ವರದಿ ಮತ್ತು ಫೋಟೋ ಕೃಪೆ
ಕೆ.ಎಂ.ಮುತ್ತುಸ್ವಾಮಿ ಕಣ್ಣನ್,
ಮೊ : 78998 64552
ಸುದ್ದಿಒನ್, ಚಿತ್ರದುರ್ಗ, ಸೆಪ್ಟೆಂಬರ್.05 : ರಂಗಯ್ಯನಬಾಗಿಲು ಬಳಿಯಿರುವ ಜಿಲ್ಲಾ ಯಾದವ ಗೊಲ್ಲರ ಸಂಘದಲ್ಲಿ ಶುಕ್ರವಾರ ಶ್ರೀಕೃಷ್ಣ ಜನ್ಮಾಷ್ಠಮಿಯನ್ನು ಆಚರಿಸಲಾಯಿತು.

ಶ್ರೀಕೃಷ್ಣನ ಭಾವಚಿತ್ರಕ್ಕೆ ಪುಷ್ಪಾರ್ಚನೆ ಸಲ್ಲಿಸಿ ಮಾತನಾಡಿದ ಗೊಲ್ಲರ ಸಂಘದ ಜಿಲ್ಲಾಧ್ಯಕ್ಷ ಸಿ.ಮಹಲಿಂಗಪ್ಪ ಶ್ರೀಕೃಷ್ಣನ ಜನ್ಮವೇ ಒಂದು ಹೋರಾಟವೆಂದು ಪುರಾಣದಲ್ಲಿ ಹೇಳಿದೆ. ಕಂಸನ ಗರ್ವ ಮುರಿಯುವುದಕ್ಕಾಗಿಯೇ ಶ್ರೀಕೃಷ್ಣ ಜನ್ಮತಾಳಿದ. ಮಹಾಭಾರತದಲ್ಲಿನ ಸಾರಾಂಶವನ್ನು ವಿಶ್ವಕ್ಕೆ ಕೊಟ್ಟ ಶ್ರೀಕೃಷ್ಣನ ಲೀಲೆ ದೊಡ್ಡದು ಎಂದು ಹೇಳಿದರು.
ಯಾದವ ಗೊಲ್ಲರ ಸಂಘದ ಪ್ರಧಾನ ಕಾರ್ಯದರ್ಶಿ ಕಿರಣ್ಕುಮಾರ್ಯಾದವ್, ಉಪಾಧ್ಯಕ್ಷ ಬಿ.ಆರ್.ರಾಮಲಿಂಗಯಾದವ್, ಖಜಾಂಚಿ ಬೂದಿಹಳ್ಳಿ ರಾಜಣ್ಣ, ಜಯಮ್ಮ ಮಹಲಿಂಗಪ್ಪ, ನಿರ್ದೇಶಕರುಗಳಾದ ಬಿ.ಚಿಕ್ಕಣ್ಣ, ಅಶೋಕ್, ವೀರೇಶ್, ಆಕರ್ಶ್ಯಾದವ್, ತಮ್ಮಣ್ಣ, ಬಿ.ಡಿ.ಬಸವರಾಜ್, ಪ್ರಕಾಶ್, ರವಿ ಕೆ, ಈರಣ್ಣ, ಪರಮೇಶ್ ಹೆಚ್, ಪ್ರಕಾಶ್ ಬೆನ್ನೂರು, ಸಂಘದ ಮಾಜಿ ಪ್ರಧಾನ ಕಾರ್ಯದರ್ಶಿ ಆನಂದ್, ಮುಖಂಡರುಗಳಾದ ತಿಮ್ಮಣ್ಣ ಮೇಷ್ಟ್ರು, ಶಿವಣ್ಣ, ಪರಮೇಶ್ವರಪ್ಪ, ಲಕ್ಷ್ಮಿನಾರಾಯಣ, ಕೃಷ್ಣಪ್ಪ ಇನ್ನು ಅನೇಕರು ಶ್ರೀಕೃಷ್ಣ ಜಯಂತಿಯಲ್ಲಿ ಪಾಲ್ಗೊಂಡಿದ್ದರು.










