Kannada news ಚಿತ್ರದುರ್ಗ ದಾವಣಗೆರೆ ಬೆಂಗಳೂರು ರಾಜಕೀಯ ಚುನಾವಣೆ ಮಳೆ ಕ್ರಿಕೆಟ್ ಭಾರತ ಚಿನ್ನ ಬೆಳ್ಳಿ ಹವಾಮಾನ ಕ್ರಿಕೆಟ್  ಕನ್ನಡ ನ್ಯೂಸ್

ದಾವಣಗೆರೆ ಉಪಚುನಾವಣೆ : ನಾಮಪತ್ರ ವಾಪಾಸ್ ಪಡೆದ ಮುಸ್ಲಿಮರು ಎಷ್ಟು..?

---Advertisement---

ದಾವಣಗೆರೆ : ಉಪಚುನಾವಣೆಯ ಕಣ ಸ್ವಲ್ಪ ಜೋರಾಗಿಯೇ ಇದೆ. ರಣ ರಣ ಬಿಸಿಲಿನಲ್ಲೂ ಪ್ರಚಾರದ ಭರಾಟೆ ಜೋರಾಗಿ ನಡೀತಾ ಇದೆ. ಈ ಬಾರಿ ಶಾಮನೂರು ಶಿವಶಂಕರಪ್ಪ ಅವರ ಮೊಮ್ಮಗ ಚುನಾವಣೆಯ ಅಖಾಡಕ್ಕೆ ಬಂದು ನಿಂತಿದ್ದಾರೆ. ಆದರೆ ಸಮರ್ಥ್ ಗೆ ತಮ್ಮ ಪಕ್ಷದವರೇ ಸ್ಪರ್ಧೆ‌ ಕೊಡ್ತಾರೆ ಅನ್ನೋದು ಮಾತ್ರ ತಿಳಿದಿರಲಿಲ್ಲ. ಮುಸ್ಲಿಂ ಬಾಂಧವರು ಬಂಡಾಯವೆದ್ದಿದ್ದು, ಈಗ ಗೆಲ್ಲಲೇಬೇಕಾದ ಅನಿವಾರ್ಯತೆಯ ಓಟ ಶುರುವಾಗಿದೆ. ಆದರೆ ಚುನಾವಣೆಯ ಸ್ಪರ್ಧೆಯ ಕಣದಲ್ಲಿ ಸಾಕಷ್ಟು ಮುಸ್ಲಿಮರು ಕೂಡ ಇದ್ರು. ಇದೀಗ ಒಂದಷ್ಟು ಜನ ನಾಮಪತ್ರ ವಾಪಾಸ್ ಪಡೆದುಕೊಂಡಿದ್ದಾರೆ.

ಈ ಸಂಬಂಧ ಚುನಾವಣಾ ಅಧಿಕಾರಿ ಸಂತೋಷ್ ಮಾಹಿತಿಯನ್ನು ನೀಡಿದ್ದು, ಸದ್ಯ ಚುನಾವಣಾ ಕಣದಲ್ಲಿ 25 ಜನ ಫೈನಲ್ ಅಭ್ಯರ್ಥಿಗಳಾಗಿದ್ದಾರೆ. 45 ನಾಮಪತ್ರಗಳು ಸಲ್ಲಿಕೆಯಾಗಿದ್ದವು. ಅದರಲ್ಲಿ 3 ರಿಜೆಕ್ಟ್ ಆಗಿವೆ, 11 ಅಭ್ಯರ್ಥಿಗಳು ನಾಮಪತ್ರವನ್ನು ವಾಪಾಸ್ ಪಡೆದಿದ್ದಾರೆ. ಒಬ್ಬ ಮಹಿಳಾ ಅಭ್ಯರ್ಥಿ ಸೇರಿದಂತೆ 25 ಅಭ್ಯರ್ಥಿಗಳು ಕಣದಲ್ಲಿದ್ದಾರೆ. ಇದರ ನಡುವೆ ಸಾಧಿಕ್ ನಾಮಪತ್ರ ವಾಪಾಸ್ ಪಡೆಯುವುದಕ್ಕೆ ಒಂದು ಫೋರ್ಜರಿ ಆರೋಪ ಕೂಡ ಕೇಳಿ ಬಂದಿತ್ತು. ಅದಕ್ಕುಹ ಕೂಡ ಚುನಾವಣಾ ಅಧಿಕಾರಿಗಳು ಇಲ್ಲಿ ಉತ್ತರವನ್ನು ನೀಡಿದ್ದಾರೆ.

ನ್ಯಾಷನಲ್ ಪಾರ್ಟಿಯಿಂದ 3 ಜನ, ಬಿಜೆಪಿಯಿಂದ 1, ಕಾಂಗ್ರೆಸ್ ನಿಂದ 1, ಆಮ್ ಆದ್ಮಿ ಪಾರ್ಟಿಯಿಂದ 1, ಸ್ವತಂತ್ರವಾಗಿ 12, ಇನ್ನುಳಿದಂತೆ 10 ಜನ ಸೇರಿದಂತೆ ಒಟ್ಟು 25 ಜನ ಇದ್ದಾರೆ. ಅರ್ಜಿಯಲ್ಲಿ ಫೇಕ್ ಆಗಿ ಸಹಿ‌ ಮಾಡಿದರೆ ಅದನ್ನ ಪರಿಶೀಲನೆ ಮಾಡ್ತೀವಿ. ಪ್ರಪೋಸಲ್ ಅಷ್ಟೆ ಕೊಟ್ಟಿದ್ದರು, ಬೇರೆ ಬಂದಿಲ್ಲ ಎಂಬ ಮಾಹಿತಿಯನ್ನ ನೀಡಿದ್ದಾರೆ.

suddionenews

ಕನ್ನಡ ಸುದ್ದಿಗಳ ವಿಶ್ವಾಸಾರ್ಹ ಮೂಲ — suddione.com ನಲ್ಲಿ ಓದಿ ರಾಷ್ಟ್ರೀಯ, ಅಂತರರಾಷ್ಟ್ರೀಯ, ರಾಜಕೀಯ, ಕ್ರೀಡೆ, ಮನರಂಜನೆ, ವಾಣಿಜ್ಯ, ಶಿಕ್ಷಣ ಮತ್ತು ತಂತ್ರಜ್ಞಾನಕ್ಕೆ ಸಂಬಂಧಿಸಿದ ಪ್ರತಿಯೊಂದು ಪ್ರಮುಖ ಅಪ್‌ಡೇಟ್. ನೀವು ಯಾವಾಗಲೂ ಅಪ್‌ಡೇಟ್ ಆಗಿರಲು ನಾವು ವೇಗವಾದ, ನಿಖರವಾದ ಮತ್ತು ನಿಷ್ಪಕ್ಷಪಾತವಾದ ಸುದ್ದಿಗಳನ್ನು ಸರಳ ಹಾಗೂ ಸ್ಪಷ್ಟ ಭಾಷೆಯಲ್ಲಿ ನೀಡುತ್ತೇವೆ. ಸಂಪಾದಕರು: ನಾಗೇಂದ್ರ ರೆಡ್ಡಿ ಪಿ.ಎಲ್

Join WhatsApp

Join Now

Join Telegram

Join Now
🏫 ಅಡ್ಮಿಷನ್ ಓಪನ್
🔒

ಇಂಡಿಯನ್ ಇಂಟರ್ ನ್ಯಾಷನಲ್ ಸ್ಕೂಲ್

ಸ್ವಾಗತ...