SC/ST ಹುಡುಗರ ಪರವಾಗಿ ನಿಂತ ವಿಜಯೇಂದ್ರ : ಸರ್ಕಾರಕ್ಕೆ ಹೇಳಿದ್ದೇನು..?

1 Min Read

ಬೆಂಗಳೂರು: ಸರ್ಕಾರಿ ಹುದ್ದೆಗಳ ನೇಮಕಾತಿಗೆ ಆಗ್ರಹಿಸಿ ಪ್ರತಿಭಟನೆ ನಡೆದ ಬಳಿಕ ಸರ್ಕಾರ ಕೂಡ ನೇಮಕಾತಿ ಮಾಡಲು ತೀರ್ಮಾನಿಸಿದೆ. ಆದರೆ ಒಳಮೀಸಲಾತಿ ಅನುಸರಿಸದೆ ಹಳೆಯ ಮೀಸಲಾತಿಯ ಆಧಾರದ ಮೇಲೆಯೇ ನೇಮಕಾತಿಗೆ ತೀರ್ಮಾನ ಮಾಡಿದೆ. ಇದನ್ನ ಬಿಜೆಪಿ ನಾಯಕರು ಖಂಡಿಸಿದ್ದು, ಬಿಜೆಪಿ ರಾಜ್ಯಾಧ್ಯಕ್ಷ ಬಿವೈ ವಿಜಯೇಂದ್ರ ಅವರು SC/ST ಹುಡುಗರ ಪರವಾಗಿ ಮಾತನ್ನಾಡಿದ್ದಾರೆ.

ಸುದ್ದಿಗೋಷ್ಟಿ ನಡೆಸಿ ಮಾತನ್ನಾಡಿದ್ದು, ಬೀದಿಗಿಳಿದು ಹೋರಾಟ ಮಾಡ್ತಾ ಇದ್ದಾರೆ. ಇಡೀ ರಾಜ್ಯದಲ್ಲಿ ವೈದ್ಯರು ಕೂಡ ಹೋರಾಟ ಮಾಡುವ ಪರಿಸ್ಥಿತಿ ಬಂದಿದೆ. ಆಂಬುಲೆನ್ಸ್ ನೌಕರರಿಗೆ ಸಂಬಳ ಕೊಡುವುದಕ್ಕೂ ಸಾಧ್ಯವಾಗ್ತಾ ಇಲ್ಲ. ಸರಣಿ ಹೋರಾಟಗಳು ನಡೆಯುತ್ತಿವೆ. ಇದರಿಂದಾನೇ ಗೊತ್ತಾಗುತ್ತೆ ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರ ಸಂಪೂರ್ಣ ವಿಫಲವಾಗಿದೆ. ರಾಜ್ಯದಲ್ಲಿ ಹರಾಜಕತೆ ಸೃಷ್ಟಿಯಾಗಿದೆ ಎಂಬುದಕ್ಕೆ ಇದಕ್ಕಿಂತ ಉದಾಹರಣೆ ಕೊಡುವ ಅಗತ್ಯತೆ ಇಲ್ಲ ಎಂದಿದ್ದಾರೆ.

ಕೇಂದ್ರ ಸರ್ಕಾರವನ್ನು ದೂರುವುದನ್ನು ಬದುಗಿಟ್ಟು ನ್ಯಾಯ ಕೊಡಿ. ಒಳಮೀಸಲಾತಿಯನ್ನು ಕೂಡ ಪರಿಗಣಿಸಿ, ಯುವಜನತೆಗೆ ಉದ್ಯೋಗ ಸೃಷ್ಟಿಸುವ ಕೆಲಸವನ್ನು ಮಾಡಬೇಕು. ನ್ಯಾಯಾಲಯದ ಕುಂಟು ನೆಪವನ್ನ ಹೇಳಬಾರದುಮ ತೊಟ್ಟಿಲನ್ನು ತೂಗಿ ಮಗುವನ್ನು ಚಿವುಟುವಂತಹ ಕೆಲಸವನ್ನು ಕೈ ಬಿಡಬೇಕೆಂದು ಮುಖ್ಯಮಂತ್ರಿಗಳನ್ನ ಆಗ್ರಹ ಪಡಿಸ್ತಾ ಇದ್ದೇನೆ. ಇಲ್ಲದೆ ಇದ್ದರೆ ಭಾರತೀಯ ಜನತಾ ಪಾರ್ಟಿ ಒಂದು ಉಗ್ರ ಹೋರಾಟಕ್ಕೆ ಇಳಿಯಬೇಕಾಗುತ್ತದೆ ಎಂದು ಎಚ್ಚರಿಕೆ ನೀಡಿದ್ದಾರೆ.

ಎಲ್ಲವೂ ಕೂಡ ನಮ್ಮ ಗಮನಕ್ಕೆ ಬಂದಿದೆ. ನಾವೆಲ್ಲಾ ಕೂತು ಚರ್ಚೆಯನ್ನು ಮಾಡಿದ್ದೇವೆ. ಸದನದಲ್ಲಿ ಈ ಬಗ್ಗೆ ಚರ್ಚೆಯನ್ನ ಮಾಡ್ತೇವೆ. ಆದರೆ ಒಳಮೀಸಲಾತಿಯನ್ನು ಪರಿಗಣಿಸಿಯೇ ಉದ್ಯೋಗಗಳನ್ನು ನೋಡಬೇಕು ಎಂದು ಬಿವೈ ವಿಜಯೇಂದ್ರ ಅವರು ಒತ್ತಾಯಿಸಿದ್ದಾರೆ.

Share This Article
Enable Notifications OK No thanks