Warning: Undefined array key "options" in /home/nagendra/public_html/content/plugins/elementor-pro/modules/theme-builder/widgets/site-logo.php on line 124

ಭಾರತೀಯ ಸಾಂಸ್ಕೃತಿಕ ಚರಿತ್ರೆಯ ಧೃವತಾರೆ ಆದಿಗುರು ಶಂಕರಾಚಾರ್ಯ

Facebook
Twitter
Telegram
WhatsApp

 

ದಿನಾಂಕ 06-05-2022 ರಂದು  ಶಂಕರಾಚಾರ್ಯರ ಜಯಂತಿ ನಿಮಿತ್ತ ವಿಶೇಷ ಲೇಖನ…

ಭಾರತೀಯ ಸಾಂಸ್ಕೃತಿಕ ಇತಿಹಾಸದಲ್ಲಿ ಧೃವತಾರೆಯಂತೆ ಪ್ರಕಾಶಮಾನವಾಗಿರುವ ಮಹಾನ್ ಚೇತನ, ದಾರ್ಶನಿಕ ಆದಿಗುರು ಶಂಕರಾಚಾರ್ಯ. ಸನಾತನ ಧರ್ಮಸಾರವನ್ನು ಜಗತ್ತಿಗೆ ಸಾರಿ ಹೇಳಿ, ಧರ್ಮದ ಉಳಿವಿಗಾಗಿ ದೇಶ ಸಂಚಾರ ಮಾಡಿ ಅದ್ವೈತ ತತ್ವ ಪ್ರತಿಪಾದಿಸಿದ ಶಂಕರಾಚಾರ್ಯರು ಆದಿಗುರು ಎಂದೇ ಪ್ರಸಿದ್ಧರು.

ಬಾಲ್ಯ ಜೀವನ ಹಾಗೂ ಸನ್ಯಾಸತ್ವ ಸ್ವೀಕಾರ:

ಕ್ರಿಸ್ತಶಕ ೮ನೇ ಶತಮಾನದಲ್ಲಿ ಕೇರಳದ ಪರಿಯಾರ್ ನದಿ ದಡದ ಕಾಲಡಿ ಎಂಬ ಊರಿನಲ್ಲಿ ಶಿವಗುರು ನಂಬದೂರಿ ಹಾಗೂ ಆರ್ಯಾಂಬಾ ಎಂಬ ದಂಪತಿಗಳಿಗೆ ಶಂಕರಾಚಾರ್ಯರು ಜನಿಸಿದರು. ಬಾಲ್ಯದಲ್ಲಿ ಆಗಾಧ ಜ್ಞಾನ ಹೊಂದಿದ್ದ ಶಂಕರಾಚಾರ್ಯರು ತಮ್ಮ ಎಂಟನೇ ವರ್ಷಕ್ಕೆ ನಾಲ್ಕು ವೇದಗಳನ್ನು ಕರಗತ ಮಾಡಿಕೊಂಡರು.

12 ನೇ ವಯಸ್ಸಿಗೆ ಎಲ್ಲಾ ಶಾಸ್ತ್ರಗಳಲ್ಲಿ ಪಾರಂಗತರಾದರು. ಶಂಕರಾಚಾರ್ಯರು ಓರ್ವ ದಾರ್ಶನಿಕರಷ್ಟೇ ಆಗಿರದೆ ಮಹಾನ್ ಕವಿಯು ಆಗಿದ್ದರು. ಮಗ ಮಹಾನ್ ಪುರುಷ ಆಗಬೇಕು ಎಂಬ ಇಚ್ಚೆ ತಾಯಿಗಿತ್ತು. ಆದರೆ ಶಂಕರಾಚಾರ್ಯರ ವಿಚಾರವೇ ಬೇರೆಯಾಗಿತ್ತು. ಶಂಕರಾಚಾರ್ಯರಿಗೆ ಲೌಕಿಕ ಪ್ರಪಂಚದ ಬಗ್ಗೆ ಆಸಕ್ತಿ ಇರಲಿಲ್ಲ. ಅವರ ಎಲ್ಲಾ ವಿಚಾರಗಳು ಚಿಂತನೆಗಳು, ಆಧ್ಯಾತ್ಮಿಕ ಜಗತ್ತಿನ ಕಡೆ ಸೆಳೆಯುತ್ತಿದ್ದವು. ಹಾಗಾಗಿ ತನ್ನ ತಾಯಿ ಬಳಿ ಸನ್ಯಾಸಿಯಾಗುವ ಇಚ್ಛೆ ವ್ಯಕ್ತಪಡಿಸಿದಾಗ ತಾಯಿ ಒಪ್ಪಲಿಲ್ಲ ಆದರೆ ಶಂಕರಾಚಾರ್ಯರ ತನ್ನ ತಾಯಿಯನ್ನು ಉಪಾಯವಾಗಿ ಒಪ್ಪಿಸಿ ಸನ್ಯಾಸತ್ವವನ್ನು ಸ್ವೀಕರಿಸಿದರು.

ದೇಶ ಸಂಚಾರ ಹಾಗೂ ಜ್ಞಾನಾರ್ಜನೆ:

ಸನ್ಯಾಸತ್ವ ಸ್ವೀಕರಿಸಿದ ಬಳಿಕ ಗುರುಗಳನ್ನು ಹರಸಿ ಹೊರಟ ಶಂಕರಾಚಾರ್ಯರಿಗೆ ನರ್ಮದಾ ನದಿಯ ತೀರದಲ್ಲಿ ಗುರು ಗೋವಿಂದ ಭಾಗವತ್ಪಾದರು ಸಿಗುತ್ತಾರೆ. ಗೋವಿಂದ ಭಗವತ್ಪಾದರಿಂದ ಅನೇಕ ವಿಷಯಗಳನ್ನು ತಿಳಿದು ಅವುಗಳನ್ನು ಕರಗತ ಮಾಡಿಕೊಂಡು ಜ್ಞಾನದಾಹವನ್ನು ನೀಗಿಸಿಕೊಂಡರು.

ಮತ್ತಷ್ಟು ಜ್ಞಾನ ಪಡೆಯಬೇಕೆಂದು ದೇಶ ಸಂಚಾರಕ್ಕಾಗಿ ಶಂಕರಾಚಾರ್ಯರು ಹೊರಡುತ್ತಾರೆ. ಮೂರು ಬಾರಿ ಕಾಲ್ನಡಿಗೆಯಲ್ಲಿ ದೇಶವನ್ನು ಸಂಚರಿಸುತ್ತಾರೆ. ದೇಶದ ಪುರಿ, ಕಾಶ್ಮೀರ, ನೇಪಾಳ, ಬನಾರಸ್, ಬದ್ರಿನಾಥ, ದ್ವಾರಕ, ಕಂಚಿ ಹೀಗೆ ಹಲವಾರು ಪ್ರದೇಶಗಳಿಗೆ ಭೇಟಿ ನೀಡುತ್ತಾರೆ. ಇಡೀ ದೇಶ ಸಂಚಾರದಿಂದ ಅವರಿಗೆ ನಮ್ಮ ದೇಶದ ವಾಸ್ತವ ಏನು ಎಂಬುದು ಅರಿವಾಗುತ್ತದೆ. ಆ ವಾಸ್ತವನ್ನು ದೃಷ್ಟಿಯಲ್ಲಿಟ್ಟುಕೊಂಡು ತಮ್ಮ ಚಿಂತನೆಗಳನ್ನು ಆರಂಭಿಸಿದರು.

ಅದ್ವೈತ ಸಿದ್ಧಾಂತ ಹಾಗೂ ಶಕ್ತಿಪೀಠಗಳು:

ಅದ್ವೈತ ತತ್ವವನ್ನು ದೇಶದ ಮೂಲೆ ಮೂಲೆಗೂ ಸಾರಲು ಶಂಕರಾಚಾರ್ಯರು ನಾಲ್ಕು ದಿಕ್ಕುಗಳಲ್ಲಿ ಶಕ್ತಿ ಪೀಠಗಳನ್ನು ಸ್ಥಾಪಿಸಿದರು. ಉತ್ತರದಲ್ಲಿ ಬದರಿ ಜ್ಯೋತಿರ್ ಮಠ, ದಕ್ಷಿಣದಲ್ಲಿ ಶೃಂಗೇರಿ ಶರದಾ ಪೀಠ, ಪೂರ್ವದಲ್ಲಿ ಪುರಿ ಗೋವರ್ಧನ ಪೀಠ, ಪಶ್ಚಿಮದಲ್ಲಿ ದ್ವಾರಕ ಕಾಳಿಕಾ ಪೀಠಗಳು ಇಂದಿಗೂ ಈ ನಾಲ್ಕೂ ಮಠಗಳು ತಮ್ಮ ಗುರು ಪರಂಪರೆಯನ್ನು ಮುಂದುವರಿಸಿಕೊಂಡು ಬಂದಿದ್ದು ಅದ್ವೈತ ತತ್ವಗಳನ್ನು ಸಾರುತ್ತಿವೆ. ಅದ್ವೈತವೆಂದರೆ ಅಂದರೆ ಜೀವ ಮತ್ತು ಆತ್ಮ ‘ಒಂದೇ’ ಆಗಿರುವುದು. ಜೀವಿಯಲ್ಲಿರುವ ಆತ್ಮನೂ, ಪರಮ ಸತ್ಯವಾದ ಬ್ರಹ್ಮ ಚೈತನ್ಯವೂ ಒಂದೇ ಎಂಬುದು ಇದರ ಸಾರ.

ವಿವಿಧ ಪಂಥಗಳ ಒಗ್ಗೂಡಿಕೆ ಹಾಗೂ‌ ಸನಾತನ ಧರ್ಮದ ಪುನರುತ್ಥಾನ:

ಜ್ಞಾನ ಸಾಧನೆಯ ಮೂಲಕ ಜಗದ್ಗುರು ಎಂಬ ಬಿರುದು ಪಡೆದುಕೊಂಡ ಹೆಗ್ಗಳಿಗೆ ಶಂಕರಾಚಾರ್ಯರದ್ದು. ದೇಶ ಸಂಚಾರ ಸಂದರ್ಭದಲ್ಲಿ ದೇಶದಲ್ಲಿ ವಿವಿಧ ಪಂಥಗಳ ಬಗ್ಗೆ ಅರಿತುಕೊಂಡ ಶಂಕರಾಚಾರ್ಯರು ಅವುಗಳ ನಡುವಿನ ಭೇಧವನ್ನು ಹೋಗಲಾಡಿಸಿ ಸನಾತನ ಧರ್ಮದ ಪುನರುತ್ಥಾನಕ್ಕೆ ಶ್ರಮಿಸಿದರು.
ಶೈವ, ವೈಷ್ಣವ, ಶಕ್ತಿ ಸೇರಿದಂತೆ ಅನೇಕ ಪಂಥಗಳು ಒಗ್ಗೂಡಲು. ಸನಾತನ ಧರ್ಮದ ಆರು ದೇವರುಗಳಾದ ಶಿವ, ಶಕ್ತಿ, ಕುಮಾರ, ಗಣೇಶ, ಸೂರ್ಯ, ವಿಷ್ಣುವಿಗೆೆ ಪ್ರಾಮುಖ್ಯತೆಯನ್ನು ನೀಡಿ ಪೂಜೆಗೆ ಅವಕಾಶ ಕಲ್ಪಿಸಿಕೊಡುತ್ತಾರೆ. ಎಲ್ಲ ಪಂಥಗಳನ್ನು ಒಗ್ಗೂಡಿಸಿದ ಶಂಕರಾಚಾರ್ಯರಿಗೆ ಷಣ್ಮಥಸ್ಥಾಪನಾಚಾರ್ಯ ಎಂದು ಬಿರುದು ಲಭಿಸಿತು.

ಶಂಕರಾಚಾರ್ಯರ ಪ್ರಮುಖ ಕೃತಿಗಳು:

ಸೌಂದರ್ಯಲಹರಿ, ವಿವೇಕಚೂಡಾಮಣಿ, ಉಪದೇಶಸಾಹಸ್ರೀ, ಆನಂದಲಹರಿ, ದಕ್ಷಿಣಾಮೂರ್ತಿಸ್ತೋತ್ರ, ಚರ್ಪಟಮಂಜರಿಕಾ (ಭಜಗೋವಿಂದಮ್), ಗೋಪಾಲಾಷ್ಟಕ, ದಶಶ್ಲೋಕೀ, ಮನೀಷಾಪಂಚಕ, ನಿರ್ವಾಣಮಂಜರೀ, ಯತಿಪಂಚಕ ಸೇರಿದಂತೆ ಇನ್ನೂರಕ್ಕೂ ಹೆಚ್ಚಿನ ಕೃತಿಗಳನ್ನು ಶಂಕರಾಚಾರ್ಯರರು ರಚಿಸಿದ್ದಾರೆ.

ಶಂಕರಾಚಾರ್ಯರ ಬೋಧನೆ ಹಾಗೂ ತತ್ವಗಳು:

ಶಂಕರಾಚಾರ್ಯರು ಅದ್ವೈತ ಸಿದ್ದಾಂತವನ್ನು ಪ್ರತಿಪಾದಿಸುತ್ತಾರೆ. ಅದ್ವೈತ ಎಂದರೆ ಎರಡಲ್ಲದ್ದು, ಏಕತ್ವ ಎಂಬ ಅರ್ಥವನ್ನು ನೀಡುತ್ತದೆ. ಆತ್ಮ ಮತ್ತು ಪರಮಾತ್ಮ ಒಂದೇ ಅವು ಬೇರೆ ಬೇರೆ ಅಲ್ಲ ಎಂದು ಶಂಕರಾಚಾರ್ಯರು ತಿಳಿಸಿದರು.

ದೇವರು ನಿರ್ಗುಣ, ನಿರಾಕಾರ, ಸ್ವಪ್ರಕಾಶಶವುಳ್ಳವನೇ ಬ್ರಹ್ಮ, ಬ್ರಹ್ಮ ಅಂತಿಮ ಸತ್ಯ ಎಂದು ಹೇಳಿದರು. ಶಂಕರಾಚಾರ್ಯರು ಮಾಯಾವಾದ ಸಿದ್ಧಾಂತದಲ್ಲಿ ಲೌಕಿಕ ಪ್ರಪಂಚ ಸುಳ್ಳು ಆಧ್ಯಾತ್ಮಿಕ ಪ್ರಪಂಚ ಸತ್ಯ ಎಂದು ತಿಳಿಸುತ್ತಾರೆ. ‘ಅಹಂ ಬ್ರಹ್ಮಾಸ್ಮಿ’ನಾನೇ ಬ್ರಹ್ಮ ಎಂದು ಹೇಳುತ್ತಾರೆ. ನನ್ನಲ್ಲಿ ಆತ್ಮ ಮತ್ತು ಪರಮಾತ್ಮ ಇಬ್ಬರು ಇದ್ದಾರೆ. ಈ ಐಕ್ಯ ಭಾವವೇ ಅಹಂ ಬ್ರಹ್ಮಾಸ್ಮಿ ಅರ್ಥ ಎಂದು ಬೋದಿಸಿದರು.ಮೋಕ್ಷಕ್ಕೆ ಜ್ಞಾನ ಮಾರ್ಗವಿದೆ. ಮೋಕ್ಷ ಸಾಧನೆಗೆ ನಮ್ಮಲ್ಲಿರುವ ಒಳ್ಳೆಯ ತನದ ಅರಿವು ಮುಖ್ಯ ಎಂದು ತಿಳಿಸುತ್ತಾರೆ.
ಜಾತಿ ಪದ್ದತಿ, ಮೂಢ ನಂಬಿಕೆ ಕಂದಾಚಾರಗಳಿಗೆ ಒಳಗಾಗಿ, ಅನ್ಯ ಧರ್ಮಗಳಿಂದ ಬಗ್ಗೆ ಸಾಕಷ್ಟು ಟೀಕೆಗೆ ಒಳಗಾಗಿದ್ದ ಸನಾತನ ಧರ್ಮದ ಪುನರುತ್ಥಾನಕ್ಕೆ ಶಂಕರಚಾರ್ಯರು ಶ್ರಮಿಸಿದರು. ಭಾರತೀಯ ವೈಚಾರಿಕ ರಂಗದಲ್ಲಿ ಕ್ರಾಂತಿಯನ್ನು ಉಂಟುಮಾಡಿದ ಶಂಕರಚಾರ್ಯರು ಕಾಶ್ಮೀರದ ಸರ್ವಜ್ಞ ಪೀಠ ಅಂಕರಿಸಿದ್ದರು.

32 ವಯಸ್ಸಿಗೆ ಇಹಲೋಹ ತ್ಯಜಿಸಿದ ಶಂಕರಚಾರ್ಯರ ತತ್ವಗಳು ಇಂದಿಗೂ ಸಾರ್ವಕಾಲಿಕ ಮೌಲ್ಯಗಳನ್ನು ಒಳಗೊಂಡಿವೆ.

ವಿಶೇಷ ಲೇಖನ :
ನಾಗವೇಣಿ.ಎಸ್
ಪ್ರಶಿಕ್ಷಣಾರ್ಥಿ, ವಾರ್ತಾ ಇಲಾಖೆ, ಚಿತ್ರದುರ್ಗ

Facebook
Twitter
Telegram
WhatsApp
suddionenews

suddionenews

Leave a Comment

Top Stories

Cold Water Side Effects : ಬೇಸಿಗೆಯಲ್ಲಿ ಫ್ರಿಡ್ಜ್ ನಲ್ಲಿರುವ ತಣ್ಣೀರು ಕುಡಿದರೆ ಎಷ್ಟೆಲ್ಲಾ ಸಮಸ್ಯೆ ಗೊತ್ತಾ ?

  ಸುದ್ದಿಒನ್ : ಈ ಬೇಸಿಗೆಯ ತಾಪವನ್ನು ನಿವಾರಿಸಲು ತಣ್ಣೀರಿಗಿಂತ ಉತ್ತಮ ಪರ್ಯಾಯವಿಲ್ಲ. ಅದಕ್ಕಾಗಿಯೇ ನಮ್ಮಲ್ಲಿ ಹೆಚ್ಚಿನವರು ಬಿಸಿಲಿನಿಂದ ಮನೆಗೆ ಬಂದ ತಕ್ಷಣ ರೆಫ್ರಿಜರೇಟರ್‌ನಿಂದ ತಣ್ಣೀರು ಕುಡಿಯುವ ಅಭ್ಯಾಸವನ್ನು ಹೊಂದಿರುತ್ತಾರೆ. ಆದರೆ ಈ ರೀತಿ

ಈ ರಾಶಿಯ ಪದವಿ ಪಡೆದವರು ಉನ್ನತ ಶ್ರೇಣಿಯ ಉದ್ಯೋಗ ಪ್ರಾಪ್ತಿ

ಈ ರಾಶಿಯ ಜನಪ್ರತಿನಿಧಿಗಳಿಗೆ ಆತ್ಮೀಯರಿಂದ ಕಂಟಕ, ಈ ರಾಶಿಯ ಪದವಿ ಪಡೆದವರು ಉನ್ನತ ಶ್ರೇಣಿಯ ಉದ್ಯೋಗ ಪ್ರಾಪ್ತಿ, ಈ ರಾಶಿಯ ವಿವಾಹಿತ ಜೀವನವು ಸಂತೋಷವಾಗಿ ಕಾಣುತ್ತದೆ, ಶುಕ್ರವಾರ-ರಾಶಿ ಭವಿಷ್ಯ ಮೇ-3,2024 ಸೂರ್ಯೋದಯ: 05:52, ಸೂರ್ಯಾಸ್ತ

ಸಾಹಿತಿ ಬಿ.ಎಲ್.ವೇಣು ನಿವಾಸಕ್ಕೆ ಶಾಸಕ ಕೆ.ಸಿ.ವೀರೇಂದ್ರ ಪಪ್ಪಿ ಭೇಟಿ

ಸುದ್ದಿಒನ್, ಚಿತ್ರದುರ್ಗ, ಮೇ. 02 :  ಖ್ಯಾತ ಸಾಹಿತಿ, ಚಿಂತಕ ಬಿ.ಎಲ್.ವೇಣು ಅವರ ನಿವಾಸಕ್ಕೆ ಸ್ಥಳೀಯ ಶಾಸಕ ಕೆ.ಸಿ.ವೀರೆಂದ್ರ ಪಪ್ಪಿ ಅವರು ಭೇಟಿ ಮಾಡಿ, ಆಶೀರ್ವಾದ ಪಡೆದು, ಅಭಿವೃದ್ಧಿ ಕಾರ್ಯಗಳ ಬಗ್ಗೆ ಸಲಹೆಗಳನ್ನು ಪಡೆದರು.

error: Content is protected !!