Kannada news ಚಿತ್ರದುರ್ಗ ದಾವಣಗೆರೆ ಬೆಂಗಳೂರು ರಾಜಕೀಯ ಚುನಾವಣೆ ಮಳೆ ಕ್ರಿಕೆಟ್ ಭಾರತ ಚಿನ್ನ ಬೆಳ್ಳಿ ಹವಾಮಾನ ಕ್ರಿಕೆಟ್  ಕನ್ನಡ ನ್ಯೂಸ್

ದೇವೇಗೌಡ್ರಿಗೆ ಈ ವಯಸ್ಸಲ್ಲಿ ಅಟ್ಯಾಕ್ ಮಾಡೋದು ಇಷ್ಟ ಇಲ್ಲ : ಡಿಕೆ ಶಿವಕುಮಾರ್

---Advertisement---

ಬೆಂಗಳೂರು: ಮೇಕೆದಾಟು, ಎತ್ತಿನಹೊಳೆ ಬಗ್ಗೆ ಮಾತನ್ನಾಡಿದಾಗ, ಅಸೆಂಬ್ಲಿಯಲ್ಲಿ ಈ ವಿಚಾರವನ್ನ ತೆಗೆದ್ವಿ. ಪಾರ್ಲಿಮೆಂಟ್ ನಲ್ಲಿ ಮಾತನಾಡಲಿ. ನಮ್ಮ ಕಾಲದಲ್ಲಿ ಏನು ಮಾಡುದ್ವಿ ಅಂತ ನಾವು ಹೇಳ್ತೀವಿ. ಪಾಪ ಅವರಿಗೆ ಸುಮ್ಮನೆ ಡಿಸ್ಟರ್ಬ್ ಮಾಡೋದು ಸರಿ ಅಲ್ಲ. ಈ ವಯಸ್ಸಲ್ಲಿ ಅಟ್ಯಾಕ್ ಮಾಡಿದಂತೆ ಆಗುತ್ತೆ. ನಂಗೆ ಅಟ್ಯಾಕ್ ಮಾಡೋದು ಇಷ್ಟ ಇಲ್ಲ. ಪರಿಹಾರವನ್ನ ಅವರೇ ಹೇಳಲಿ. ಈ ವಯಸ್ಸಲ್ಲಿ ಮನಸ್ಸನ್ನ ನೋಯಿಸೋದು ಬೇಡ ಅಂತ ಹೇಳಿ ಏನು ಮಾತನ್ನಾಡ್ತಿಲ್ಲ ಎಂದಿದ್ದಾರೆ.

ಇಂದಿಗೆ ಕೆಪಿಸಿಸಿ ಅಧ್ಯಕ್ಷರಾಗಿ ಆರು ವರ್ಷ ತುಂಬಿದೆ. ಆ ಜರ್ನಿ ಬಗ್ಗೆ ಮಾತನ್ನಾಡುತ್ತಾ, ಇವತ್ತು ಬರೀ ಶಾಸಕರಿಗೆ ಮಾತ್ರ ಔತಣಕೂಟಕ್ಕೆ ಕರೆದಿದ್ದೀನಿ ಎಂದಿದ್ದಾರೆ. ಗ್ಯಾಸ್ ಬೆಲೆ ಏರಿಕೆಯ ಬಗ್ಗೆ ಮಾತನ್ನಾಡುತ್ತಾ, ಪಾರ್ಲಿಮೆಂಟ್ ನಲ್ಲಿ ಚರ್ಚೆ ಮಾಡಬೇಕು. ಇವತ್ತಿನ ತನಕ ಚರ್ಚೆ ಮಾಡುವುದಕ್ಕೆ ಅವಕಾಶವನ್ನೆ ಕೊಡ್ತಾ ಇಲ್ಲ. ಅದಕ್ಕಾಗಿ ನಮ್ಮೆಲ್ಲಾ ಸಂಸದರು, ಇಂಡಿಯಾ ಒಕ್ಕೂಟದ ಸಂಸದರು ಪ್ರತಿಭಟನೆ ಮಾಡಿದ್ದಾರೆ.

ಯಾಕೆ ಅವರಿಗೆ ಭಯ. ಸ್ಟಾಕ್ ಇಲ್ಲ. ಡೀಸೆಲ್ ಬೆಲೆ ನಿನ್ನೆನೆ ವುಮೆನ್ಸ್ ಡೇ ದಿನವೇ ಏರಿಕೆಯಾಗಿದೆ. ಸಂಸದರ್ಯಾಕೆ ಮಾತಾಡ್ತಾ ಇಲ್ಲ. ಗ್ಯಾಸ್ ಬೆಲೆ ಏರಿಕೆ ಆಗಿದೆ. ಎಂಪಿಗಳು ಅದಕ್ಕೆ ಮಾತನ್ನಾಡಬೇಕು ಅಲ್ವಾ. ಎಲ್ಲಾದಕ್ಕೂ ಧ್ವನಿ ಎತ್ತುತ್ತಾರೆ. ಬಹಳ ವಿಚಿತ್ರವಾಗಿ ಧ್ವನಿ ಎತ್ತುತ್ತಾರೆ, ಈಗ ಗ್ಯಾಸ್ ಬೆಲೆ ಏರಿಕೆಯ ಬಗ್ಗೆನು ಧ್ವನಿ ಎತ್ತಬೇಕು ಅಲ್ವಾ ಎಂದಿದ್ದಾರೆ. ಬೆಂಗಳೂರು, ಮೈಸೂರು ನಗರ ಭಾಗದಲ್ಲಿ ಈಗಾಗಲೇ ಹೊಟೇಲ್ ಗಳಲ್ಲಿ ಗ್ಯಾಸ್ ಸಿಲಿಂಡರ್ ಗಳ ಕೊರತೆ ಉಂಟಾಗಿದೆ. ಇದರಿಂದ ಹೊಟೇಲ್ ಗಳನ್ನು ಮುಚ್ಚಬೇಕಾದ ಪರಿಸ್ಥಿತಿ ಬಂದೊದಗಿದೆ.

suddionenews

ಕನ್ನಡ ಸುದ್ದಿಗಳ ವಿಶ್ವಾಸಾರ್ಹ ಮೂಲ — suddione.com ನಲ್ಲಿ ಓದಿ ರಾಷ್ಟ್ರೀಯ, ಅಂತರರಾಷ್ಟ್ರೀಯ, ರಾಜಕೀಯ, ಕ್ರೀಡೆ, ಮನರಂಜನೆ, ವಾಣಿಜ್ಯ, ಶಿಕ್ಷಣ ಮತ್ತು ತಂತ್ರಜ್ಞಾನಕ್ಕೆ ಸಂಬಂಧಿಸಿದ ಪ್ರತಿಯೊಂದು ಪ್ರಮುಖ ಅಪ್‌ಡೇಟ್. ನೀವು ಯಾವಾಗಲೂ ಅಪ್‌ಡೇಟ್ ಆಗಿರಲು ನಾವು ವೇಗವಾದ, ನಿಖರವಾದ ಮತ್ತು ನಿಷ್ಪಕ್ಷಪಾತವಾದ ಸುದ್ದಿಗಳನ್ನು ಸರಳ ಹಾಗೂ ಸ್ಪಷ್ಟ ಭಾಷೆಯಲ್ಲಿ ನೀಡುತ್ತೇವೆ. ಸಂಪಾದಕರು: ನಾಗೇಂದ್ರ ರೆಡ್ಡಿ ಪಿ.ಎಲ್

Join WhatsApp

Join Now

Join Telegram

Join Now
🏫 ಅಡ್ಮಿಷನ್ ಓಪನ್
🔒

ಇಂಡಿಯನ್ ಇಂಟರ್ ನ್ಯಾಷನಲ್ ಸ್ಕೂಲ್

ಸ್ವಾಗತ...