Warning: Undefined array key "options" in /home/nagendra/public_html/content/plugins/elementor-pro/modules/theme-builder/widgets/site-logo.php on line 124

ಕಳ್ಳರಿಗೆ ಕೊಡಗಿನಲ್ಲಿ ಒಂಟಿ ಮನೆಗಳೇ ಟಾರ್ಗೆಟ್, ವೃದ್ದರಿದ್ದರೆ ಹಬ್ಬವೋ ಹಬ್ಬ..!

Facebook
Twitter
Telegram
WhatsApp

ಕೊಡಗು: ಜಿಲ್ಲೆಯಲ್ಲಿ ಒಂಟಿ‌ ಮನೆಗಳೆ ಹೆಚ್ಚು. ಅದರಲ್ಲೂ ಕಾಫಿ ತೋಟದಲ್ಲೇ ಮನೆ ಮಾಡಿಕೊಂಡು, ಗಂಡ ಹೆಂಡತಿ ವಾಸವಿರುತ್ತಾರೆ.‌ ಮಕ್ಕಳು ಎಲ್ಲೋ ದೂರದೂರಿಗೆ ದುಡಿಯೋದಕ್ಕೆ ಹೋಗಿರ್ತಾರೆ. ಹೀಗಾಗಿ ಅಪ್ಪ ಅಮ್ಮನೇ ತೋಟದ ಮನೆಯಲ್ಲಿ ವಾಸ ಮಾಡ್ತಾ ಇರ್ತಾರೆ.

ಈಗ ಕೊಡಗಿನಾದ್ಯಂತ ಒಂಟಿಯಾಗಿ ವಾಸಿಸುವುದೇ ಈಗ ಡೇಂಜರ್ ಎಂಬಂತಾಗಿದೆ. ಈ ದರೋಡೆಕೋರರ ಉಪಟಳ ಹೆಚ್ಚಾಗಿದೆ. ಅದರಲ್ಲೂ ಒಂಟಿ ಮನೆಯಲ್ಲಿ ವೃದ್ಧ ದಂಪತಿ ಇರುವುದನ್ನೇ ನೋಡಿ ಟಾರ್ಗೆಟ್ ಮಾಡುತ್ತಿದ್ದಾರೆ. ಅಂತದ್ದೊಂದು ಘಟನೆ ಜಿಲ್ಲೆಯ ನಾಪೊಕ್ಲು ಸಮೀಪದ ಕೊಳಕೇರಿ ಸಮೀಪದಲ್ಲಿ ನಡೆದಿದೆ.

ಜಾನಕಿ ಮತ್ತು ಅಮ್ಮಕ್ಕಿ ಎಂಬ ವೃದ್ಧರು ವಾಸಿಸುತ್ತಿದ್ದ ಮನೆಯಲ್ಲಿ ಕಳ್ಳತನ ನಡೆದಿದೆ. ಕಾಫಿ ತೋಟದಲ್ಲಿ ಇಬ್ಬರೇ ವಾಸವಾಗಿದ್ದರು. ಈ ಮನೆಗೆ ನುಗ್ಗಿದ ಕಳ್ಳರು, ಇಬ್ಬರಿಗೂ ಜೀವ ಬೆದರಿಕೆ ಒಡ್ಡಿ, ಕೈಕಾಲು ಕಟ್ಟಿ ಹಾಕಿ, ಬೀರು ಕೀ ಕಿತ್ತುಕೊಂಡು ಅದರಲ್ಲಿದ್ದ ಲಕ್ಷಾಂತರ ರೂಪಾಯಿ ಹಣ ಹಾಗೂ ಚಿನ್ನಾಭರಣ ದೋಚಿಕೊಂಡು ಹೋಗಿದ್ದಾರೆ. ಸದ್ಯ ನಮ್ಮನ್ನ ಏನು ಮಾಡಬೇಡಿ ಎಂದು ಬೇಡಿಕೊಂಡಿದ್ದಕ್ಕೆ ಅವರಿಬ್ಬರ ಮೇಲೂ ಹಲ್ಲೆ ಮಾಡಿ ಪ್ರಾಣಾಪಾಯ‌ ಮಾಡದ ಹಾಗೇ ಬಿಟ್ಟು ಹೋಗಿದ್ದಾರೆ. ಈ ಘಟನೆ ಕೊಡಗಿನಲ್ಲಿ ಒಂಟಿ ಮನೆಯಲ್ಲಿ ವಾಸಿಸುವವರುಗೆ ದಿಗಿಲು‌ ಬಡಿದಂತಾಗಿದೆ. ಒಬ್ಬೊಬ್ಬರೇ ಇರುವುದು ಹೇಗೆ ಎಂಬ ಪ್ರಶ್ನೆ ಕಾಡೋದಕ್ಕೆ ಶುರುವಾಗಿದೆ.

Facebook
Twitter
Telegram
WhatsApp
suddionenews

suddionenews

Leave a Comment

Top Stories

Cold Water Side Effects : ಬೇಸಿಗೆಯಲ್ಲಿ ಫ್ರಿಡ್ಜ್ ನಲ್ಲಿರುವ ತಣ್ಣೀರು ಕುಡಿದರೆ ಎಷ್ಟೆಲ್ಲಾ ಸಮಸ್ಯೆ ಗೊತ್ತಾ ?

  ಸುದ್ದಿಒನ್ : ಈ ಬೇಸಿಗೆಯ ತಾಪವನ್ನು ನಿವಾರಿಸಲು ತಣ್ಣೀರಿಗಿಂತ ಉತ್ತಮ ಪರ್ಯಾಯವಿಲ್ಲ. ಅದಕ್ಕಾಗಿಯೇ ನಮ್ಮಲ್ಲಿ ಹೆಚ್ಚಿನವರು ಬಿಸಿಲಿನಿಂದ ಮನೆಗೆ ಬಂದ ತಕ್ಷಣ ರೆಫ್ರಿಜರೇಟರ್‌ನಿಂದ ತಣ್ಣೀರು ಕುಡಿಯುವ ಅಭ್ಯಾಸವನ್ನು ಹೊಂದಿರುತ್ತಾರೆ. ಆದರೆ ಈ ರೀತಿ

ಈ ರಾಶಿಯ ಪದವಿ ಪಡೆದವರು ಉನ್ನತ ಶ್ರೇಣಿಯ ಉದ್ಯೋಗ ಪ್ರಾಪ್ತಿ

ಈ ರಾಶಿಯ ಜನಪ್ರತಿನಿಧಿಗಳಿಗೆ ಆತ್ಮೀಯರಿಂದ ಕಂಟಕ, ಈ ರಾಶಿಯ ಪದವಿ ಪಡೆದವರು ಉನ್ನತ ಶ್ರೇಣಿಯ ಉದ್ಯೋಗ ಪ್ರಾಪ್ತಿ, ಈ ರಾಶಿಯ ವಿವಾಹಿತ ಜೀವನವು ಸಂತೋಷವಾಗಿ ಕಾಣುತ್ತದೆ, ಶುಕ್ರವಾರ-ರಾಶಿ ಭವಿಷ್ಯ ಮೇ-3,2024 ಸೂರ್ಯೋದಯ: 05:52, ಸೂರ್ಯಾಸ್ತ

ಸಾಹಿತಿ ಬಿ.ಎಲ್.ವೇಣು ನಿವಾಸಕ್ಕೆ ಶಾಸಕ ಕೆ.ಸಿ.ವೀರೇಂದ್ರ ಪಪ್ಪಿ ಭೇಟಿ

ಸುದ್ದಿಒನ್, ಚಿತ್ರದುರ್ಗ, ಮೇ. 02 :  ಖ್ಯಾತ ಸಾಹಿತಿ, ಚಿಂತಕ ಬಿ.ಎಲ್.ವೇಣು ಅವರ ನಿವಾಸಕ್ಕೆ ಸ್ಥಳೀಯ ಶಾಸಕ ಕೆ.ಸಿ.ವೀರೆಂದ್ರ ಪಪ್ಪಿ ಅವರು ಭೇಟಿ ಮಾಡಿ, ಆಶೀರ್ವಾದ ಪಡೆದು, ಅಭಿವೃದ್ಧಿ ಕಾರ್ಯಗಳ ಬಗ್ಗೆ ಸಲಹೆಗಳನ್ನು ಪಡೆದರು.

error: Content is protected !!