ಬೆಂಗಳೂರು: ಇಂದು ಅಂಬೇಡ್ಕರ್ ಅವರ ಜಯಂತಿ ಪ್ರಯುಕ್ತ ಅಂಬೇಡ್ಕರ್ ಅವರ ಪ್ರತಿಮೆಗೆ ಮಾಲಾರ್ಪಣೆ ಮಾಡಿದ ಸಚಿವ ಜಮೀರ್ ಅಹ್ಮದ್, ಅಂಬೇಡ್ಕರ್ ಜಯಂತಿಯ ಶುಭಾಶಯಗಳನ್ನ ಕೋರೋದಕ್ಕೆ ಬಯಸುತ್ತೇನೆ. ಇಡೀ ದೇಶದಲ್ಲಿ ಅಂಬೇಡ್ಕರ್ ಜಯಂತಿಯನ್ನ ಅದ್ದೂರಿಯಾಗಿ ಆಚರಿಸ್ತಾರೆ. ನಾಡಹಬ್ಬ ಇದ್ದಂತೆ. ಎಲ್ಲರಿಗೂ ಅಂಬೇಡ್ಕರ್ ಜಯಂತಿಯ ಶುಭಾಶಯಗಳು ಎಂದಿದ್ದಾರೆ.
ಇದೇ ವೇಳೆ ದಾವಣಗೆರೆ ದಕ್ಷಿಣ ಕ್ಷೇತ್ರದ ಉಪಚುನಾವಣೆಯ ಬಗ್ಗೆ ಮಾತನ್ನಾಡಿ, ಜಬ್ಬಾರ್ ಅವರು ರಾಜೀನಾಮೆ ಕೊಟ್ಟಿರೋದು ಗೊತ್ತಾಯ್ತು. ಆದರೆ ಅಲ್ಲಿ ನಾನು ಇರಲಿಲ್ಲ. ನಜೀರ್ ಅವರಿಗೆ ತೆಗೀತೀವಿ ಅಂತ ಹೇಳಿದ್ದಾರೆ. ಯಾವ ಕಾರಣಕ್ಕೆ ಅನ್ನೋದನ್ನ ಕೇಳಿ ನೋಡ್ತೇನೆ. ಸಿಎಂ ಅವರೇನೋ ಅವರಿಗೆ ದಾವಣಗೆರೆಗೆ ಹೋಗೋದಕ್ಕೆ ಹೇಳಿದ್ದರಂತೆ. ಆದರೆ ದಾವಣಗೆರೆಗೆ ಹೋಗಿಲ್ಲ ಎಂಬ ಕಾರಣಕ್ಕೆ ತೀರ್ಮಾನ ತೆಗೆದುಕೊಂಡಿದ್ದಾರೆ ಅನ್ನೋದು ಗೊತ್ತಾಯ್ತು. ಈಗ ಸಿಎಂ ಮನೆಗೆ ಹೋಗ್ತಾ ಇದ್ದೀನಿ ಆ ಬಗ್ಗೆ ಚರ್ಚೆ ಮಾಡ್ತೀನಿ ಎಂದಿದ್ದಾರೆ.

ಇನ್ನು ದಾವಣಗೆರೆಯ ಅಲ್ಪಸಂಖ್ಯಾರ ಒಗ್ಗಟ್ಟಿನ ಬಗ್ಗೆ ಮಾತನ್ನಾಡಿ, ಎಲ್ಲರೂ ಒಗ್ಗಟ್ಟಾಗಿಯೇ ಇರೋದು. ಮುಸಲ್ಮಾನರ ಅಸಮಾಧಾನ ಇದ್ದದ್ದು ನಿಜ. ಅದು ಸ್ಥಳೀಯವಾಗಿ. ಮತದಾರರಲ್ಲಿ ಇದ್ದದ್ದು. ದಾವಣಗೆರೆ ದಕ್ಷಿಣದಲ್ಲಿ ಅಸಮಾಧಾನ ಇತ್ತು. ಟಿಕೆಟ್ ಕೊಟ್ಟಿಲ್ಲ ಎಂಬ ಕಾರಣಕ್ಕೆ. ಆಮೇಲೆ ಸರಿ ಹೋಗಿದ್ದಾರೆ. ನಮ್ಮ ಪಕ್ಷದ ಅಭ್ಯರ್ಥಿಗೆನೆ ಮತ ಕೊಟ್ಟಿದ್ದಾರೆ. ಒಳ್ಳೆ ಲೀಡ್ ನಲ್ಲಿಯೇ ದಾವಣಗೆರೆಯನ್ನ ಗೆಲ್ಲುತ್ತೇವೆ ಎಂಬ ಆತ್ಮವಿಶ್ವಾಸವನ್ನ ವ್ಯಕ್ತಪಡಿಸಿದ್ದಾರೆ. ಆದರೆ ಅಲ್ಪಸಂಖ್ಯಾತರ ಅಸಮಾಧಾನ ಹೊಗೆ ಜೋರಾಗಿ ಆಡಿದೆ. ಇದರಿಂದ ಕಾಂಗ್ರೆಸ್ ಅಭ್ಯರ್ಥಿ ಮೇಲೆ ಪರಿಣಾಮ ಬೀರಬಹುದು ಎಂಬ ಮಾತುಗಳು ಕೇಳಿ ಬರ್ತಿವೆ. ಫಲಿತಾಂಶ ಬರೋದಕ್ಕೆ ಇನ್ನು ಇಪ್ಪತ್ತು ದಿನಗಳು ಇರುವ ಕಾರಣ ತಾಳ್ಮೆಯಿಂದ ಕಾಯಲೇಬೇಕಾಗಿದೆ.













