Warning: Undefined array key "options" in /home/nagendra/public_html/content/plugins/elementor-pro/modules/theme-builder/widgets/site-logo.php on line 124

ಕಳ್ಳರಿಗೆ ಕೊಡಗಿನಲ್ಲಿ ಒಂಟಿ ಮನೆಗಳೇ ಟಾರ್ಗೆಟ್, ವೃದ್ದರಿದ್ದರೆ ಹಬ್ಬವೋ ಹಬ್ಬ..!

Facebook
Twitter
Telegram
WhatsApp

ಕೊಡಗು: ಜಿಲ್ಲೆಯಲ್ಲಿ ಒಂಟಿ‌ ಮನೆಗಳೆ ಹೆಚ್ಚು. ಅದರಲ್ಲೂ ಕಾಫಿ ತೋಟದಲ್ಲೇ ಮನೆ ಮಾಡಿಕೊಂಡು, ಗಂಡ ಹೆಂಡತಿ ವಾಸವಿರುತ್ತಾರೆ.‌ ಮಕ್ಕಳು ಎಲ್ಲೋ ದೂರದೂರಿಗೆ ದುಡಿಯೋದಕ್ಕೆ ಹೋಗಿರ್ತಾರೆ. ಹೀಗಾಗಿ ಅಪ್ಪ ಅಮ್ಮನೇ ತೋಟದ ಮನೆಯಲ್ಲಿ ವಾಸ ಮಾಡ್ತಾ ಇರ್ತಾರೆ.

ಈಗ ಕೊಡಗಿನಾದ್ಯಂತ ಒಂಟಿಯಾಗಿ ವಾಸಿಸುವುದೇ ಈಗ ಡೇಂಜರ್ ಎಂಬಂತಾಗಿದೆ. ಈ ದರೋಡೆಕೋರರ ಉಪಟಳ ಹೆಚ್ಚಾಗಿದೆ. ಅದರಲ್ಲೂ ಒಂಟಿ ಮನೆಯಲ್ಲಿ ವೃದ್ಧ ದಂಪತಿ ಇರುವುದನ್ನೇ ನೋಡಿ ಟಾರ್ಗೆಟ್ ಮಾಡುತ್ತಿದ್ದಾರೆ. ಅಂತದ್ದೊಂದು ಘಟನೆ ಜಿಲ್ಲೆಯ ನಾಪೊಕ್ಲು ಸಮೀಪದ ಕೊಳಕೇರಿ ಸಮೀಪದಲ್ಲಿ ನಡೆದಿದೆ.

ಜಾನಕಿ ಮತ್ತು ಅಮ್ಮಕ್ಕಿ ಎಂಬ ವೃದ್ಧರು ವಾಸಿಸುತ್ತಿದ್ದ ಮನೆಯಲ್ಲಿ ಕಳ್ಳತನ ನಡೆದಿದೆ. ಕಾಫಿ ತೋಟದಲ್ಲಿ ಇಬ್ಬರೇ ವಾಸವಾಗಿದ್ದರು. ಈ ಮನೆಗೆ ನುಗ್ಗಿದ ಕಳ್ಳರು, ಇಬ್ಬರಿಗೂ ಜೀವ ಬೆದರಿಕೆ ಒಡ್ಡಿ, ಕೈಕಾಲು ಕಟ್ಟಿ ಹಾಕಿ, ಬೀರು ಕೀ ಕಿತ್ತುಕೊಂಡು ಅದರಲ್ಲಿದ್ದ ಲಕ್ಷಾಂತರ ರೂಪಾಯಿ ಹಣ ಹಾಗೂ ಚಿನ್ನಾಭರಣ ದೋಚಿಕೊಂಡು ಹೋಗಿದ್ದಾರೆ. ಸದ್ಯ ನಮ್ಮನ್ನ ಏನು ಮಾಡಬೇಡಿ ಎಂದು ಬೇಡಿಕೊಂಡಿದ್ದಕ್ಕೆ ಅವರಿಬ್ಬರ ಮೇಲೂ ಹಲ್ಲೆ ಮಾಡಿ ಪ್ರಾಣಾಪಾಯ‌ ಮಾಡದ ಹಾಗೇ ಬಿಟ್ಟು ಹೋಗಿದ್ದಾರೆ. ಈ ಘಟನೆ ಕೊಡಗಿನಲ್ಲಿ ಒಂಟಿ ಮನೆಯಲ್ಲಿ ವಾಸಿಸುವವರುಗೆ ದಿಗಿಲು‌ ಬಡಿದಂತಾಗಿದೆ. ಒಬ್ಬೊಬ್ಬರೇ ಇರುವುದು ಹೇಗೆ ಎಂಬ ಪ್ರಶ್ನೆ ಕಾಡೋದಕ್ಕೆ ಶುರುವಾಗಿದೆ.

Facebook
Twitter
Telegram
WhatsApp
suddionenews

suddionenews

Leave a Comment

Top Stories

ಸಿದ್ದರಾಮಯ್ಯ ಸರ್ಕಾರಕ್ಕೆ ವರ್ಷದ ಸಂಭ್ರಮ : ಬಿಜೆಪಿಯ ಪ್ಲ್ಯಾನ್ ಏನು ಗೊತ್ತಾ..?

ಬೆಂಗಳೂರು: ಕಳೆದ ವಿಧಾನಸಭಾ ಚುನಾವಣೆಯಲ್ಲಿ 135 ಕ್ಷೇತ್ರದಲ್ಲಿ ಭರ್ಜರಿಯಾಗಿ ಗೆಲುವು ಸಾಧಿಸಿ, ಸ್ವತಂತ್ರವಾಗಿ ಕಾಂಗ್ರೆಸ್ ಪಕ್ಷ ಅಧಿಕಾರಕ್ಕೆ ಬಂದಿತ್ತು. ಇದೀಗ ಆ ಸಂತಸದ ಗಳಿಗೆಗೆ ಭರ್ತಿ ಒಂದು ವರ್ಷವಾಗುತ್ತಿದೆ. ಮೇ20ಕ್ಕೆ ಸರ್ಕಾರ ರಚನೆ ಮಾಡಿ

ಬಿಜೆಪಿ – ಜೆಡಿಎಸ್ ಪಕ್ಷದಿಂದ 25 ರಿಂದ 30 ಜನ  ನಮ್ಮ ಪಕ್ಷಕ್ಕೆ ಬರುತ್ತಾರೆ : ಚಿತ್ರದುರ್ಗದಲ್ಲಿ ಸಚಿವ ಸುಧಾಕರ್ ಹೇಳಿಕೆ

ವರದಿ ಮತ್ತು ಫೋಟೋ ಕೃಪೆ,  ಸುರೇಶ್ ಪಟ್ಟಣ್,                         ಮೊ : 98862 95817 ಸುದ್ದಿಒನ್, ಚಿತ್ರದುರ್ಗ ಮೇ. 17

ಮಳೆರಾಯನನ್ನೇ ಬೇಡಿದ ಅಭಿಮಾನಿಗಳು : RCB ಗೆಲುವಿಗಾಗಿ ವಿಶೇಷ ಪೂಜೆ

RCB ಅಭಿಮಾನಿಗಳು ಕಡೆಯ ತನಕ ತಮ್ಮ ಟೀಂ ಬಗ್ಗೆ ಹೋಪ್ ಕಳೆದುಕೊಳ್ಳುವುದೇ ಇಲ್ಲ. ಯಾಕಂದ್ರೆ ಆರ್ಸಿಬಿ ಆಟಗಾರರು ಸಹ ಅದೇ ಥರ ಕೊನೆಯಲ್ಲಿ ಚೋಕ್ ಕೊಡ್ತಾರೆ. ಈ ಬಾರಿಯ ಐಪಿಎಲ್ ನಲ್ಲಿ ಆರಂಭದ ಅಷ್ಟು

error: Content is protected !!