ದೇಶಾದ್ಯಂತ ಸಹೋದರ-ಸಹೋದರಿಯರ ಪ್ರೀತಿಯ ಸಂಕೇತವಾದ ರಕ್ಷಾ ಬಂಧನ ಹಬ್ಬವನ್ನು ಈ ವರ್ಷ ಆಗಸ್ಟ್ 28ರಂದು ಸಂಭ್ರಮದಿಂದ ಆಚರಿಸಲಾಗುತ್ತಿದೆ. ವಿಶೇಷವೆಂದರೆ ಇದೇ ದಿನ 2026ರ ಎರಡನೇ ಚಂದ್ರಗ್ರಹಣ ಸಂಭವಿಸುತ್ತಿರುವುದರಿಂದ ರಾಖಿ ಕಟ್ಟಬಹುದೇ? ಪೂಜೆ ಮಾಡಬಹುದೇ? ಸೂತಕ ಅನ್ವಯವಾಗುತ್ತದೆಯೇ? ಎಂಬ ಪ್ರಶ್ನೆಗಳು ಭಕ್ತರಲ್ಲಿ ಮೂಡಿವೆ. ಈ ಎಲ್ಲ ಗೊಂದಲಗಳಿಗೆ ಇಲ್ಲಿದೆ ಸ್ಪಷ್ಟ ಉತ್ತರ.
ಚಂದ್ರಗ್ರಹಣ ಯಾವಾಗ?
ವೈದಿಕ ಪಂಚಾಂಗ ಮತ್ತು ಖಗೋಳ ಲೆಕ್ಕಾಚಾರಗಳ ಪ್ರಕಾರ, ಆಗಸ್ಟ್ 28ರಂದು ಸಂಭವಿಸಲಿರುವ ಭಾಗಶಃ ಚಂದ್ರಗ್ರಹಣವು ಭಾರತೀಯ ಕಾಲಮಾನ (IST) ಪ್ರಕಾರ ಬೆಳಿಗ್ಗೆ 6:53ಕ್ಕೆ ಆರಂಭವಾಗಿ ಮಧ್ಯಾಹ್ನ 12:31ಕ್ಕೆ ಅಂತ್ಯಗೊಳ್ಳಲಿದೆ. ಗ್ರಹಣದ ಒಟ್ಟು ಅವಧಿ ಸುಮಾರು 5 ಗಂಟೆ 38 ನಿಮಿಷಗಳು ಇರಲಿದೆ.

ಭಾರತದಲ್ಲಿ ಗೋಚರಿಸುತ್ತದೆಯೇ?
ಈ ಬಾರಿ ಸಂಭವಿಸುವ ಭಾಗಶಃ ಚಂದ್ರಗ್ರಹಣವು ಭಾರತದಲ್ಲಿ ಗೋಚರಿಸುವುದಿಲ್ಲ. ಇದು ಪ್ರಮುಖವಾಗಿ ಪಶ್ಚಿಮ ಏಷ್ಯಾ, ಯುರೋಪ್, ಆಫ್ರಿಕಾ, ದಕ್ಷಿಣ ಅಮೆರಿಕ ಹಾಗೂ ಉತ್ತರ ಅಮೆರಿಕದ ಕೆಲವು ಭಾಗಗಳಲ್ಲಿ ಮಾತ್ರ ಕಾಣಿಸಿಕೊಳ್ಳಲಿದೆ ಎಂದು ಖಗೋಳ ತಜ್ಞರು ತಿಳಿಸಿದ್ದಾರೆ.
ರಕ್ಷಾ ಬಂಧನ ಆಚರಣೆಗೆ ಅಡ್ಡಿಯೇ?
ಧಾರ್ಮಿಕ ಶಾಸ್ತ್ರಗಳ ಪ್ರಕಾರ, ಗ್ರಹಣವು ಗೋಚರಿಸುವ ಪ್ರದೇಶದಲ್ಲಷ್ಟೇ ಸೂತಕ ಕಾಲ ಅನ್ವಯವಾಗುತ್ತದೆ. ಆಗಸ್ಟ್ 28ರ ಚಂದ್ರಗ್ರಹಣ ಭಾರತದಲ್ಲಿ ಗೋಚರಿಸದ ಕಾರಣ, ಭಾರತದಲ್ಲಿ ಸೂತಕ ಕಾಲ ಅನ್ವಯಿಸುವುದಿಲ್ಲ. ಹೀಗಾಗಿ ರಕ್ಷಾ ಬಂಧನದ ಪೂಜೆ, ಸಹೋದರರಿಗೆ ರಾಖಿ ಕಟ್ಟುವುದು ಹಾಗೂ ಇತರೆ ಹಬ್ಬದ ಆಚರಣೆಗಳನ್ನು ಯಾವುದೇ ಅಡಚಣೆಯಿಲ್ಲದೆ ಎಂದಿನಂತೆ ನೆರವೇರಿಸಬಹುದು.
ಗ್ರಹಣದ ವೇಳೆ ಪಾಲಿಸಬಹುದಾದ ಸಂಪ್ರದಾಯಗಳು
ಧಾರ್ಮಿಕ ನಂಬಿಕೆಗಳ ಪ್ರಕಾರ, ಗ್ರಹಣದ ವೇಳೆ ಕೆಲವು ಮುನ್ನೆಚ್ಚರಿಕೆಗಳನ್ನು ಪಾಲಿಸುವುದು ಶುಭಕರವೆಂದು ಪರಿಗಣಿಸಲಾಗುತ್ತದೆ.
ಗ್ರಹಣ ಆರಂಭಕ್ಕೂ ಮುನ್ನ ಆಹಾರ ಪದಾರ್ಥಗಳಿಗೆ ತುಳಸಿ ಎಲೆ ಹಾಕಿಡುವುದು ಒಳಿತು ಎಂಬ ನಂಬಿಕೆ ಇದೆ.
ಗ್ರಹಣದ ಅವಧಿಯಲ್ಲಿ ಗಾಯತ್ರಿ ಮಂತ್ರ, ಮಹಾಮೃತ್ಯುಂಜಯ ಮಂತ್ರ ಹಾಗೂ ಇಷ್ಟದೇವರ ನಾಮಸ್ಮರಣೆ ಮಾಡುವುದು ಶುಭಕರವೆಂದು ಹೇಳಲಾಗುತ್ತದೆ.
ಗರ್ಭಿಣಿಯರು ಗ್ರಹಣದ ಸಮಯದಲ್ಲಿ ಅನಗತ್ಯವಾಗಿ ಹೊರಗೆ ತೆರಳದಂತೆ ಎಚ್ಚರಿಕೆ ವಹಿಸುವುದು ಸಂಪ್ರದಾಯವಾಗಿದೆ.
ರಕ್ಷಾ ಬಂಧನದ ದಿನ ಚಂದ್ರಗ್ರಹಣ ಸಂಭವಿಸಿದರೂ ಅದು ಭಾರತದಲ್ಲಿ ಗೋಚರಿಸದ ಕಾರಣ ರಾಖಿ ಕಟ್ಟಲು, ಪೂಜೆ ಸಲ್ಲಿಸಲು ಅಥವಾ ಹಬ್ಬ ಆಚರಿಸಲು ಯಾವುದೇ ಧಾರ್ಮಿಕ ಅಡ್ಡಿಯಿಲ್ಲ ಎಂದು ಪಂಚಾಂಗ ಹಾಗೂ ಧಾರ್ಮಿಕ ನಿಯಮಗಳು ಸ್ಪಷ್ಟಪಡಿಸುತ್ತವೆ.
ಸಾರ್ವಜನಿಕ ಕುಂದುಕೊರತೆ ವಿಭಾಗ : ನಿಮ್ಮ ಧ್ವನಿ - ನಮ್ಮ ವೇದಿಕೆ
ನಿಮ್ಮ ಊರಿನ ಸಮಸ್ಯೆಗಳು ಇನ್ನು ಮುಂದೆ ಕೇವಲ ಚರ್ಚೆಯಾಗಬಾರದು, ಅವುಗಳಿಗೆ ಪರಿಹಾರ ಸಿಗಬೇಕು.
ವರದಿ ಮಾಡುವುದು ಹೇಗೆ?
- ನಿಮ್ಮ ಸುತ್ತಮುತ್ತಲಿನ ರಸ್ತೆ, ನೀರು, ವಿದ್ಯುತ್ ಸಮಸ್ಯೆಗಳ ಫೋಟೋ, ವಿಡಿಯೋ ಅಥವಾ ಮಾಹಿತಿ ನಮಗೆ ಕಳುಹಿಸಿ.
ನಾವು ಏನು ಮಾಡುತ್ತೇವೆ?
- ನೀವು ಕಳುಹಿಸಿದ ವರದಿಗಳನ್ನು suddione.com ನಲ್ಲಿ ಪ್ರಕಟಿಸುತ್ತೇವೆ.
- ಸಂಬಂಧಪಟ್ಟ ಇಲಾಖೆಯ ಅಧಿಕಾರಿಗಳ ಗಮನಕ್ಕೆ ತಂದು ಪರಿಹಾರಕ್ಕಾಗಿ ಒತ್ತಾಯಿಸುತ್ತೇವೆ.
- ನಿಮ್ಮೂರಿನ ಅಭಿವೃದ್ಧಿಗೆ ನಿಮ್ಮೊಂದಿಗೆ ಧ್ವನಿಗೂಡಿಸುತ್ತೇವೆ.










