ಸುದ್ದಿಒನ್
“ದಿನಕ್ಕೆ ಒಂದು ಬಾರಿಯಾದರೂ ನಾವು ನಮ್ಮ ಜೊತೆಗೆ ಮಾತನಾಡಿಕೊಳ್ಳಬೇಕು. ಇಲ್ಲವಾದರೆ ಜಗತ್ತಿನ ಒಬ್ಬ ಅದ್ಭುತ ವ್ಯಕ್ತಿಯನ್ನು ಭೇಟಿ ಮಾಡುವ ಅವಕಾಶವನ್ನು ಕಳೆದುಕೊಳ್ಳುತ್ತೇವೆ” ಎಂದು ವಿವೇಕಾನಂದರು ಹೇಳಿದ್ದಾರೆ.
ಈ ಮಾತಿನ ಅರ್ಥ ತುಂಬಾ ಆಳವಾಗಿದೆ. ನಾವು ಪ್ರತಿದಿನ ಹಲವರ ಜೊತೆ ಮಾತನಾಡುತ್ತೇವೆ — ಸ್ನೇಹಿತರು, ಶಿಕ್ಷಕರು, ಕುಟುಂಬದವರು, ಸಾಮಾಜಿಕ ಜಾಲತಾಣಗಳಲ್ಲೂ ಗಂಟೆಗಳ ಕಾಲ ಕಳೆಯುತ್ತೇವೆ. ಆದರೆ ನಮ್ಮ ಮನಸ್ಸಿನ ಜೊತೆ ಮಾತನಾಡಲು ಮಾತ್ರ ಸಮಯ ಕೊಡುತ್ತೇವೆಯೇ?
ನಮ್ಮ ಜೀವನದಲ್ಲಿ ಏನು ಸರಿಯಾಗಿದೆ, ಏನು ತಪ್ಪಾಗಿದೆ, ನಮ್ಮ ಗುರಿ ಏನು, ನಾವು ಯಾವ ದಾರಿಯಲ್ಲಿ ಸಾಗುತ್ತಿದ್ದೇವೆ ಎಂಬುದನ್ನು ತಿಳಿದುಕೊಳ್ಳಲು ಆತ್ಮಪರಿಶೀಲನೆ ಬಹಳ ಮುಖ್ಯ. ದಿನದಲ್ಲಿ ಕೆಲವೇ ನಿಮಿಷಗಳಾದರೂ ಶಾಂತವಾಗಿ ಕುಳಿತು ನಮ್ಮ ಬಗ್ಗೆ ನಾವು ಯೋಚಿಸಿದರೆ, ನಮ್ಮ ಶಕ್ತಿ ಮತ್ತು ದೌರ್ಬಲ್ಯ ಎರಡೂ ನಮಗೆ ಅರ್ಥವಾಗುತ್ತವೆ.
ಇಂದಿನ ಯುವಜನತೆ ಒತ್ತಡ, ಆತಂಕ ಮತ್ತು ಸ್ಪರ್ಧೆಯ ನಡುವೆ ಬದುಕುತ್ತಿದೆ. ಇಂತಹ ಸಂದರ್ಭದಲ್ಲಿ ನಮ್ಮ ಮನಸ್ಸಿನ ಜೊತೆ ಮಾತನಾಡುವುದು ನಮಗೆ ಆತ್ಮವಿಶ್ವಾಸವನ್ನು ಕೊಡುತ್ತದೆ. ತಪ್ಪುಗಳನ್ನು ತಿದ್ದಿಕೊಳ್ಳಲು ಸಹಾಯ ಮಾಡುತ್ತದೆ. ಒಳ್ಳೆಯ ನಿರ್ಧಾರ ತೆಗೆದುಕೊಳ್ಳುವ ಶಕ್ತಿ ನೀಡುತ್ತದೆ.
ಯುವಕರಿಗೆ ಕೇವಲ ಪುಸ್ತಕ ಜ್ಞಾನವಲ್ಲ, ಆತ್ಮಜ್ಞಾನವೂ ಮುಖ್ಯ ಎಂದು ಹೇಳಿದ್ದರು. ಆದ್ದರಿಂದ ಸ್ನೇಹಿತರೇ, ದಿನಕ್ಕೆ ಸ್ವಲ್ಪ ಸಮಯ ನಿಮಗಾಗಿ ಮೀಸಲಿಡಿ. ನಿಮ್ಮ ಕನಸುಗಳ ಬಗ್ಗೆ ಯೋಚಿಸಿ. ನಿಮ್ಮ ತಪ್ಪುಗಳನ್ನು ತಿದ್ದಿಕೊಳ್ಳಿ. ಯಾಕೆಂದರೆ ನಮ್ಮ ಬದುಕನ್ನು ಬದಲಾಯಿಸುವ ದೊಡ್ಡ ಶಕ್ತಿ ನಮ್ಮೊಳಗೇ ಇದೆ.

ಸಾರ್ವಜನಿಕ ಕುಂದುಕೊರತೆ ವಿಭಾಗ : ನಿಮ್ಮ ಧ್ವನಿ - ನಮ್ಮ ವೇದಿಕೆ
ನಿಮ್ಮ ಊರಿನ ಸಮಸ್ಯೆಗಳು ಇನ್ನು ಮುಂದೆ ಕೇವಲ ಚರ್ಚೆಯಾಗಬಾರದು, ಅವುಗಳಿಗೆ ಪರಿಹಾರ ಸಿಗಬೇಕು.
ವರದಿ ಮಾಡುವುದು ಹೇಗೆ?
- ನಿಮ್ಮ ಸುತ್ತಮುತ್ತಲಿನ ರಸ್ತೆ, ನೀರು, ವಿದ್ಯುತ್ ಸಮಸ್ಯೆಗಳ ಫೋಟೋ, ವಿಡಿಯೋ ಅಥವಾ ಮಾಹಿತಿ ನಮಗೆ ಕಳುಹಿಸಿ.
ನಾವು ಏನು ಮಾಡುತ್ತೇವೆ?
- ನೀವು ಕಳುಹಿಸಿದ ವರದಿಗಳನ್ನು suddione.com ನಲ್ಲಿ ಪ್ರಕಟಿಸುತ್ತೇವೆ.
- ಸಂಬಂಧಪಟ್ಟ ಇಲಾಖೆಯ ಅಧಿಕಾರಿಗಳ ಗಮನಕ್ಕೆ ತಂದು ಪರಿಹಾರಕ್ಕಾಗಿ ಒತ್ತಾಯಿಸುತ್ತೇವೆ.
- ನಿಮ್ಮೂರಿನ ಅಭಿವೃದ್ಧಿಗೆ ನಿಮ್ಮೊಂದಿಗೆ ಧ್ವನಿಗೂಡಿಸುತ್ತೇವೆ.











