Warning: Undefined array key "options" in /home/nagendra/public_html/content/plugins/elementor-pro/modules/theme-builder/widgets/site-logo.php on line 124

ನಾನು ಕೇಳಿದ್ದು ಅವರು ಕಟ್ಟಿಸಿಕೊಂಡಿರುವ ಮನೆಯಲ್ಲ, ಬಡವರಿಗೆ ಕಟ್ಟಿರುವ ಮನೆ : ಸಿದ್ದರಾಮಯ್ಯ

Facebook
Twitter
Telegram
WhatsApp

ಮೈಸೂರು: ಸಿದ್ದರಾಮಯ್ಯ ಅವರು ನನ್ನ ಜೊತೆ ಬಂದರೆ ಕಟ್ಟಿಸಿರುವ ಮನೆಗಳನ್ನು ತೋರಿಸುತ್ತೇನೆ ಅಂತ ವಸತಿ ಸಚಿವ ವಿ ಸೋಮಣ್ಣ ಸವಾಲು ಹಾಕಿದ್ದರು. ಅದಕ್ಕೆ ಉತ್ತರ ನೀಡಿರುವ ಸಿದ್ದರಾಮಯ್ಯ ಅವರು, ನಾಲ್ಕು ವರ್ಷ ಆಯ್ತು ಇವ್ರ ಕೈನಲ್ಲಿ ಒಂದ್ ಮನೆ ಕೊಡೋದಕ್ಕೆ ಆಗಿಲ್ಲ. ನಾವೂ ಕೊಟ್ಟಿರುವ ಮನೆಗಳನ್ನು ಕಟ್ಟಿಸಿದ್ದೀವಿ ಅಂತ ಹೇಳ್ತಾರೆ. ಸೋಮಣ್ಣ ಹೇಳಿದ್ದಾರೆ. ನಾನು ಕೇಳಿದ್ದು ಅವರು ಕಟ್ಟಿಸಿಕೊಂಡಿರುವ ಮನೆಗಳನ್ನಲ್ಲ ಬಡವರಿಗೆ ಕಟ್ಟಿಸಿಕೊಟ್ಟಿರುವ ಮನೆಗಳನ್ನು ಹೇಳಿರುವುದು ನಾನು ಎಂದು ವ್ಯಂಗ್ಯವಾಡಿದ್ದಾರೆ.

ಬಂದು ನೋಡಿ ಮನೆ ಕಟ್ಟಿರುವುದನ್ನು ಅಂತ ಹೇಳಿದ್ರೆ ಏನು ಹೇಳೋದಕ್ಕೆ ಆಗುತ್ತೆ. ಹೊಸದಾಗಿ ಮಂಜೂರು ಮಾಡಿದ್ದರೆ ಏನಾದರೂ ಹೇಳಬಹುದಿತ್ತು. ನಾಲ್ಕು ವರ್ಷದಲ್ಲಿ ಒಂದೇ ಒಂದು ಮನೆ ಮಂಜೂರು ಮಾಡಿರುವಂತ ಆರ್ಡರ್ಸ್ ಕೊಡಲಿ. ನಾವೂ ಕಟ್ಟಿಸಿರುವ ಮನೆಗಳನ್ನು ತೋರಿಸುವುದಕ್ಕೆ ನೀನೆ ಬೇಕಾ.‌ ಅಧಿಕಾರಕ್ಕೆ ಬಂದು ಮೂರು ವರ್ಷ ಆಯ್ತಲ್ಲ ಈ ಮೂರು ವರ್ಷದಲ್ಲಿ ಒಂದು ಮನೆ ಮಂಜೂರು ಮಾಡಿದ್ದೀನಿ ಅಂತ ತೋರಿಸಲಿ. ಯಡಿಯೂರಪ್ಪ ಇದ್ದಾಗ ಎರಡು ವರ್ಷ, ಬಸವರಾಜ್ ಇದ್ದಾಗ ಒಂದು ವರ್ಷ ಮನೆ ಮಂಜೂರು ಮಾಡಿರುವುದರ ಆರ್ಡರ್ ಕಾಪಿ ತೋರಿಸಿ ಎಂದಿದ್ದಾರೆ.

ಇದೇ ವೇಳೆ ಬಿಜೆಪಿಯ ಬಗ್ಗೆ ಆಕ್ರೋಶ ವ್ಯಕ್ತಪಡಿಸಿದ ಸಿದ್ದರಾಮಯ್ಯ, ಜನರ ತೆರಿಗೆ ಹಣವನ್ನು ಲೂಟಿ ಹೊಡೆಯುತ್ತಿದೆಯಲ್ಲ ಅದಕ್ಕೆ ಉತ್ತರ ಕೊಡಿ. ಹಿಂದೆ ನಡೆದಿತ್ತು. ಹಿಂದೆ ನಡೆದಾಗ ನೀವೇನು ಮಾಡ್ತಾ ಇದ್ರಿ. ಈ ರೀತಿ ಪದ ಮಾತಾಡಬಾರದು. ಕೇಂದ್ರದಲ್ಲೂ ನೀವೇ ಅಧಿಕಾರದಲ್ಲಿದ್ದೀರಿ. ಇಲ್ಲು ನೀವೇ ಅಧಿಕಾರದಲ್ಲಿದ್ದೀರ. ಮಾಡ್ಸಿ ಕೆಲಸಗಳನ್ನು. ನಮ್ಮ ತಪ್ಪುಗಳಿದ್ದರೆ ವಿಚಾರಣೆ ನಡೆಸಿ. ನಿಮ್ಮ ತಪ್ಪುಗಳಿದ್ದರೆ ಜೈಲಿಗೆ ಹೋಗಿ ಎಂದಿದ್ದಾರೆ.

Facebook
Twitter
Telegram
WhatsApp
suddionenews

suddionenews

Leave a Comment

Top Stories

ಈ ರಾಶಿಯ ಇಂಟೀರಿಯರ್ ಡಿಸೈನ್ ಮಾಡುವವರಿಗೆ ಧನ ಲಾಭ

ಈ ರಾಶಿಯ ಇಂಟೀರಿಯರ್ ಡಿಸೈನ್ ಮಾಡುವವರಿಗೆ ಧನ ಲಾಭ, ಈ ಪಂಚ ರಾಶಿಗಳಿಗೆ ಆಕಸ್ಮಿಕ ಧನ ಲಾಭ ಪ್ರಾಪ್ತಿ,   ಗುರುವಾರ ರಾಶಿ ಭವಿಷ್ಯ ಏಪ್ರಿಲ್-25,2024 ಸೂರ್ಯೋದಯ: 05:57, ಸೂರ್ಯಾಸ್ತ : 06:30 ಶಾಲಿವಾಹನ

ಅಣ್ಣಾವ್ರಿಗೆ ಅಣ್ಣಾವ್ರೇ ಸಾಟಿ, ಹಿರಿಯೂರಲ್ಲಿ ಬಿ.ಎನ್.ಚಂದ್ರಪ್ಪ ಬಣ್ಣನೆ

ಸುದ್ದಿಒನ್, ಚಿತ್ರದುರ್ಗ, ಏ. 24 :  ಮುಖ್ಯಮಂತ್ರಿ ಸ್ಥಾನವನ್ನು ಸುಲಭವಾಗಿ ಅಲಂಕರಿಸುವ ಬಂದಿದ್ದ ಅವಕಾಶವನ್ನು ನಿರಾಕರಿಸಿ, ಕನ್ನಡ ನಾಡು-ನುಡಿಗೆ ಬದುಕು ಮಿಸಲಿಟ್ಟ ಡಾ.ರಾಜಕುಮಾರ್ ಅವರಿಗೆ ಅವರೇ ಸಾಟಿ ಎಂದು ಕಾಂಗ್ರೆಸ್ ಅಭ್ಯರ್ಥಿ ಬಿ.ಎನ್.ಚಂದ್ರಪ್ಪ ಬಣ್ಣಿಸಿದರು.

ಭದ್ರಾ ಮೇಲ್ದಂಡೆ ಯೋಜನೆ ಬಗ್ಗೆ ಸುಳ್ಳು ಹೇಳಿದರೆ ತಾಯಿ ಭದ್ರೆ ಸಹಿಸುವುದಿಲ್ಲ : ಕಮಲ ಪಡೆಗೆ ಕಾಂಗ್ರೆಸ್ ಅಭ್ಯರ್ಥಿ ಬಿ.ಎನ್.ಚಂದ್ರಪ್ಪ ತಿರುಗೇಟು

ಸುದ್ದಿಒನ್, ಚಿತ್ರದುರ್ಗ, ಏ. 24 : ಭದ್ರಾ ಮೇಲ್ದಂಡೆ ಯೋಜನೆ ವಿಷಯದಲ್ಲಿ ನಿರಂತರ ಸುಳ್ಳು ಹೇಳಿಕೊಂಡು ಬರುತ್ತಿರುವ ಬಿಜೆಪಿಯವರಿಗೆ ಭದ್ರಾ ಮೇಲ್ದಂಡೆ ಯೋಜನೆ ಜಾರಿ, ಅದಕ್ಕಾಗಿ ನಡೆದ ಹೋರಾಟದ ಮಾಹಿತಿ ಕೊರತೆ ಇದೆ ಅಥವಾ

error: Content is protected !!