Kannada news ಚಿತ್ರದುರ್ಗ ದಾವಣಗೆರೆ ಬೆಂಗಳೂರು ರಾಜಕೀಯ ಚುನಾವಣೆ ಮಳೆ ಕ್ರಿಕೆಟ್ ಭಾರತ ಚಿನ್ನ ಬೆಳ್ಳಿ ಹವಾಮಾನ ಕ್ರಿಕೆಟ್  ಕನ್ನಡ ನ್ಯೂಸ್

ಎತ್ತಿನಹೊಳೆ.. ಮೇಕೆದಾಟು ಯೋಜನೆ : ಮಹತ್ವದ ಅಪ್ಡೇಟ್ ನೀಡಿದ ಡಿಕೆಶಿ

---Advertisement---

ಬೆಂಗಳೂರು: ಎತ್ತಿನಹೊಳೆ, ಭದ್ರಾ ಮೇಲ್ದಂಡೆ ಮತ್ತು ಮೇಕೆದಾಟು ವಿಚಾರದಲ್ಲಿ ಸಭೆಯನ್ನ ಕರೆದಿದ್ದೆ. ನಾನು, ರೆವಿನ್ಯೂ ಮಿನಿಸ್ಟರ್, ಫಾರೆಸ್ಟ್ ಮಿನಿಸ್ಟರ್ ಇಷ್ಟು ಜನ ಕೂತು ಚರ್ಚೆ ಮಾಡಿದ್ದೇವೆ. ಎತ್ತಿನ ಹೊಳೆ ಯೋಜನೆಗೆ ಸಂಬಂಧಪಟ್ಟಂತೆ ಅರಣ್ಯ ಇಲಾಖೆಯಿಂದ ಆಗಬೇಕಾದ ಕ್ಲಿಯರೆನ್ಸ್ ಗೆ ಒಂದಷ್ಟು ಕಂಡಿಷನ್ ಗಳನ್ನ ಹಾಕಿ, ಸೆಂಟ್ರಲ್ ಗವರ್ನಮೆಂಟ್ ಅವರು ಕಳುಹಿಸಿದ್ರು ಎಂದಿದ್ದಾರೆ.

ಆ ಜಮೀನೆಲ್ಲಾ ಕೊಡೋದಕ್ಕೆ ರೆವಿನ್ಯೂ ಇಲಾಖೆ, ಫಾರೆಸ್ಟ್ ಇಲಾಖೆಯಿಂದ ತಯಾರಿ ನಡೀತಾ ಇದೆ. 10% ಉಳಿದುಕೊಂಡಿತ್ತು. ಅದಕ್ಕೂ ರೆವಿನ್ಯೂ ಇಲಾಖೆ ಒಪ್ಪಿಕೊಂಡಿದೆ. ಈ ವಾರದಲ್ಲಿಯೇ ಜಮೀನನ್ನು ಟ್ರಾನ್ಸ್‌ಫರ್ ಮಾಡ್ತೇವೆ. ನಿನ್ನೆ ನಮಗೆ 257 ಕೋಟಿ ರೂಪಾಯಿ ಕೊಡಬೇಕು ಅಂತೇಳಿ ಮೆಟಿಕೇಷನ್ ಪ್ಲ್ಯಾನ್ ಅನ್ನು ಅರಣ್ಯ ಇಲಾಖೆ ಅವರು ಕೊಟ್ಟಿದ್ದಾರೆ. ಹಣವನ್ನು ಇವತ್ತೆ ಕಟ್ಟುವುದಕ್ಕೆ ಮಾರ್ಗದರ್ಶನ ನೀಡಿದ್ದೇವೆ. ಈ ವಾರದಲ್ಲಿಯೇ ಕಾಂಟ್ರಾಕ್ಟರ್ ಗಳಿಗೂ ಕೆಲಸ ಪ್ರಾರಂಭಿಸಲು ಹೇಳಿದ್ದೇವೆ.

ತುಮಕೂರಿನ ಜಮೀನಿನ ವಿಚಾರ ಏನಿದೆ ಅದನ್ನು ಸರ್ವೇ ಮಾಡೋದಕ್ಕೂ ಸೂಚನೆ ನೀಡಿದ್ದೇವೆ. ಆದಷ್ಟು ಬೇಗ ಚಿಕ್ಕಬಳ್ಳಾಪುರ, ಕೋಲಾರಕ್ಕೆ ನೀರನ್ನು ತೆಗೆದುಕೊಂಡು ಹೋಗುವುದಕ್ಕೆ ಯಾವ ಕ್ರಮ ವಹಿಸಬೇಕೋ ಅದನ್ನ ಮಾಡ್ತೇವೆ. ಮೇಕೆದಾಟಿಗೆ ಸಂಬಂಧಪಟ್ಟಂತೆ ಈಗಾಗಲೆರ ಡಿಪಿಆರ್ ಸಿದ್ಧತೆಯಾಗಿದೆ. ಎಲ್ಲವನ್ನು ಕೂಡ ಫೈಲ್ ಮಾಡಿ, ಸಬ್ಮಿಟ್ ಮಾಡುತ್ತೇವೆ. ಸುಮಾರು 5300 ಹೆಕ್ಟೇರ್ ಜಮೀನನ್ನು ಅರಣ್ಯ ಇಲಾಖೆ ಅವರಿಗೆ ಕೊಡಬೇಕಾಗುತ್ತದೆ. ಅದನ್ನು ಕೂಡ ಮಾತನ್ನಾಡಿದ್ದೇವೆ. ಕೃಷ್ಣಭೈರೇಗೌಡ ಅವರ ಬಳಿ ಚರ್ಚೆ ಮಾಡ್ತಾ ಇದ್ದೇನೆ. ಎಲ್ಲೆಲ್ಲಿ ಫಾರೆಸ್ಟ್ ಗೆ ಕೊಡುವ ಜಮೀನು ಇದೆ ಅದೆಲ್ಲವನ್ನು ಲೀಸ್ಟ್ ಮಾಡಿಕೊಳ್ಳುವುದಕ್ಕೆ ಸೂಚನೆ ನೀಡಲಾಗಿದೆ ಎಂಬುದನ್ನ ತಿಳಿಸಿದ್ದಾರೆ.

suddionenews

ಕನ್ನಡ ಸುದ್ದಿಗಳ ವಿಶ್ವಾಸಾರ್ಹ ಮೂಲ — suddione.com ನಲ್ಲಿ ಓದಿ ರಾಷ್ಟ್ರೀಯ, ಅಂತರರಾಷ್ಟ್ರೀಯ, ರಾಜಕೀಯ, ಕ್ರೀಡೆ, ಮನರಂಜನೆ, ವಾಣಿಜ್ಯ, ಶಿಕ್ಷಣ ಮತ್ತು ತಂತ್ರಜ್ಞಾನಕ್ಕೆ ಸಂಬಂಧಿಸಿದ ಪ್ರತಿಯೊಂದು ಪ್ರಮುಖ ಅಪ್‌ಡೇಟ್. ನೀವು ಯಾವಾಗಲೂ ಅಪ್‌ಡೇಟ್ ಆಗಿರಲು ನಾವು ವೇಗವಾದ, ನಿಖರವಾದ ಮತ್ತು ನಿಷ್ಪಕ್ಷಪಾತವಾದ ಸುದ್ದಿಗಳನ್ನು ಸರಳ ಹಾಗೂ ಸ್ಪಷ್ಟ ಭಾಷೆಯಲ್ಲಿ ನೀಡುತ್ತೇವೆ. ಸಂಪಾದಕರು: ನಾಗೇಂದ್ರ ರೆಡ್ಡಿ ಪಿ.ಎಲ್

Join WhatsApp

Join Now

Join Telegram

Join Now
🏫 ಅಡ್ಮಿಷನ್ ಓಪನ್
🔒

ಇಂಡಿಯನ್ ಇಂಟರ್ ನ್ಯಾಷನಲ್ ಸ್ಕೂಲ್

ಸ್ವಾಗತ...