ದಾವಣಗೆರೆ ಮಾ. 20 : 107- ದಾವಣಗೆರೆ ದಕ್ಷಿಣ ವಿಧಾನಸಭಾ ಕ್ಷೇತ್ರದ ಉಪಚುನಾವಣೆ ಹಿನ್ನೆಲೆಯಲ್ಲಿ ಇಂದು 8 ಅಭ್ಯರ್ಥಿಗಳಿಂದ 9 ನಾಮಪತ್ರಗಳು, ಒಟ್ಟಾರೆ 10 ನಾಮಪತ್ರಗಳು ಸಲ್ಲಿಕೆಯಾಗಿವೆ ಎಂದು ಚುನಾವಣಾಧಿಕಾರಿ ಸಂತೋಷ್ ಕುಮಾರ್ ಅವರು ತಿಳಿಸಿದ್ದಾರೆ.
ಇಂದು ನಾಮಪತ್ರ ಸಲ್ಲಿಸಿದವರ ವಿವರ : ಇಂಡಿಯನ ಪೊಲಿಟಿಕಲ್ ಕಾಂಗ್ರೇಸ್ ಪಕ್ಷದಿಂದ ಈರಣ್ಣ, ಕಂಟ್ರಿ ಸಿಟಿಜನ್ ಪಕ್ಷದಿಂದ ಎ.ಟಿ.ದಾದಾಕಲಾಂದರ್, ನವಭಾರತ ಸೇನಾ ಪಕ್ಷದಿಂದ ಎಂ.ಜಿ.ಶ್ರೀಕಾಂತ, ಇಂಡಿಯನ್ ನ್ಯಾಷನಲ್ ಕಾಂಗ್ರೇಸ್ ಪಕ್ಷದಿಂದ ಸಾದಿಕ್ ಪೈಲ್ವಾನ್, ಸ್ವಾತಂತ್ರ ಅಭ್ಯರ್ಥಿಯಾಗಿ ಕೆ.ಹೆಚ್. ಮೆಹಬೂಬ್, ಇಂಡಿಯನ್ ನ್ಯಾಷನಲ್ ಕಾಂಗ್ರೇಸ್ ಮತ್ತು ಸ್ವಾತಂತ್ರ ಅಭ್ಯರ್ಥಿಯಾಗಿ ಸಮರ್ಥ್ ಶಾಮನೂರು ಮಲ್ಲಿಕಾರ್ಜುನ, ಭಾರತೀಯ ಜನತಾ ಪಾರ್ಟಿ ಪಕ್ಷದಿಂದ ಟಿ.ಶ್ರೀನಿವಾಸ ಹಾಗೂ ಆಮ್ ಆದ್ಮಿ ಪಾರ್ಟಿ ಪಕ್ಷದಿಂದ ಕೆ.ಎಸ್.ಶಿವಕುಮಾರಪ್ಪ .
















