿನಿಂದಾಗಿ ಎಲ್ಲವೂ ನೆಲಸಮವಾಗಿ ಹೋದರೆ ಪರಿಸ್ಥಿತಿ ಹೇಗಿರಬೇಡ. ಅಂತದ್ದೊಂದು ಹೃದಯ ವಿದ್ರಾವಕ ಘಟನೆ ಮಂಡ್ಯ ಜಿಲ್ಲೆಯಲ್ಲಿ ನಡೆದಿದೆ.

ಕೆ ಆರ್ ಪೇಟೆಯ ಅಂಚನಹಳ್ಳಿಯ ಹೀರಾಜಮ್ಮ ಎನ್ನುವವರು ಕಳೆದ 15 ವರ್ಷಗಳ ಹಿಂದೆ‌ 100ಕ್ಕೂ ಹೆಚ್ಚು ತೆಂಗಿನ ಮರಗಳನ್ನು ನೆಟ್ಟು, ಇಲ್ಲಿಯವರೆಗೂ ಪೋಷಿಸುತ್ತಾ ಬಂದಿದ್ದರು. ಮರ ನೋಡಿದರೆ ಆನಂದವಾಗುವಷ್ಟು ಫಸಲು ಬಂದಿತ್ತು. ಈ ಹದಿನೈದು ವರ್ಷ ಪಟ್ಟ ಕಷ್ಟಕ್ಕೆ ಸಾರ್ಥಕತೆ ಸಿಗುವ ಮಟ್ಟಕ್ಕೆ ಮರಗಳ ಫಲ ಕಾಣುತ್ತಿತ್ತು. ಆದರೆ ದುರಾದೃಷ್ಟವಶಾತ್ ಅಜ್ಜಿಯ ಅಷ್ಟು ಕನಸನ್ನು ಪ್ರಕೃತಿಯ ಕೋಪ ಭಗ್ನ ಮಾಡಿಟ್ಟಿದೆ.

ಕಳೆದ 15 ದಿನದಿಂದ ರಾಜ್ಯದಲ್ಲಿ ಸಾಕಷ್ಟು ಮಳೆಯಾಗುತ್ತಿದೆ. ನಿನ್ನೆ ರಾತ್ರಿಯೂ ಮಳೆ ಸುರಿದಿದ್ದು, ಬಿರುಗಾಳಿಯೂ ಜೋರಾಗಿ ಬೀಸಿದೆ. ಇದರ ಪರಿಣಾಮ ಅಜ್ಜಿಯ 90 ತೆಂಗಿನ ಮರಗಳು ನೆಲಕ್ಕೆ ಉರುಳಿವೆ. ತೆಂಗು, ಅಡಿಕೆ, ಬಾಳೆ ಎಲ್ಲವೂ ನೆಲದ ಪಾಲಾಗಿವೆ. ಇದನ್ನು ಕಂಡು ಅಜ್ಜಿಗೆ ಆಘಾತವಾಗಿದೆ. ಊರವರೆಲ್ಲಾ ಸಮಾಧಾನ ಮಾಡಿದರೂ ಅಜ್ಜಿ ಸಮಾಧಾನವಾಗದೆ, ಊಟ ತಿಂಡಿ ಬಿಟ್ಟು ಕೂತಿದ್ದಾರೆ. ಘಟನಾ ಸ್ಥಳಕ್ಕೆ ಬಂದ ತಹಶೀಲ್ದಾರ್ ಅಜ್ಜಿಗೆ ಸಮಾಧಾನದ ಮಾತಗಳನ್ನು ಹೇಳಿ, ಪರಿಹಾರ ನೀಡುವ ಭರವಸೆ ನೀಡಿದ್ದಾರೆ.

Facebook
Twitter
Telegram
WhatsApp
suddionenews

suddionenews

Leave a Comment

Top Stories

ನಮ್ಮ ಮಗಳು ಅಂತವಳಲ್ಲ, ಫೋಟೋ ಹೇಗೆ ಬೇಕೋ ಹಾಗೇ ಎಡಿಟ್ ಮಾಡ್ತಾರೆ : ನೇಹಾ ತಾಯಿ ಹೇಳಿಕೆ

ಹುಬ್ಬಳ್ಳಿ : ಪ್ರೀತಿ ವಿಚಾರಕ್ಕೆ ನೇಹಾರ ಕೊಲೆಯಾಗಿದೆ. ಆರೋಪಿಯ ಬಂಧನವೂ ಆಗಿದೆ. ತನಿಖೆಯೂ ನಡೆಯುತ್ತಿದೆ. ಇದರ ನಡುವೆ ಫಯಾಜ್ ತಂದೆ-ತಾಯಿ ಕ್ಷಮಾಪ್ಪಣೆ ಕೇಳಿ, ಮಗನಿಗೆ ಶಿಕ್ಷೆಯಾಗಲಿ ಎಂದೇ ಒತ್ತಾಯಿದ್ದಾರೆ. ಇಬ್ವರು ಲವ್ ಮಾಡುತ್ತಿದ್ದರು ಅಂತ

ನೇಹಾ ಕೊಲೆ : ಶಿಕ್ಷಕರಾಗಿರುವ ಫಯಾಜ್ ತಂದೆ-ತಾಯಿ ಏನಂದ್ರು..?

ಧಾರವಾಡ: ಚೆನ್ನಾಗಿ ಓದಿ ಉಜ್ವಲ ಭವಿಷ್ಯ ಕನಸು ಕಂಡಿದ್ದ ನೇಹಾ ಜೀವನ ಕಮರಿ ಹೋಗಿದೆ. ಪ್ರೀತಿಯ ಕಾರಣವನ್ನಿಟ್ಟುಕೊಂಡು ಫಯಾಜ್ ಎಂಬಾತ ನೇಹಾಳ ಜೀವನವನ್ನೇ ಅಂತ್ಯ ಮಾಡಿದ್ದಾನೆ. ಅವನಿಗೆ ಗಲ್ಲು ಶಿಕ್ಷೆಯಾಗಲೇಬೇಕೆಂದು ಹೋರಾಟಗಳು ನಡೆಯುತ್ತಿವೆ. ಯುವತಿಯ

ಮೆಣಸಿನಕಾಯಿ ಕತ್ತರಿಸಿದ ನಂತರ ನಿಮ್ಮ ಕೈಗಳು ಉರಿಯದಂತೆ ತಡೆಯಲು ಹೀಗೆ ಮಾಡಿ….!

ಸುದ್ದಿಒನ್ : ಮೆಣಸಿನಕಾಯಿ ಕತ್ತರಿಸಿದ ನಂತರ ಕೈಗಳು ಉರಿಯುತ್ತವೆ.  ಇದು ಕೆಲವೊಮ್ಮೆ ಹೆಚ್ಚು ಆಗಬಹುದು. ಮೆಣಸಿನಕಾಯಿಯಲ್ಲಿರುವ ಕ್ಯಾಪ್ಸೈಸಿನ್ ಎಂಬ ರಾಸಾಯನಿಕವೇ ಇದಕ್ಕೆ ಕಾರಣ. ಮತ್ತು ಈ ಉರಿಯನ್ನು ಕಡಿಮೆ ಮಾಡಲು ಯಾವ ಸಲಹೆಗಳನ್ನು ಅನುಸರಿಸಬಹುದು

error: Content is protected !!