ಸುದ್ದಿಒನ್, ಹೊಸದುರ್ಗ, ಮೇ. 17 : ಬೆಲಗೂರು ಗ್ರಾಮದಲ್ಲಿ ವಾಹನ ಕಳ್ಳತನ ಪ್ರಕರಣಕ್ಕೆ ಸಂಬಂಧಿಸಿದಂತೆ ಶ್ರೀರಾಂಪುರ ಪೊಲೀಸರು ಇಬ್ಬರು ಕಳ್ಳರನ್ನು ಬಂಧಿಸಿ ಅವರಿಂದ ಸುಮಾರು 6 ಲಕ್ಷ ರೂಪಾಯಿ ಮೌಲ್ಯದ ವಾಹನಗಳನ್ನು ವಶಪಡಿಸಿಕೊಳ್ಳಲಾಗಿದೆ.
ಚಿಕ್ಕಮಗಳೂರು ಜಿಲ್ಲೆಯ ಬೀರೂರಿನ ಲೋಹಿತ್ ಮತ್ತು ಅಜ್ಜಂಪುರದ ಅರುಣ ಬಂಧಿತರು. ಇವರಿಂದ 4.50.000/- ರೂ ಬೆಲೆಬಾಳುವ ಅಶೋಕ ಲೈಲ್ಯಾಂಡ್ ಗೂಡ್ಸ್ ವಾಹನ, 50.000/- ರೂ. ಬೆಲೆಬಾಳುವ ಎರಡು , 50.000/- ಬೈಕ್ ಹಾಗು 60.000/- ರೂ ನಗದು ಹಣ ಸೇರಿದಂತೆ ಒಟ್ಟು- 6.10.000/- ರೂಪಾಯಿ ವಶಪಡಿಸಿಕೊಳ್ಳಲಾಗಿದೆ.

ಘಟನೆ ಹಿನ್ನೆಲೆ :
ದಿನಾಂಕ-19.04.2026 ರಾತ್ರಿ ಸಮಯದಲ್ಲಿ ಬೆಲಗೂರು ಗ್ರಾಮದ ವರವಂಜಿ ರಸ್ತೆಯಲ್ಲಿ ಬಿಎಸ್ಎನ್ಎಲ್ ಟವರ್ ಹತ್ತಿರ ನಿಲ್ಲಿಸಿದ್ದ ಅಶೋಕ ಲೈಲ್ಯಾಂಡ್ ಗೂಡ್ಸ್ ವಾಹನ ಕಳುವಾದ ಬಗ್ಗೆ ಮತ್ತು ದಿನಾಂಕ:-02.05.2026 ರಂದು ಬೆಲಗೂರು ಗ್ರಾಮದಲ್ಲಿ ರೇವಣ್ಣಸಿದ್ದೇಶ್ವರ ಸಮುದಾಯ ಭವನದ ಬಳಿ ನಿಲ್ಲಿಸಿದ್ದ ಅಶೋಕ ಲೈಲ್ಯಾಂಡ್ ಗೂಡ್ಸ್ ವಾಹನ ಕಳುವಾದ ಬಗ್ಗೆ ದೂರು ದಾಖಲಾಗಿರುತ್ತದೆ.
ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಚಿತ್ರದುರ್ಗ ಎಸ್.ಪಿ. ರಂಜಿತ್ ಕುಮಾರ್ ಬಂಡಾರು ಮಾರ್ಗದರ್ಶನದಲ್ಲಿ ಹೆಚ್ಚುವರಿ ಪೊಲೀಸ್ ಅಧೀಕ್ಷಕರಾದ ಡಾ.ಶಿವಕುಮಾರ್, ಶಿವಕುಮಾರ್ ಟಿ. ಎಂ ಡಿ.ವೈ.ಎಸ್.ಪಿ , ಶ್ರೀರಾಂಪುರ ಪೊಲೀಸ್ ನಿರೀಕ್ಷಕರಾದ ಗೋಪಾಲನಾಯ್ಕ ಎಂ, ಸಿಬ್ಬಂದಿಗಳ ತಂಡವನ್ನು ರಚಿಸಿದ್ದರು. ಖಚಿತವಾದ ಮಾಹಿತಿ ಮೇರೆಗೆ ಇಂದು ಆರೋಪಿಗಳನ್ನು ವಶಕ್ಕೆ ಪಡೆದು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ. ಎಸ್.ಪಿ. ರಂಜಿತ್ ಕುಮಾರ್ ಬಂಡಾರು ಅವರು ಶ್ರೀರಾಂಪುರ ಪೊಲೀಸ್ ಠಾಣೆಯ ಅಧಿಕಾರಿ ಮತ್ತು ಸಿಬ್ಬಂದಿಯವರನ್ನು ಪ್ರಶಂಶಿಸಿರುತ್ತಾರೆ.














