ಸುದ್ದಿಒನ್, ಹೊಳಲ್ಕೆರೆ, ಆಗಸ್ಟ್, 31 : ಹೊಳಲ್ಕೆರೆ ತಾಲ್ಲೂಕಿನ ತಾಳ್ಯ ಹೋಬಳಿ ಪಂಪಾಪುರ ಗ್ರಾಮದಲ್ಲಿರುವ ಹೊಂಡವನ್ನು ಒತ್ತುವರಿ ಮಾಡಿರುವುದನ್ನು ಕೂಡಲೇ ತೆರವುಗೊಳಿಸಬೇಕೆಂದು ಎಂದು ಗ್ರಾಮಸ್ಥರು ಒತ್ತಾಯಿಸಿದರು.
ಹೊಳಲ್ಕೆರೆ ತಹಶೀಲ್ದಾರ್ ಅವರಿಗೆ ಮನವಿ ಸಲ್ಲಿಸಿ, ಅಧಿಕಾರಿಗಳು ಒತ್ತುವರಿಯನ್ನು ತೆರವು ಮಾಡಬೇಕು ಎಂದು ಮನವಿ ಸಲ್ಲಿಸಿದರು. ಪಂಪಾಪುರ ಗ್ರಾಮದಲ್ಲಿರುವ ಹೊಂಡವನ್ನು ಗೌರಮ್ಮ ಒತ್ತುವರಿ ಮಾಡಿ ಬೋರ್ವೆಲ್, ಡಬಲ್ ಕೇಬಲ್, ಡಬಲ್ ಮೋಟಾರ್, ಡಬಲ್ಸ್ ಸ್ಟಾರ್ಟ್ ಇವುಗಳನ್ನು ಇವರ ಜಮೀನುಗಳಿಗೆ ಉಪಯೋಗಿಸಿಕೊಳ್ಳುತ್ತಿದ್ದಾರೆ. ಅಷ್ಟೇ ಅಲ್ಲದೆ ಪಾಲೇಶಣ್ಣ , ಮೂರ್ತಪ್ಪ, ಕೆ ಒ ಸಿದ್ದಪ್ಪ ಇವರುಗಳು ಸಹ ಹೊಂಡವನ್ನು ಒತ್ತುವರಿ ಮಾಡಿ ಕೊಂಡಿರುತ್ತಾರೆ. ಆದ್ದರಿಂದ ಊರಿನ ಗ್ರಾಮಸ್ಥರಿಗೆ ನೀರಿನ ಸಮಸ್ಯೆ ಆಗಿರುವುದರಿಂದ ಈ ವಿಚಾರವನ್ನು ಸರಿಯಾಗಿ ಪರೀಶೀಲಿಸಿ ಗ್ರಾಮಕ್ಕೆ ಮೀಸಲಿರಿಸಿದ ಹೊಂಡವನ್ನು ಬಂದೋಬಸ್ತ್ ಮತ್ತು ತೆರವು ಮಾಡಿಸಿ ಒತ್ತುವರಿ ಆಗಿರುವ ಜಮೀನನ್ನು ಬಿಡಿಸಿ ಗ್ರಾಮಸ್ಥರುಗಳೆಲ್ಲರಿಗೂ ಅನುಕೂಲ ಮಾಡಿಕೊಡಬೇಕೆಂದು ಮನವಿ ಸಲ್ಲಿಸಿದರು.

ಈ ವೇಳೆ ಕೆ. ಓಂಕಾರಪ್ಪ, ವೆಂಕಟೇಶ್, ಶಿವರಾಜ್, ಕರಿಯಪ್ಪ, ಕುಮಾರ್, ಬಿ. ಶಿವಕುಮಾರ್ ಸೇರಿದಂತೆ ಇತರರು ಹಾಜರಿದ್ದರು.










