ದಾವಣಗೆರೆ: ದಕ್ಷಿಣ ಕ್ಷೇತ್ರದ ಉಪಚುನಾವಣೆಯ ದಿನಾಂಕ ಘೋಷಣೆಯ ಬೆನ್ನಲ್ಲೇ ಟಿಕೆಟ್ ಆಕಾಂಕ್ಷಿಗಳು ಹೆಚ್ಚಾಗಿದ್ದಾರೆ. ಅಲ್ಪಸಂಖ್ಯಾತರದ್ದು ಒಂದು ಬಣವಾದ್ರೆ ಶಾಮನೂರು ಕುಟುಂಬಕ್ಕೆ ಟಿಕೆಟ್ ನೀಡಿ ಅಂತ ಹೇಳ್ತಾ ಇರೋದು ಇನ್ನೊಂದು ಬಣವಾಗಿದೆ. ಇದೆಲ್ಲದರ ನಡುವೆ ಇಂದು ಅಭಿಪ್ರಾಯ ಸಂಗ್ರಹ ಸಭೆ ನಡೆದಿದೆ. ಈ ಸಭೆಯಲ್ಲಿ ಕೈ ನಾಯಕರ ಮಧ್ಯೆ ಗಲಾಟೆಯಾಗಿದೆ.
ಕೆಪಿಸಿಸಿ ನಾಯಕರು ಈ ಸಭೆಯನ್ನ ಆಯೋಜನೆ ಮಾಡಿದ್ದರು. ಈ ವೇಳೆ ಉಸ್ತುವಾರಿ ಸಮಿತಿ ಸದಸ್ಯರು, ಪಕ್ಷದ ಮುಖಂಡರು ಅಭಿಪ್ರಾಯ ಸಂಗ್ರಹಣೆಗೆ ಆಗಮಿಸಿದ್ದರು. ಅಭಿಪ್ರಾಯ ಸಂಗ್ರಹದ ಸಂದರ್ಭದಲ್ಲಿ ಕಚೇರಿಯ ಮುಂಭಾಗ ಹೈಡ್ರಾಮವೇ ನಡೆದಿದೆ. ಒಂದು ಕಡೆ ಮುಸ್ಲಿಂ ಮುಖಂಡರು ಹಾಗೂ ಯುವಕರು ಅಹಿಂದಗೆ ಟಿಕೆಟ್ ನೀಡಿವಂತೆ ಒತ್ತಾಯ ಮಾಡಿದ್ದಾರೆ. ಮತ್ತೊಂದೆಡೆ ಎಸ್ ಎಸ್ ಮಲ್ಲಿಕಾರ್ಜುನ ಬೆಂಬಲಿಗರು ಮತ್ತೆ ಅವರ ಕುಟುಂಬ ಟಿಕೆಟ್ ನೀಡುವಂತೆ ಕೇಳಿದ್ದಾರೆ. ಅಂದ್ರೆ ಸಮರ್ಥ್ ಶಾಮನೂರು ಅವರುಗೆ ಟಿಕೆಟ್ ನೀಡುವಂತೆ ಒತ್ತಾಯ ಮಾಡಿದ್ದಾರೆ.

ಈ ಘೋಷಣೆಗಳಿಂದ ಸಭೆಯ ಉದ್ದೇಶವೇ ವೇಸ್ಟ್ ಆದಂತೆ ಆಗಿದೆ. ಇದರಿಂದ ಉಸ್ತುವಾರಿ ಸಮಿತಿಯ ಸದಸ್ಯರಾದ ಮಂಜುನಾಥ್ ಬಂಡಾರಿ, ಮಾಜಿ ಸಚಿವ ಹೆಚ್.ಆಂಜನೇಯ, ಹೆಚ್.ಎಂ.ರೇವಣ್ಣ ಬೇಸರಗೊಂಡಿದ್ದಾರೆ. ಸಭೆಯಿಂದ ಹೊರ ನಡೆದಿದ್ದಾರೆ. ಅಭಿಪ್ರಾಯ ಸಂಗ್ರಹ ಮಾಡದೇ ಕೇವಲ ಅಭ್ಯರ್ಥಿಗಳ ಪಟ್ಟಿ ಹಿಡಿದು ತೆರಳಿದರು. ಈ ವೇಳೆ ಕಾಂಗ್ರೆಸ್ ಕಾರ್ಯಕರ್ತರು ಪರಸ್ಪರ ವಾಗ್ವಾದಕ್ಕೆ ಇಳಿದಿದ್ದು ಪೊಲೀಸರು ಮಧ್ಯ ಪ್ರವೇಶಿಸಿ ಗಲಾಟೆಯನ್ನ ತಿಳಿಗೊಳಿಸಿದರು. ಅಲ್ಪಸಂಖ್ಯಾತರಿಗೆ ಈ ಬಾರಿಯ ಟಿಕೆಟ್ ಕೊಡದೆ ಇದ್ದಲ್ಲಿ ಮುಂದಿನ ಚುನಾವಣೆಗಳಲ್ಲಿ ನಷ್ಟ ಅನುಭವಿಸಬೇಕಾತ್ತದೆ ಎಂ ಬ ಎಚ್ಚರಿಕೆಯನ್ನು ಈಗಾಗಲೇ ನೀಡಿದ್ದಾರೆ. ಹೀಗಾಗಿ ಹೈಕಮಾಂಡ್ ನಾಯಕರು ಯಾರಿಗೆ ಟಿಕೆಟ್ ಕೊಡಲಿದ್ದಾರೆ ಎಂಬುದನ್ನ ನೋಡಬೇಕಿದೆ.











