ಶಿವಮೊಗ್ಗ: ಕುಮಾರಸ್ವಾಮಿ ಅವರು ಸಿದ್ದರಾಮಯ್ಯ ಅವರು, ಡಿ ಕೆ ಶಿವಕುಮಾರ್ ಅವರು, ಜಮೀರ್ ಅಹ್ಮದ್ ಈ ನಾಲ್ಕು ಜನ ರಾಜ್ಯಕ್ಕೆ ಒಂದು ರೀತಿಯ ಕಂಟಕವಿದ್ದಂತೆ. ರಾಜ್ಯವನ್ನ ಅಭಿವೃದ್ಧಿ ಮಾಡೋದಕ್ಕೆ ಆಸಕ್ತಿ ಇಲ್ಲ. ಮುಸಲ್ಮಾನರನ್ನು ಹಾಳು ಮಾಡೋದಕ್ಕಾಗಿಯೇ ಇವರು ಇರುವುದು. ಯಾಕಂದ್ರೆ ಹಿಜಾಬ್ ವಿವಾದ ಆಯ್ತು. ಹಿಜಾಬ್ ವಿಚಾರದಲ್ಲಿ ಆರೇ ಜನ ವಿದ್ಯಾರ್ಥಿಗಳು ಹಿಜಾಬ್ ಹಾಕದೆ ಹೋಗಲ್ಲ ಶಿಕ್ಷಣ ಬೇಕಾದ್ರೆ ಬಿಡ್ತೀವಿ. ಧರ್ಮ ಬಿಡಲ್ಲ ಅಂತ ಹಠ ಮಾಡಿದ್ರು.
ಆಗ ಈ ನಾಲ್ಕು ಜನ ಆ ಹೆಣ್ಣು ಮಕ್ಕಳಿಗೆ ಬುದ್ಧಿ ಹೇಳಿದ್ರೆ ರಾಜ್ಯದಲ್ಲಿ ಈ ಪರಿಸ್ಥಿತಿ ಬರುತ್ತಿರಲಿಲ್ಲ. ಕಡೆಗೆ ಕೋರ್ಟ್ ಕೂಡ ಹೇಳಿದೆ. ಸಮವಸ್ತ್ರ ಹಾಕೊಂಡು ಹೋಗಿ, ಹುಜಾಬ್ ಹಾಕಿಕೊಂಡು ಹೋಗಬೇಡಿ ಎಂದು. ಇತ್ತ ಕೋರ್ಟ್ ಮಾತನ್ನು ತಿರಸ್ಕಾರ ಮಾಡಿದ್ರು. ಅವರು ಬಂದ್ ಮಾಡಿದಾಗ ಶಾಂತಿಯಿಂದ ಸಹಕಾರ ಕೊಡಬೇಕು ಅಂತ ಇದೆ ಪುಣ್ಯಾತ್ಮ ನಾಲ್ಕು ಜನ ಹೇಳಿದ್ರು.
ಇವತ್ತು ಇದೇ ನಾಲ್ಕು ಜನ ಧ್ವನಿವರ್ಧಕದ ಬಗ್ಗೆ ಮಾತಾಡುತ್ತಿದ್ದಾರೆ. ಹಾಗಾದ್ರೆ ಇವರಿಗೆ ಸಂವಿಧಾನದ ಬಗ್ಗೆ ಗೌರವ ಇದೆಯಾ..? ಕೋರ್ಟ್ ಬಗ್ಗೆ ಗೌರವ ಇದೆಯಾ..? ಸಂವಿಧಾನ ಕೋರ್ಟ್ ಏನ್ ಹೇಳುತ್ತೆ. ರಾತ್ರಿ 10 ಗಂಟೆಯಿಂದ ಬೆಳಗ್ಗೆ 6 ಗಂಟೆಯ ತನಕ ಧ್ವನಿವರ್ಧಕ ಹಾಕುವ ಹಾಗಿಲ್ಲ. ಇವರೇ ತುಂಬಾ ಸ್ಪಷ್ಟವಾಗಿ ಹೇಳಬೇಕಿತ್ತು. ಸಂವಿಧಾನಕ್ಕೆ ಗೌರವ ಕೊಡಿ, ಕೋರ್ಟ್ ಗೆ ಗೌರವ ಕೊಡಿ. ದೇವಸ್ಥಾನ, ಚರ್ಚ್, ಮಸೀದಿ ಇರಬಹುದು. ಮುಸಲ್ಮಾನರಲ್ಲಿ ಗೊಂದಲ ಹುಟ್ಟು ಹಾಕುತ್ತಿರುವುದೇ ಈ ನಾಲ್ಕು ಜನ ಎಂದು ಕಿಡಿಕಾರಿದ್ದಾರೆ.