ಚಾಮರಾಜನಗರ: ನಿನ್ನೆಯಿಂದ ಶಾಸಕ ಹ್ಯಾರಿಸ್ ಹಾಗೂ ಪುತ್ರ ನಲಪಾಡ್ ಮನೆ ಮೇಲೆ ಇಡಿ ದಾಳಿ ಮಾಡಿದೆ. ಈ ಸಂಬಂಧ ಸಿಎಂ ಸಿದ್ದರಾಮಯ್ಯ ಪ್ರತಿಕ್ರಿಯೆ ನೀಡಿದ್ದಾರೆ. ಕೇಂದ್ರ ಸರ್ಕಾರದವರು ಯಾವಾಗಲೂ ಕಾಂಗ್ರೆಸ್ ಅವರನ್ನೆ ಗುರಿ ಇಟ್ಕೊಂಡು ಮಾಡೋದು. ಬಿಜೆಪಿಯವರ ಮನೆ ಮೇಲೆ ರೇಡ್ ಮಾಡ್ತಾರಾ ಎಂದು ಪ್ರಶ್ನೆ ಮಾಡಿದ್ದಾರೆ.
ಇದೇ ವೇಳೆ ಬಿಜೆಪಿ ಅವರು ಕೂಡ ಗ್ಯಾರಂಟಿ ಯೋಜನೆಗಳನ್ನ ಕಾಪಿ ಮಾಡ್ತಿರುವ ಬಗ್ಗೆ ಮಾತನ್ನಾಡಿ, ಯಾರು ವಿರೋಧ ಮಾಡಿದರೊ ಅವರಿಗೆ ಈಗಲಾದರೂ ಗೊತ್ತಾಯ್ತಲ್ಲ. ಗ್ಯಾರಂಟಿ ಯೋಜನೆಗಳು, ಬಡವರಿಗೋಸ್ಕರ ಇರುವಂತದ್ದು ಅಂತ ಎಂದಿದ್ದಾರೆ. ಮಹಿಳಾ ಮೀಸಲಾತಿ ಬಗ್ಗೆ ಮಾತನಾಡಿ, ಮಹಿಳಾ ಮೀಸಲಾತಿ ಯಾವಾಗ ಶುರುವಾದದ್ದು. 73-74 ಅಮೆಡ್ಮೆಂಟ್ ಮಾಡಿದವರು ಯಾರು, ಅದನ್ನ ವಿರೋಧ ಮಾಡಿದವರು ಯಾರು. ಮಹಿಳಾ ಮೀಸಲಾತಿಯನ್ನ ಮಾಡಿದ್ದೆ ಕಾಂಗ್ರೆಸ್ ನವರು. ಅದನ್ನ ರಾಜ್ಯಸಭೆಯಲ್ಲಿ ಕೆಡವಿದವರು ಯಾರು ಎನ್ಡಿಎ ಎಂದಿದ್ದಾರೆ.

ಇನ್ನು ಚಾಮರಾಜನಗರಕ್ಕೆ ಬಂದರೆ ಅಧಿಕಾರ ಹೋಗುತ್ತೆ ಎಂಬ ಮಾತಿದೆ. ಆದರೆ ಸಿದ್ದರಾಮಯ್ಯ ಅವರು 24ಕ್ಕೂ ಹೆಚ್ಚು ಬಾರಿ ಭೇಟಿ ನೀಡಿ ಆ ಮೂಢನಂಬಿಕೆಯನ್ನ ಮುರಿದಿದ್ದಾರೆ. ಇಂದು ಕೂಡ ಭೇಟಿ ನೀಡಿ ಆ ಬಗ್ಗೆ ಮಾತನ್ನಾಡಿದ್ದಾರೆ. ಅದರಲ್ಲೆಲ್ಲಾ ನಂಗೆ ನಂಬಿಕೆ ಇಲ್ಲ. ಚಾಮರಾಜನಗರ ಬಂದ್ರೆ ಅಧಿಕಾರ ಕಳೆದುಕೊಳ್ತೀವಿ ಎಂಬುದರಲ್ಲೆಲ್ಲಾ ನಂಬಿಕೆ ಇಲ್ಲ. ಇಲ್ಲಿಗೆ ಅನೇಕ ಸಲ ಬಂದಿದ್ದೀನಿ, ಮಾದೇಶ್ವರ ಬೆಟ್ಟಕ್ಕೆ ಹೋಗಿದ್ದೀನಿ. ಇಲ್ಲಿಗೆ ಬಂದ್ರೆ ಖುರ್ಚಿ ಗಟ್ಟಿ ಆಗುತ್ತೆ ಅನ್ನೋದನ್ನ ತಮಾಷೆಗೆ ಹೇಳಿದ್ದು, ಅದನ್ನೆಲ್ಲಾ ಸೀರಿಯಸ್ ಆಗಿ ತೆಗೆದುಕೊಳ್ಳಬೇಡಿ ಎಂದಿದ್ದಾರೆ.
















