ಬೆಂಗಳೂರು: ವಿನಯ್ ಕುಲಕರ್ಣಿ ಇದೀಗ ಅಪರಾಧಿಯಾಗಿ ಜೈಲು ಶಿಕ್ಷೆಗೆ ಗುರಿಯಾಗಿದ್ದಾರೆ. ಎರಡು ವರ್ಷಕ್ಕಿಂತ ಮೇಲ್ಪಟ್ಟು ಶಿಕ್ಷೆಯಾದರೇನೆ ಶಾಸಕ ಸ್ಥಾನದಿಂದ ಅನರ್ಹಗೊಳ್ಳಲಿದ್ದಾರೆ. ಜೀವಾವಧಿ ಶಿಕ್ಷೆಗೆ ಗುರಿಯಾಗಿರುವ ಕಾರಣ, ಶಾಸಕ ಸ್ಥಾನ ಅಧಿಕೃತವಾಗಿ ರದ್ದಾಗಿದೆ. ಈಗ ಧಾರವಾಡ ಕ್ಷೇತ್ರ ಖಾಲಿಯಾಗಿದೆ. ಏಪ್ರಿಲ್ 15ರಿಂದಲೇ ಜಾರಿಯಾಗುವಂತೆ ಶಾಸಕ ಸ್ಥಾನವನ್ನು ರದ್ದು ಮಾಡಲಾಗಿದೆ.
ನ್ಯಾಯಾಲಯದಿಂದ ಕೊ*** ಆರೋಪ ಸಾಬೀತಾಗಿ ಶಿಕ್ಷೆಗೆ ಗುರಿಯಾಗಿರುವ ಕಾರಣ ಏಪ್ರಿಲ್ 15 ರಿಂದಲೇ ಶಾಸಕ ಸ್ಥಾನವನ್ನು ರದ್ದು ಮಾಡಲಾಗಿದೆ. ಒಂದು ವೇಳೆ ನ್ಯಾಯಾಲಯಕ್ಕೆ ಮೇಲ್ಮನವಿ ಸಲ್ಲಿಸಿದ ಮೇಲೂ ಶಿಕ್ಷೆಗೆ ತಡೆಯಾಜ್ಞೆ ಸಿಗದೆ ಹೋದಲ್ಲಿ, ಅಥವಾ ಶಿಕ್ಷೆ ರದ್ದಾಗದೆ ಇದ್ದಲ್ಲಿ, ಜೈಲಿನಿಂದ ಬಿಡುಗಡೆಯಾದ ಸಂದರ್ಭದಲ್ಲೂ ಸುಮಾರು 6 ವರ್ಷಗಳ ಕಾಲ ಚುನಾವಣೆಗೆ ಸ್ಪರ್ಧೆ ಮಾಡುವಂತೆ ಇರುವುದಿಲ್ಲ. ನ್ಯಾಯಾಲಯವೂ ಜೀವಾವಧಿ ಶಿಕ್ಷೆ ವಿಧಿಸಿದ ಕಾರಣ ಧಾರವಾಡ ಜಿಲ್ಲೆಯ ಶಾಸಕ ಸ್ಥಾನ ರದ್ದಾಗಿದೆ.

2016ರಲ್ಲಿ ನಡೆದ ಕೊ *** ಪ್ರಕರಣ ಇದಾಗಿದೆ. ಬಿಜೆಪಿ ಮುಖಂಡ ಹಾಗೂ ಜಿಲ್ಲಾ ಪಂಚಾಯತ್ ಮಾಜಿ ಸದಸ್ಯ ಯೋಗೀಶ್ ಗೌಡನ ಕೊಲೆಯಾಗಿತ್ತು. ಯಾವುದೋ ಜಮೀನಿನ ವಿಚಾರಕ್ಕೆ ಜಿಮ್ ಒಂದರಲ್ಲಿ ಯೋಗೀಶ್ ಗೌಡನ ಬರ್ಬರ ಹತ್ಯೆ ಮಾಟಲಾಗಿತ್ತು. ಅದರಲ್ಲಿ A15ನೇ ಆರೋಪಿಯಾಗಿ ವಿನಯ್ ಕುಲಕರ್ಣಿ ಇದ್ದರು. ಹತ್ತು ವರ್ಷಗಳ ಬಳಿಕ ಈ ಕೊ**** ಕೇಸಿನ ಆರೋಪಿಗಳಿಗೆ ಶಿಕ್ಷೆಯಾಗಿದೆ. ಎಲ್ಲರಿಗೂ ಜೀವಾವಧಿ ಶಿಕ್ಷೆಯನ್ನ ವಿಧಿಸಲಾಗಿದೆ. ಯೋಗೀಶ್ ಗೌಡ ಅವರ ಕುಟುಂಬಸ್ಥರು ತೀರ್ಪು ಬಂದ ಮೇಲೆ ಸಾಕಷ್ಟು ಖುಷಿ ಪಟ್ಟಿದ್ದರು.



















