Warning: Undefined array key "options" in /home/nagendra/public_html/content/plugins/elementor-pro/modules/theme-builder/widgets/site-logo.php on line 124

ಅಮಿತ್ ಶಾ ಮಠಕ್ಕೆ ಬಂದ್ರು, ಹೆಲಿಕಾಪ್ಟರ್ ಹತ್ತಿ ಹೋದ್ರು.. ಭಾರತ ರತ್ನ ಪ್ರಶಸ್ತಿ ಎಲ್ಲಿ : ವಾಟಾಳ್ ನಾಗರಾಜ್ ಪ್ರಶ್ನೆ

Facebook
Twitter
Telegram
WhatsApp

ರಾಮನಗರ: ಸಿದ್ದಗಂಗಾ ಶ್ರೀಗಳಿಗೆ ಭಾರತ ರತ್ನ ನೀಡುವ ಬಗ್ಗೆ ವಾಟಾಳ್ ನಾಗರಾಜ್ ಪ್ರಶ್ನೆ ಎತ್ತಿದ್ದಾರೆ. ಈ ಬಗ್ಗೆ ಮಾತನಾಡಿದ ಅವರು, ರಾಜ್ಯದಲ್ಲಿ ಏನು ಆಗುತ್ತಾ ಇದೆ ಅಂತ ಯಾರು ಊಹಿಸೋದಕ್ಕೆ ಸಾಧ್ಯವಾಗುತ್ತಿಲ್ಲ. ಕಾಂಗ್ರೆಸ್, ಬಿಜೆಪಿ, ಜೆಡಿಎಸ್, ನಾಲ್ಕು ಜನ ಮುಖಂಡರು ಅವರು ಯಾವ ಮೂಲೆಯಲ್ಲಿ ಹೇಳಿದ್ರೂನು ಅವರದ್ದು ಪವಿತ್ರ ಅಂತ ತೀರ್ಮಾನವಾಗಿದೆ. ನಾನು ಬಹಳ ಗಮನಿಸ್ತಾ ಇದ್ದೀನಿ ಎಂದಿದ್ದಾರೆ.

ಸಿದ್ಧಗಂಗಾ ಮಠಕ್ಕೆ ಅಮಿತ್ ಶಾ ಬಂದಿದ್ದರು. ಯಾಕೆ ಬಂದರು ಅಲ್ಲಿಗೆ. 115ನೇ ಪುಣ್ಯ ದಿನಕ್ಕೆ ಬಂದಿದ್ದಾರೆ ಎನ್ನಲಾಗಿದೆ. ಆಯ್ತು ಬಂದ್ರಿ ನೀವೂ ಅಲ್ಲಿ ಗಂಗಾ ಇಲ್ಲಿ ಸಿದ್ದಗಂಗಾ ಅಂತ ಹೇಳಿ ಹೆಲಿಕಾಪ್ಟರ್ ಹತ್ತಿ ಹೋಗ್ಬಿಟ್ರಿ. ವ್ಯವಸ್ಥೆ ಮಾಡಿದ್ದವರು ಸಂತೋಷವಾಗಿ ಶಬ್ಬಾಶ್ ಗಿರಿ ಕೊಟ್ಡಿದ್ದಾರೆ. ಮುಂದಿನದಲ್ಲಿ ಶಾ ಅವರು ನಾವೂ ಹೇಳಿದಂಗೆ ಕೇಳ್ತಾರೆ ಅನ್ನೋದು ಖಾತ್ರಿ ಆಗೋಯ್ತು.

ನಾನು ಕೇಳೋದು ಸಿದ್ದಗಂಗಾ ಮಠದ ಶಿವಕುಮಾರ ಸ್ವಾಮಿಗಳಿಗೆ ಭಾರತ ರತ್ನ ಯಾಕೆ ಕೊಡಲಿಲ್ಲ. ಕಾರಣ ಏನು. ಅಮಿತ್ ಶಾ ಬಂದ್ರು. ಕೇಂದ್ರದ ಗೃಹ ಮಂತ್ರಿ. ಅವ್ರು ಯಾಕೆ ಹೇಳಲಿಲ್ಲ. ಬರೀ ಸಮಾರಂಭಕ್ಕಷ್ಟೆ ಸೀಮಿತವಾ. ಸಮಾರಂಭ ಮಾಡಿ ಶಬ್ಬಾಶ್ ಗುರಿ ತೆಗೆದುಕೊಳ್ಳೋಕೆ ಮಾತ್ರ ಸೀಮಿತವಾ.. ಬಿಜೆಒಇ ಮುಖಂಡರುಗಳು ನಿಜವಾಗಲೂ ಮಾನ ಮರ್ಯಾದೆ ಗೌರವ ಇದ್ದಿದ್ದರೆ ಭದ್ರವಾಗಿ ಕೇಂದ್ರಸ ರ್ಕಾರದ ಮೇಲೆ ಒತ್ತಡ ಹೇರಿ ಸಿದ್ದಗಂಗಾ ಶ್ರೀಗಳಿಗೆ ಭಾರತ ರತ್ನ ಕೊಡಿಸಬೇಕಿತ್ತು. ಮಠದ ಆಶೀರ್ವಾದ ಬೇಕು, ಸಮಾರಂಭ ಬೇಕು ಆದರೆ ಭಾರತ ರತ್ನ ಯಾಕೆ ಕೊಡಿಸಲಿಲ್ಲ ಎಂದು ಒತ್ತಾಯಿಸಿದ್ದಾರೆ.

ಕೇಂದ್ರ ಸರ್ಕಾರ ಸಾಕಷ್ಡು ಜನರಿಗೆ ಭಾರತ ರತ್ನ ಕೊಟ್ಟಿದೆ. ಆದರೇ ಶ್ರೀಗಳಿಗೆ ಯಾಕೆ ಕೊಡುತ್ತಿಲ್ಲ. ಆ ಬಗ್ಗೆ ಕೇಂದ್ರ ಸರ್ಕಾರ ಬಾಯಿ ಬಿಡಬೇಕು. ಇಲ್ಲ ಅಂದ್ರೆ ಬಿಜೆಪಿ ಮುಖಂಡರು ಯಾರ್ ಯಾರಿದ್ದೀರಿ ನೀವೂ ರಾಜೀನಾಮೆ ಕೊಡಿ. ಭಾರತ ರತ್ನ ಕೊಡದೆ ಇರುವ ಕೇಂದ್ರ ಸರ್ಕಾರದ ಧೋರಣೆಯನ್ನ ತೀವ್ರವಾಗಿ ಖಂಡಿಸುತ್ತೇನೆ ಎಂದಿದ್ದಾರೆ.

Facebook
Twitter
Telegram
WhatsApp
suddionenews

suddionenews

Leave a Comment

Top Stories

ಬೆಂಗಳೂರಿನಲ್ಲಿ ಇಂದು ಜೋರು ಮಳೆ : ಯಾವ ಜಿಲ್ಲೆಯಲ್ಲಿ ಮಳೆಯಾಗಲಿದೆ

ಕಳೆದ ಎರಡು ದಿನಗಳ ಹಿಂದಷ್ಟೇ ಬೆಂಗಳೂರಿನ ಜನಕ್ಕೆ ಮಳೆಯ ಅನುಭವವಾಗಿತ್ತು. ಬಿಸ ಬಿಸಿಯಾಗಿದ್ದ ಭೂಮಿಗೆ ಮಳೆರಾಯ ತಂಪೆರೆದು ಹೋಗಿದ್ದ. ಮತ್ತೆ ನಿನ್ನೆಯೆಲ್ಲಾ ಅದೇ ಬಿಸಿಬಿಸಿ ಅನುಭವ. ಇದೀಗ ಇಂದು ಸಿಲಿಕಾನ್ ಸಿಟಿ ಮತ್ತೆ ತಂಪಾಗಿದೆ‌.

ದಾವಣಗೆರೆ ಲೋಕಸಭಾ ಕ್ಷೇತ್ರದ ಕಣದಲ್ಲಿ 30 ಅಭ್ಯರ್ಥಿಗಳು  : 7 ವಿಧಾನಸಭಾ ಕ್ಷೇತ್ರಗಳು ಸೇರಿದಂತೆ ಚುನಾವಣೆಯ ಮತದಾರರ ಸಂಪೂರ್ಣ ಮಾಹಿತಿ….!

ದಾವಣಗೆರೆ.ಮೇ.5 : ದಾವಣಗೆರೆ ಲೋಕಸಭಾ ಚುನಾವಣಾ ಮತದಾನ ಮೇ 7 ರಂದು ಬೆಳಗ್ಗೆ 7 ರಿಂದ ಸಂಜೆ 6 ಗಂಟೆಯವರೆಗೆ ನಡೆಯಲಿದ್ದು ಚುನಾವಣಾ ಕಣದಲ್ಲಿ 30 ಅಭ್ಯರ್ಥಿಗಳಿದ್ದು ಎಲ್ಲಾ ಕ್ಷೇತ್ರಗಳ ಮಸ್ಟರಿಂಗ್ ಕೇಂದ್ರಗಳಿಂದ ಮತಗಟ್ಟೆಗಳನ್ನು ಹೊತ್ತ

ರೈತರಿಗೆ ಬೆಳೆ ವಿಮೆ ಮತ್ತು ಬರ ಪರಿಹಾರ ವಿಮೆ ಹಣ ತುರ್ತಾಗಿ ನೀಡುವಂತೆ ಅಖಂಡ ಕರ್ನಾಟಕ ರಾಜ್ಯ ರೈತ ಸಂಘ ಒತ್ತಾಯ

  ವರದಿ ಮತ್ತು ಫೋಟೋ ಕೃಪೆ ಕೆ.ಎಂ.ಮುತ್ತುಸ್ವಾಮಿ ಕಣ್ಣನ್,   ಮೊ : 78998 64552 ಸುದ್ದಿಒನ್, ಚಿತ್ರದುರ್ಗ, ಮೇ. 06 : ಚಳ್ಳಕೆರೆ ತಾಲ್ಲೂಕಿನ ಸಿದ್ದೇಶ್ವರನದುರ್ಗ, ಸೋಮಗುದ್ದು ಗ್ರಾಮ ಪಂಚಾಯಿತಿಗಳಿಗೆ ಸೇರಿದ ಹಳ್ಳಿಗಳ ಬೆಳೆ

error: Content is protected !!