Kannada news ಚಿತ್ರದುರ್ಗ ದಾವಣಗೆರೆ ಬೆಂಗಳೂರು ರಾಜಕೀಯ ಚುನಾವಣೆ ಮಳೆ ಕ್ರಿಕೆಟ್ ಭಾರತ ಚಿನ್ನ ಬೆಳ್ಳಿ ಹವಾಮಾನ ಕ್ರಿಕೆಟ್  ಕನ್ನಡ ನ್ಯೂಸ್

ಹ್ಯಾರಿಸ್ ಮನೆ ಮೇಲೆ ಇಡಿ ರೇಡ್ ವಿಚಾರ : ಸಿಎಂ ಸಿದ್ದರಾಮಯ್ಯ ಏನಂದ್ರು..?

---Advertisement---

ಚಾಮರಾಜನಗರ: ನಿನ್ನೆಯಿಂದ ಶಾಸಕ ಹ್ಯಾರಿಸ್ ಹಾಗೂ ಪುತ್ರ ನಲಪಾಡ್ ಮನೆ ಮೇಲೆ ಇಡಿ ದಾಳಿ ಮಾಡಿದೆ‌. ಈ ಸಂಬಂಧ ಸಿಎಂ ಸಿದ್ದರಾಮಯ್ಯ ಪ್ರತಿಕ್ರಿಯೆ ನೀಡಿದ್ದಾರೆ. ಕೇಂದ್ರ ಸರ್ಕಾರದವರು ಯಾವಾಗಲೂ ಕಾಂಗ್ರೆಸ್ ಅವರನ್ನೆ ಗುರಿ ಇಟ್ಕೊಂಡು ಮಾಡೋದು. ಬಿಜೆಪಿಯವರ ಮನೆ ಮೇಲೆ ರೇಡ್ ಮಾಡ್ತಾರಾ ಎಂದು ಪ್ರಶ್ನೆ ಮಾಡಿದ್ದಾರೆ.

ಇದೇ ವೇಳೆ ಬಿಜೆಪಿ ಅವರು ಕೂಡ ಗ್ಯಾರಂಟಿ ಯೋಜನೆಗಳನ್ನ ಕಾಪಿ ಮಾಡ್ತಿರುವ ಬಗ್ಗೆ ಮಾತನ್ನಾಡಿ, ಯಾರು ವಿರೋಧ ಮಾಡಿದರೊ ಅವರಿಗೆ ಈಗಲಾದರೂ ಗೊತ್ತಾಯ್ತಲ್ಲ. ಗ್ಯಾರಂಟಿ ಯೋಜನೆಗಳು, ಬಡವರಿಗೋಸ್ಕರ ಇರುವಂತದ್ದು ಅಂತ ಎಂದಿದ್ದಾರೆ. ಮಹಿಳಾ ಮೀಸಲಾತಿ ಬಗ್ಗೆ ಮಾತನಾಡಿ, ಮಹಿಳಾ ಮೀಸಲಾತಿ ಯಾವಾಗ ಶುರುವಾದದ್ದು. 73-74 ಅಮೆಡ್ಮೆಂಟ್ ಮಾಡಿದವರು ಯಾರು, ಅದನ್ನ ವಿರೋಧ ಮಾಡಿದವರು ಯಾರು. ಮಹಿಳಾ‌ ಮೀಸಲಾತಿಯನ್ನ ಮಾಡಿದ್ದೆ ಕಾಂಗ್ರೆಸ್ ನವರು. ಅದನ್ನ ರಾಜ್ಯಸಭೆಯಲ್ಲಿ ಕೆಡವಿದವರು ಯಾರು ಎನ್ಡಿಎ ಎಂದಿದ್ದಾರೆ.

ಇನ್ನು ಚಾಮರಾಜನಗರಕ್ಕೆ ಬಂದರೆ ಅಧಿಕಾರ ಹೋಗುತ್ತೆ ಎಂಬ ಮಾತಿದೆ. ಆದರೆ ಸಿದ್ದರಾಮಯ್ಯ ಅವರು 24ಕ್ಕೂ ಹೆಚ್ಚು ಬಾರಿ ಭೇಟಿ ನೀಡಿ ಆ ಮೂಢನಂಬಿಕೆಯನ್ನ ಮುರಿದಿದ್ದಾರೆ. ಇಂದು ಕೂಡ ಭೇಟಿ ನೀಡಿ ಆ ಬಗ್ಗೆ ಮಾತನ್ನಾಡಿದ್ದಾರೆ. ಅದರಲ್ಲೆಲ್ಲಾ ನಂಗೆ ನಂಬಿಕೆ ಇಲ್ಲ. ಚಾಮರಾಜನಗರ ಬಂದ್ರೆ ಅಧಿಕಾರ ಕಳೆದುಕೊಳ್ತೀವಿ ಎಂಬುದರಲ್ಲೆಲ್ಲಾ‌ ನಂಬಿಕೆ ಇಲ್ಲ. ಇಲ್ಲಿಗೆ ಅನೇಕ ಸಲ ಬಂದಿದ್ದೀನಿ, ಮಾದೇಶ್ವರ ಬೆಟ್ಟಕ್ಕೆ ಹೋಗಿದ್ದೀನಿ. ಇಲ್ಲಿಗೆ ಬಂದ್ರೆ ಖುರ್ಚಿ ಗಟ್ಟಿ ಆಗುತ್ತೆ ಅನ್ನೋದನ್ನ ತಮಾಷೆಗೆ ಹೇಳಿದ್ದು, ಅದನ್ನೆಲ್ಲಾ ಸೀರಿಯಸ್ ಆಗಿ ತೆಗೆದುಕೊಳ್ಳಬೇಡಿ‌ ಎಂದಿದ್ದಾರೆ.

suddionenews

ಕನ್ನಡ ಸುದ್ದಿಗಳ ವಿಶ್ವಾಸಾರ್ಹ ಮೂಲ — suddione.com ನಲ್ಲಿ ಓದಿ ರಾಷ್ಟ್ರೀಯ, ಅಂತರರಾಷ್ಟ್ರೀಯ, ರಾಜಕೀಯ, ಕ್ರೀಡೆ, ಮನರಂಜನೆ, ವಾಣಿಜ್ಯ, ಶಿಕ್ಷಣ ಮತ್ತು ತಂತ್ರಜ್ಞಾನಕ್ಕೆ ಸಂಬಂಧಿಸಿದ ಪ್ರತಿಯೊಂದು ಪ್ರಮುಖ ಅಪ್‌ಡೇಟ್. ನೀವು ಯಾವಾಗಲೂ ಅಪ್‌ಡೇಟ್ ಆಗಿರಲು ನಾವು ವೇಗವಾದ, ನಿಖರವಾದ ಮತ್ತು ನಿಷ್ಪಕ್ಷಪಾತವಾದ ಸುದ್ದಿಗಳನ್ನು ಸರಳ ಹಾಗೂ ಸ್ಪಷ್ಟ ಭಾಷೆಯಲ್ಲಿ ನೀಡುತ್ತೇವೆ. ಸಂಪಾದಕರು: ನಾಗೇಂದ್ರ ರೆಡ್ಡಿ ಪಿ.ಎಲ್

Join WhatsApp

Join Now

Join Telegram

Join Now
🏫 ಅಡ್ಮಿಷನ್ ಓಪನ್
🔒

ಇಂಡಿಯನ್ ಇಂಟರ್ ನ್ಯಾಷನಲ್ ಸ್ಕೂಲ್

ಸ್ವಾಗತ...