Warning: Undefined array key "options" in /home/nagendra/public_html/content/plugins/elementor-pro/modules/theme-builder/widgets/site-logo.php on line 124

ಪ್ರಿಯಾಂಕ್ ಖರ್ಗೆ ಕಂಡ್ರೆ ಯಾಕೆ ಇಷ್ಟು ಭಯ ಅಂತ ಅವ್ರನ್ನ ಕೇಳ್ಬೇಕು : ಶಾಸಕ ಪ್ರಿಯಾಂಕ್ ಖರ್ಗೆ

Facebook
Twitter
Telegram
WhatsApp

ಬೆಂಗಳೂರು: ಪ್ರಿಯಾಂಕ್ ಖರ್ಗೆ ಅವರಿಗೆ ನೀಡಿದ ನೋಟಿಸ್ ಬಗ್ಗೆ ಶಾಸಕ ಪ್ರಿಯಾಂಕ್ ಖರ್ಗೆ ಮಾತನಾಡಿದ್ದು, ನೋಟೀಸ್ ನಲ್ಲಿಯೇ ಸಾಕಷ್ಟು ತಪ್ಪು ಕಲ್ಪನೆ ಇದೆ. ಸೆಕ್ಷನ್ 91ನಲ್ಲಿ ನನಗೆ ನೋಟೀಸ್ ನೀಡಿದ್ದಾರೆ. ನಾನು ಹಾಜರಾಗಿಲ್ಲ ಅಂತ ಬಿಜೆಒಇ ನಾಯಕರು ಊರೆಲ್ಲಾ ಹೇಳಿಕೊಂಡು ಓಡಾಡುತ್ತಿದ್ದಾರಲ್ಲ, ಅವರು ಈ ಸೆಕ್ಷನ್ ಬಗ್ಗೆ ಕಾನೂನು ತಿಳಿದುಕೊಳ್ಳಬೇಕಾಗಿದೆ.

ನೋಟೀಸ್ ನಲ್ಲಿರುವುದು, ನನ್ನ ಬಳಿ ಯಾವುದಾದರೂ ದಾಖಲೆ, ವಸ್ತು ಇದ್ದರೆ ಅದನ್ನು ನೀಡಬೇಕು. ಏನಾದರೂ ಕೊಡಿ ಎಂದಿದ್ದಾರೆ. ಯಾವುದಾದರೂ ದಾಖಲೆ ಇದ್ದರೆ ಅದನ್ನು ಸಬ್ಮಿಟ್ ಮಾಡಿದರೆ ವೈಯಕ್ತಿಕವಾಗಿ ಹಾಜರಾಗುವ ಅವಶ್ಯಕತೆ ನೋಟೀಸ್ ನಲ್ಲಿದೆ. ಅದನ್ನು ಬಿಜೆಪಿ ನಾಯಕರು ತಿಳಿದುಕೊಳ್ಳಬೇಕಾಗಿದೆ ಎಂದು ಪ್ರಿಯಾಂಕ್ ಖರ್ಗೆ ಉತ್ತರ ನೀಡಿದ್ದಾರೆ.

ಇದರಲ್ಲಿ ನಾನು ಭಾಗಿಯಾಗಿದ್ದೇನೆ ಎನ್ನಿಸಿದರೆ ನೀವೂ ನನ್ನನ್ನು ಅರೆಸ್ಟ್ ಮಾಡಬಹುದು. ನಾನು ಸರ್ಕಾರಕ್ಕೆ ಸವಾಲು ಹಾಕುತ್ತೇನೆ. ನನಗೆ ಯಾವ ಭಯವೂ ಇಲ್ಲ. ಯಾರ ಮನೆಯಲ್ಲೂ ಉಂಡಿದ್ದು ಇಲ್ಲ, ತಿಂದಿದ್ದು ಇಲ್ಲ. ನಮಗ್ಯಾಕೆ ಭಯ ಇರಬೇಕು. ಸರ್ಕಾರಕ್ಕೆ ಭಯ ಬಿದ್ದು ಇಂದು ನೋಟೀಸ್ ಕೊಡುತ್ತಿದ್ದಾರೆ. ಪ್ರಿಯಾಂಕ್ ಖರ್ಗೆ ಕಂಡ್ರೆ ಯಾಕೆ ಇಷ್ಟು ಭಯ ಅಂತ ಅವ್ರನ್ನ ಕೇಳ್ಬೇಕು.

ಕೆಲವು ಶಾಸಕರು ಹೇಳ್ತಾರೆ ಪ್ರಿಯಾಂಕ್ ಖರ್ಗೆ ಹಿಟ್ ಆಂಡ್ ರನ್ ಕೆಲಸ ಮಾಡ್ತಾರೆ ಅಂತ. ಹಿಟ್ ಅಂಡ್ ರನ್ ಮಾಡುತ್ತಿದ್ದರೆ ಯಾಕೆ ತನಿಖೆಯಲ್ಲಿ ಕೂರಿಸಿದ್ದೀರಿ..?. ಬಿಟ್ ಕಾಯಿನ್ ನಲ್ಲೂ ತನಿಖೆ ನಡೆಸುತ್ತಿದ್ದೀರಾ, ಪಿಎಸ್ಐ ನಲ್ಲೂ ತನಿಖೆ ನಡೆಸುತ್ತಿದ್ದೀರಾ. ಮತ್ತೆ ಇದು ಹಿಟ್ ಅಂಡ್ ರನ್ ಹೇಗೆ ಆಯಿತು ಎಂದು ಪ್ರಶ್ನಿಸಿದ್ದಾರೆ.

Facebook
Twitter
Telegram
WhatsApp
suddionenews

suddionenews

Leave a Comment

Top Stories

ಚಿತ್ರದುರ್ಗ ಸೇರಿದಂತೆ ಹಲವೆಡೆ ಮುಂದಿನ ನಾಲ್ಕು ದಿನ ಬಿಸಿಗಾಳಿ ಮುನ್ಸೂಚನೆ..!

ಬೆಂಗಳೂರು: ಬಿಸಿ ಗಾಳಿಯನ್ನು ಕುಡಿದು ಕುಡಿದು ಜನ ನಿತ್ರಾಣರಾಗಿದ್ದಾರೆ. ಅದರಲ್ಲೂ ಕೆಲಸಕ್ಕೆಂದು ಹೋಗುವವರ ಸ್ಥಿತಿಯನ್ನು ಕೇಳುವಂತೆಯೇ ಇಲ್ಲ. ಬೆಳಗೆದ್ದು ರೆಡಿಯಾಗಿ ಆಫೀಸ್ ತಲುಪುವಷ್ಟರಲ್ಲಿ ಸುಸ್ತಾಗಿ ಹೋಗಿರುತ್ತಾರೆ. ಇಂಥ ರಣಬಿಸಿಲಿನಿಂದ ಹೆದರಿರುವ ಜನ ಮಳೆಗಾಗಿ ಕಾಯುತ್ತಿದ್ದಾರೆ.

ಕಾಲು ಕಟ್ಟಿ, ಅತ್ಯಾಚಾರ : ವಿಡಿಯೋ ನೋಡಿದ ಗೆಳೆಯರಿಂದ ಮಾಹಿತಿ : ರೇವಣ್ಣ ವಿರುದ್ಧ ದಾಖಲಾಯ್ತು ಸಂತ್ರಸ್ತೆ ಮಗನಿಂದ ದೂರ..!

ಮೈಸೂರು: ಮಾಜಿ ಸಚಿವ ಹೆಚ್ ಡಿ ರೇವಣ್ಣ ಹಾಗೂ ಸಂಸದ ಪ್ರಜ್ವಲ್ ರೇವಣ್ಣ ಕರ್ಮಕಾಂಡಗಳು ಮುಗಿಯುವಂತೆ ಕಾಣುತ್ತಿಲ್ಲ. ದಿನೇ‌ ದಿನೇ ದಾಖಲಾಗುತ್ತಿರುವ ದೂರುಗಳ ಸಂಖ್ಯೆಯು ಜಾಸ್ತಿಯಾಗುತ್ತಿದೆ. ಇದೀಗ ರೇವಣ್ಣ ವಿರುದ್ಧ ಮತ್ತೊಂದು ಕೇಸ್ ದಾಖಲಾಗಿದೆ.

ತಂಪಾಯಿತು ಬೆಂಗಳೂರು : ಸುರಿಯುತ್ತಿದ್ದಾನೆ ವರುಣರಾಯ

ಬೆಂಗಳೂರು: ಇನ್ನು ಸ್ವಲ್ಪ ದಿನ ಇದೇ ಉಷ್ಣಾಂಶ ಮುಂದುವರೆದಿದ್ದರೆ ಬೆಂಗಳೂರಿನ ಮಂದಿ ಊರು ಬಿಡಬೇಕಾಗಿತ್ತು, ಅಷ್ಟು ಬಿಸಿಲು. ಮನೆಯಿಂದ ಹೊರಗಡೆಗೆ ಕಾಲಿಟ್ಟರೆ ಮೈತುಂಬಾ ಬೆವರೇ ಸುರಿಯುತ್ತಿತ್ತು. ಇಂದು ಆ ರಣಬಿಸಿಲಿಗೆ ಮುಕ್ತಿ ಸಿಕ್ಕಿದೆ‌. ಮಳೆರಾಯ

error: Content is protected !!