ವರದಿ ಮತ್ತು ಫೋಟೋ ಕೃಪೆ
ಕೆ.ಎಂ.ಮುತ್ತುಸ್ವಾಮಿ ಕಣ್ಣನ್,
ಮೊ : 78998 64552
ಸುದ್ದಿಒನ್, ಚಿತ್ರದುರ್ಗ , ಸೆಪ್ಟೆಂಬರ್. 19 : ತಾಲ್ಲೂಕಿನ ತುರುವನೂರು ಹೋಬಳಿ ಬೊಗಳೇರಹಟ್ಟಿಯ ಭೋವಿ ಜನಾಂಗದವರು ನಾಯಕ ಸಮಾಜಕ್ಕೆ ಸೇರಿದವರು ನಮ್ಮ ಮೇಲೆ ದೌರ್ಜನ್ಯವೆಸಗಿ ಅಚಾಚ್ಯ ಶಬ್ದಗಳಿಂದ ನಿಂದಿಸಿದ್ದಾರೆಂದು ಜಿಲ್ಲಾಧಿಕಾರಿ ಕಚೇರಿ ಎದುರು ಶನಿವಾರ ಪ್ರತಿಭಟನೆ ನಡೆಸಿ ಪತ್ರಾಂಕಿತ ಕಚೇರಿ ಸಹಾಯಕರಿಗೆ ಮನವಿ ಸಲ್ಲಿಸಿದರು.
ಭೋವಿ ಕಾಲೋನಿಯಲ್ಲಿ ಕೂರಿಸಿದ್ದ ಗಣಪತಿಯನ್ನು ಶುಕ್ರವಾರ ಮೆರವಣಿಗೆ ಮಾಡುವ ಸಂದರ್ಭದಲ್ಲಿ ಭೋವಿ ಕಾಲೋನಿ ಪಕ್ಕದಲ್ಲಿಯೇ ಇರುವ ನಾಯಕ ಸಮಾಜಕ್ಕೆ ಸೇರಿದ ಮಹಂತೇಶ, ಪ್ರಹ್ಲಾದ, ಸುನಿಲ್, ರವಿ, ನವೀನ, ಸುಭಾಷ್, ಅರುಣ, ಸುರೇಶ, ರಾಜು ಇನ್ನು ಅನೇಕರು ಮೆರವಣಿಗೆಗೆ ಅಡ್ಡಿಪಡಿಸಿ ಕೆಟ್ಟ ಶಬ್ದಗಳನ್ನು ಬಳಕೆ ಮಾಡಿ ಅವಮಾನಿಸಿದ್ದಾರೆ. ಗ್ರಾಮದಲ್ಲಿ ಅಶಾಂತಿಗೆ ಕಾರಣರಾಗಿರುವ ಇವರುಗಳ ಮೇಲೆ ಕಾನೂನು ರೀತಿಯ ಕ್ರಮ ಕೈಗೊಳ್ಳುವಂತೆ ನಮ್ಮ ಕರ್ನಾಟಕ ಸೇನೆ ಜಿಲ್ಲಾಧ್ಯಕ್ಷ ಟಿ.ರಮೇಶ್ಬೆಳಗಟ್ಟ ಒತ್ತಾಯಿಸಿದರು.
ರಘು, ಬಸವ, ಮಲ್ಲೇಶ, ರಘುವೀರ, ಹರೀಶ, ರಾಜು, ಈರಮ್ಮ, ದುಗ್ಗಮ್ಮ, ಹನುಮಕ್ಕ ಇನ್ನು ಅನೇಕರು ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದರು.











