Kannada news ಚಿತ್ರದುರ್ಗ ದಾವಣಗೆರೆ ಬೆಂಗಳೂರು ರಾಜಕೀಯ ಚುನಾವಣೆ ಮಳೆ ಕ್ರಿಕೆಟ್ ಭಾರತ ಚಿನ್ನ ಬೆಳ್ಳಿ ಹವಾಮಾನ ಕ್ರಿಕೆಟ್  ಕನ್ನಡ ನ್ಯೂಸ್

ದಲಿತ ಸಿಎಂ ಕೂಗಿನ ನಡುವೆ ಲಿಂಗಾಯತ ಸಿಎಂ ಬಗ್ಗೆ ಎಂಬಿ ಪಾಟೀಲ್ ಏನಂದ್ರು..?

---Advertisement---

ಬೆಂಗಳೂರು: ಎರಡೂವರೆ ವರ್ಷ ಆದ್ಮೇಲೆ ಸಿಎಂ ಸ್ಥಾನವನ್ನ ನನಗೆ ಬಿಟ್ಟು ಕೊಡ್ತೀನಿ ಅಂತ ಹೇಳಿದ್ದರು ಎಂಬುದಾಗಿ ಡಿಸಿಎಂ ಡಿಕೆ ಶಿವಕುಮಾರ್ ಹೋರಾಡ್ತಾ ಇದ್ದಾರೆ. ಇರುವ ಕಡಿಮೆ ಸಮಯದಲ್ಲಾದರೂ ಸಿಎಂ ಖುರ್ಚಿ ಮೇಲೆ ಕೂರಬೇಕು ಎಂಬ ಹಂಬಲವಿದೆ. ಅದಕ್ಕಾಗಿ ಹೈಕಮಾಂಡ್ ಭೇಟಿಗೆ ಓಡಾಟ‌ ಮಾಡ್ತಾನೆ ಇದ್ದಾರೆ. ಆದರೂ ಯಾವುದೇ ಪ್ರಯೋಜನ ಆಗ್ತಾ ಇಲ್ಲ. ಇದರ ನಡುವೆ ದಲಿತ ಸಿಎಂ ಕೂಗು ಕೂಡ ಜೋರಾಗಿದೆ. ಬಹಳಷ್ಟು ವರ್ಷಗಳಿಂದ ಕೇಳಿಕೊಂಡೇ ಬರ್ತಾ ಇದ್ದೇವೆ. ಈ ಬಾರಿ ಸಿಎಂ ಬದಲಾಗುವುದಾದರೇ ದಲಿತರಿಗೆ ಆ ಸ್ಥಾನ ಕೊಡಿ ಅಂತ. ಇದೆಲ್ಲಾ ಬೆಳವಣಿಗೆಯ ನಡುವೆ ಲಿಂಗಾಯತ ಸಿಎಂ ಬೇಡಿಕೆ ಏನಾದ್ರು ಇದ್ಯಾ ಸರ್ ಎಂಬ ಪ್ರಶ್ನೆಗೆ ಎಂ.ಬಿ.ಪಾಟೀಲ್ ಉತ್ತರ ಕೊಟ್ಟಿದ್ದು ಹೀಗೆ.

ಯಾರೂ ಆ ಕೂಗನ್ನು ಹಬ್ಬಿಸಿದ್ದಾರೆ ಅದಕ್ಕೆಲ್ಲಾ ಹೈಕಮಾಂಡ್ ಉತ್ತರವನ್ನು ಕೊಡುತ್ತೆ. ಲಿಂಗಾಯತರಿಗೆ ಮಾಡಿ, ಮತ್ತೊಂದಕ್ಕೆ‌ ಮಾಡಿ ಎಂಬುದನ್ನ ನಮ್ಮ ಬೇಡಿಕೆ ಏನಿದೆ ಅದನ್ನ ಇಡಬಹುದು ಅಷ್ಟೆ. ತಪ್ಪೇನಿಲ್ಲ. ಆದರೆ ಎಲ್ಲವನ್ನು ನಿರ್ಧಾರವನ್ನು ಹೈಕಮಾಂಡ್ ನೋಡಿಕೊಳ್ಳುತ್ತೆ.

ವೀರೇಂದ್ರ ಪಾಟೀಲ್ 1999 ನಂತರ ಲಿಂಗಾಯತರಿಗೆ ಸಿಕ್ಕಿಲ್ಲ. ದೊಡ್ಡ ಸಮುದಾಯವಿದೆ. 35 ಜನ ಶಾಸಕರನ್ನು ಹೊಂದಿದ್ದೇವೆ. ದಲಿತ, ಹಿಂದುಳಿದ, ಒಕ್ಕಲಿಗ ಸಮುದಾಯ ಇರಬಹುದು, ಮುಸ್ಲಿಂ ಸಮುದಾಯ ಇರಬಹುದು. ಎಲ್ಲರೂ ಕಾಂಗ್ರೆಸ್ ಗೆ ಬೆಂಬಲ ನೀಡಿದ್ದಾರೆ. ಅದಕ್ಕೆ ನಮ್ಮ ಕಾಂಟ್ರುಬ್ಯೂಷನ್ ಕೂಡ ಲಿಂಗಾಯತರದ್ದು ಇದೆ‌. ಪ್ರತಿಸಲ ಬಿಜೆಪಿಯವರು ಸುಮಾರು 70 ಸೀಟು ಕೊಟ್ಟಿದ್ದರು, 17-19 ಶಾಸಕರಿದ್ದಾರೆ. ನಾವೂ 56 ಶಾಸಕರು 35ಕ್ಕೆ ಬಂದಿದ್ದೇವೆ. ನಾಯಕತ್ವ ವಿಚಾರ ಏನಿದ್ದರೂ ಹೈಕಮಾಂಡ್ ಗೆ ಸಂಬಂಧಿಸಿದಂತದ್ದು ಎಂದಿದ್ದಾರೆ.

suddionenews

ಕನ್ನಡ ಸುದ್ದಿಗಳ ವಿಶ್ವಾಸಾರ್ಹ ಮೂಲ — suddione.com ನಲ್ಲಿ ಓದಿ ರಾಷ್ಟ್ರೀಯ, ಅಂತರರಾಷ್ಟ್ರೀಯ, ರಾಜಕೀಯ, ಕ್ರೀಡೆ, ಮನರಂಜನೆ, ವಾಣಿಜ್ಯ, ಶಿಕ್ಷಣ ಮತ್ತು ತಂತ್ರಜ್ಞಾನಕ್ಕೆ ಸಂಬಂಧಿಸಿದ ಪ್ರತಿಯೊಂದು ಪ್ರಮುಖ ಅಪ್‌ಡೇಟ್. ನೀವು ಯಾವಾಗಲೂ ಅಪ್‌ಡೇಟ್ ಆಗಿರಲು ನಾವು ವೇಗವಾದ, ನಿಖರವಾದ ಮತ್ತು ನಿಷ್ಪಕ್ಷಪಾತವಾದ ಸುದ್ದಿಗಳನ್ನು ಸರಳ ಹಾಗೂ ಸ್ಪಷ್ಟ ಭಾಷೆಯಲ್ಲಿ ನೀಡುತ್ತೇವೆ. ಸಂಪಾದಕರು: ನಾಗೇಂದ್ರ ರೆಡ್ಡಿ ಪಿ.ಎಲ್

Join WhatsApp

Join Now

Join Telegram

Join Now
🏫 ಅಡ್ಮಿಷನ್ ಓಪನ್
🔒

ಇಂಡಿಯನ್ ಇಂಟರ್ ನ್ಯಾಷನಲ್ ಸ್ಕೂಲ್

ಸ್ವಾಗತ...