ವರದಿ ಮತ್ತು ಫೋಟೋ ಕೃಪೆ
ಸುರೇಶ್ ಬೆಳಗೆರೆ, ಚಳ್ಳಕೆರೆ
ಮೊ : 8431413188
ಸುದ್ದಿಒನ್, ಚಿತ್ರದುರ್ಗ, ಮೇ. 22 : ಕೃಷಿ ಇಲಾಖೆಯಿಂದ ಮಣ್ಣು ಮತ್ತು ನೀರಿನ ಆರೋಗ್ಯ ಅಭಿಯಾನ’ಗಳನ್ನು ನಡೆಸಲಾಗುತ್ತದೆ. ಈ ಕುರಿತಂತೆ ಅಭಿಯಾನದ ಜಾಗೃತಿ ವಾಹನ ಗ್ರಾಮಗಳಿಗೆ ಬರುತ್ತಿದ್ದು ರೈತರು ಇದರ ಸಮರ್ಪಕ ಉಪಯೋಗವನ್ನ ಪಡೆದುಕೊಳ್ಳಿ ಎಂದು ಶಾಸಕ ಟಿ ರಘುಮೂರ್ತಿ ಹೇಳಿದರು.

ನಗರದ ತಾಲೂಕು ಪಂಚಾಯಿತಿ ಕಚೇರಿ ಆವರಣದಲ್ಲಿ ಕೃಷಿ ಇಲಾಖೆ ಯಿಂದ ಮಣ್ಣು ಹಾಗೂ ನೀರು ಪರೀಕ್ಷೆ ಕುರಿತಂತೆ ಸಾಕ್ಷರತಾ ಅಭಿಯಾನ ರಥಕ್ಕೆ ಚಾಲನೆ ನೀಡಿದರು.
ಈ ವೇಳೆ ಮಾತನಾಡಿದ ಅವರು, ಚಳ್ಳಕೆರೆ ತಾಲೂಕಿನ ಜಲನಯನ ಯೋಜನೆಯಡಿ ಆಯ್ಕೆಯಾದ ಗ್ರಾಮಗಳಿಗೆ ತೆರಳಿ ರೈತರಿಗೆ ಕೃಷಿ ತಂತ್ರಜ್ಞಾನ, ಸರ್ಕಾರದ ಯೋಜನೆಗಳು ಹಾಗೂ ವೈಜ್ಞಾನಿಕ ಕೃಷಿ ಪದ್ಧತಿಗಳ ಬಗ್ಗೆ ಅರಿವು ಮತ್ತು ಮಣ್ಣು ನೀರಿ ಪರೀಕ್ಷೆ ಮಾಡಿಲು ಜಾಗೃತಿ ಮೂಡಿಸಲಾಗುತ್ತಿದ್ದ ಇದರ ಸದೂಪಯೋಗವನ್ನ ರೈತರು ಪಡೆದುಕೊಂಡು ಉತ್ತಮ ಬೆಳೆಗಳನ್ನ ಬೆಳೆಯುವ ಮೂಲಕ ಹಾರ್ಥಿಕ ಅಭಿವೃದ್ಧಿ ಕಾಣಬೇಕಿದೆ.
ರೈತರ ಜಮೀನುಗಳಿಗೆ ತೆರಳಿ ಮಣ್ಣು ಮತ್ತು ನೀರಿನ ಪರೀಕ್ಷೆ ನಡೆಸಿ, ಅದರ ಆಧಾರದ ಮೇಲೆ ಸೂಕ್ತ ಬೆಳೆ ಬೆಳೆಯುವ ಕುರಿತು ಕೃಷಿ ಜಾಗೃತಿ ಮೂಡಿಸಲು ಸಂಚಾರಿ ಪ್ರಚಾರ ವಾಹನಗಳನ್ನು ನಿಯೋಜಿಸಲಾಗಿದೆ. ಇ ವಾಹನಗಳಲ್ಲಿ ಸಮಗ್ರ ಮಾಹಿತಿ ನೀಡುವ ಫಲಕಗಳು ಎಲ್ಇಡಿ ಪರದೆಗಳು, ಆಡಿಯೋ ಸಿಸ್ಟಂಗಳು ಹಾಗೂ ಕೃಷಿ ಮಾಹಿತಿ ಸಾಹಿತ್ಯಗಳನ್ನು ಅಳವಡಿಸಲಾಗಿದ್ದು, ತಜ್ಞರು ಸ್ಥಳದಲ್ಲೇ ರೈತರ ಸಮಸ್ಯೆಗಳಿಗೆ ಸಲಹೆಗಳನ್ನು ನೀಡಲಿದ್ದಾರೆ ಎಂದು ಹೇಳಿದರು.
ಈ ಸಂದರ್ಭದಲ್ಲಿ ಗ್ಯಾರಂಟಿ ಸಮಿತಿ ತಾಲ್ಲೂಕು ಅಧ್ಯಕ್ಷ ಗದ್ದಿಗೆ ತಿಪ್ಪೇಸ್ವಾಮಿ ನಗರಸಭೆ ಮಾಜಿ ಸದಸ್ಯ ರಾದ ಎಂಜೆ.ರಾಘವೇಂದ್ರ, ಚಳ್ಳಕೆರೆಪ್ಪ, ಸೈಯಾದ್ ಅನ್ವರ್, ಕೃಷಿ ಉಪನಿರ್ದೇಶಕರಾದ ಉಮೇಶ,ಸಹಾಯಕ ಕೃಷಿ ನಿರ್ದೇಶಕ ಎಸ್ ಟಿ. ರಮೇಶ್ ಕೃಷಿ ಅಧಿಕಾರಿಗಳಾದ ತಿಪ್ಪೇಸ್ವಾಮಿ, ಗುರುನಂದನ್, ಕೃಷಿ ಇಲಾಖೆಯ ಸಿಬ್ಬಂದಿಗಳು ರೈತರು ಇದ್ದರು.
ಸಾರ್ವಜನಿಕ ಕುಂದುಕೊರತೆ ವಿಭಾಗ : ನಿಮ್ಮ ಧ್ವನಿ - ನಮ್ಮ ವೇದಿಕೆ
ನಿಮ್ಮ ಊರಿನ ಸಮಸ್ಯೆಗಳು ಇನ್ನು ಮುಂದೆ ಕೇವಲ ಚರ್ಚೆಯಾಗಬಾರದು, ಅವುಗಳಿಗೆ ಪರಿಹಾರ ಸಿಗಬೇಕು.
ವರದಿ ಮಾಡುವುದು ಹೇಗೆ?
- ನಿಮ್ಮ ಸುತ್ತಮುತ್ತಲಿನ ರಸ್ತೆ, ನೀರು, ವಿದ್ಯುತ್ ಸಮಸ್ಯೆಗಳ ಫೋಟೋ, ವಿಡಿಯೋ ಅಥವಾ ಮಾಹಿತಿ ನಮಗೆ ಕಳುಹಿಸಿ.
ನಾವು ಏನು ಮಾಡುತ್ತೇವೆ?
- ನೀವು ಕಳುಹಿಸಿದ ವರದಿಗಳನ್ನು suddione.com ನಲ್ಲಿ ಪ್ರಕಟಿಸುತ್ತೇವೆ.
- ಸಂಬಂಧಪಟ್ಟ ಇಲಾಖೆಯ ಅಧಿಕಾರಿಗಳ ಗಮನಕ್ಕೆ ತಂದು ಪರಿಹಾರಕ್ಕಾಗಿ ಒತ್ತಾಯಿಸುತ್ತೇವೆ.
- ನಿಮ್ಮೂರಿನ ಅಭಿವೃದ್ಧಿಗೆ ನಿಮ್ಮೊಂದಿಗೆ ಧ್ವನಿಗೂಡಿಸುತ್ತೇವೆ.



















