Kannada news ಚಿತ್ರದುರ್ಗ ದಾವಣಗೆರೆ ಬೆಂಗಳೂರು ರಾಜಕೀಯ ಚುನಾವಣೆ ಮಳೆ ಕ್ರಿಕೆಟ್ ಭಾರತ ಚಿನ್ನ ಬೆಳ್ಳಿ ಹವಾಮಾನ ಕ್ರಿಕೆಟ್  ಕನ್ನಡ ನ್ಯೂಸ್

ನಾಯಕತ್ವದ ಬದಲಾವಣೆ ವಿಚಾರ : ಖರ್ಗೆ ಅವರ ಸೂಚನೆ ಇದೆ ಎಂದ ಸಚಿವ ಹೆಚ್ ಕೆ ಪಾಟೀಲ್

---Advertisement---

ದೆಹಲಿ: ಕಾಂಗ್ರೆಸ್ ಸರ್ಕಾರದಲ್ಲಿ ಇಂದಿಗೂ ನಾಯಕತ್ವ ಬದಲಾವಣೆಯ ವಿಚಾರ ಬೂದಿ ಮುಚ್ಚಿದ ಕೆಂಡದಂತೆ ಇದೆ. ಈ ಬಗ್ಗೆ ಡಿಕೆ ಶಿವಕುಮಾರ್ ಬೆಂಬಲಿಗರು ಆಗಾಗ ಬಹಿರಂಗವಾಗಿ ಮಾತನ್ನಾಡುವುದು ಉಂಟು. ಸದ್ಯ ಮಾರ್ಚ್ 10ಕ್ಕೆ ಡಿಕೆಶಿ ಎಲ್ಲರಿಗೂ ಔತಣಕೂಟದ ವ್ಯವಸ್ಥೆ ಮಾಡಿದ್ದಾರೆ. ಈ ಬೆನ್ನಲ್ಲೇ ಸಚಿವ ಹೆಚ್ ಕೆ ಪಾಟೀಲ್ ದೆಹಲಿಯ ಪ್ರಯಾಣವನ್ನ ಕೈಗೊಂಡಿದ್ದಾರೆ. ಅಲ್ಲಿ ಹೈಕಮಾಂಡ್ ನಾಯಕರಿಗೆ ಈ ವಿಚಾರ ತಿಳಿಸಿದ್ರಾ ಏನು ಎಂಬೆಲ್ಲದರ ಬಗ್ಗೆ ಮಾತನ್ನಾಡಿದ್ದಾರೆ.

ನಿನ್ನೆ ನಮ್ಮ ನ್ಯಾಷನಲ್ ಫೆಡರೇಷನ್ ಬ್ಯಾಂಕ್ ನ ಮೀಟಿಂಗ್ ಇತ್ತು ಅದಕ್ಕೆ ದೆಹಲಿಗೆ ಬಂದಿದ್ದೆ. ಜೊತೆಗೇನೆ ನಮ್ಮ ನಾಯಕರನ್ನು ಭೇಟಿಯಾಗಬೇಕು ಅಂತ ಇದ್ದೀನಿ. ನಮ್ಮ ಖರ್ಗೆ ಸಾಹೇಬ್ರು ನಿನ್ನೆನೆ ಬೆಂಗಳೂರಿಗೆ ಹೋಗಿರುವ ಕಾರಣ ಅದು ಸಾಧ್ಯವಾಗಿಲ್ಲ‌. ಬೇರೆ ನಾಯಕರ ಭೇಟಿಗೆ ಸಮಯ ಕೇಳಿದ್ದೇನೆ. ಹೈಕಮಾಂಡ್ ನಾಯಕರನ್ನು ಭೇಟಿಯಾದಾಗ ನಮ್ಮ ಕರ್ನಾಟಕದ ರಾಜಕೀಯ ವಿದ್ಯಾಮಾನಗಳ ಬಗ್ಗೆ ಮಾತನ್ನಾಡ್ತೇನೆ.‌ ಗೊಂದಲಗಳೇನು ಇಲ್ಲ. ಕೆಲವೊಂದು ಅಂಶಗಳು ಪತ್ರಿಕೆ ಮೂಲಕ ದೊಡ್ಡ ದೊಡ್ಡದಾಗಿ ಬರ್ತಾ ಇದೆ. ಅದಕ್ಕೆಲ್ಲಾ ನಮ್ಮ ಹೈಕಮಾಂಡ್ ನಾಯಕರು ಬಗೆ ಹರಿಸ್ತಾರೆ.

ಹೈಕಮಾಂಡ್ ನವರು ಸುಮ್ಮನೆ ಇದ್ದಾರೆ ಎಂಬ ಊಹೆ ಮಾಡಿಕೊಳ್ಳುವಂತಿಲ್ಲ. ಆದಷ್ಟು ಬೇಗ ಬಗೆಹರಿಯುತ್ತೆ. ನಾಯಕತ್ವದ ಬದಲಾವಣೆ ಬಗ್ಗೆ ಮಾತನಾಡಬಾರದು, ವಿಶ್ಲೇಷಣೆ ಮಾಡುವುದಾಗಲಿ ಮಾಡಬೇಡಿ ಅಂತ ಹೇಳಿ ಮಲ್ಲಿಕಾರ್ಜುನ ಖರ್ಗೆ ಅವರು ಸೂಚನೆ ನೀಡಿದ್ದಾರೆ. ಹೀಗಾಗಿ ನಾನು ವ್ಯಾಖ್ಯಾನ ನೀಡಲ್ಲ. ನಾನು ಗದಗದಿಂದ ದೆಹಲಿಗೆ ಬಂದಿದ್ದೇನೆ. ಅವರ ಔತಣಕೂಟದ ಬಗ್ಗೆ ಗೊತ್ತಿಲ್ಲ. ಆಮೇಲೆ ಊಟಕ್ಕೆ ಕರೆಧಿರಬಹುದು. ಸಿದ್ದರಾಮಯ್ಯ ಅವರು ಕೂಡ ಕರೆಯುತ್ತಿರಬಹುದು ಎಂಬ ಮಾಹಿತಿಯನ್ನ ನೀಡಿದ್ದಾರೆ.

suddionenews

ಕನ್ನಡ ಸುದ್ದಿಗಳ ವಿಶ್ವಾಸಾರ್ಹ ಮೂಲ — suddione.com ನಲ್ಲಿ ಓದಿ ರಾಷ್ಟ್ರೀಯ, ಅಂತರರಾಷ್ಟ್ರೀಯ, ರಾಜಕೀಯ, ಕ್ರೀಡೆ, ಮನರಂಜನೆ, ವಾಣಿಜ್ಯ, ಶಿಕ್ಷಣ ಮತ್ತು ತಂತ್ರಜ್ಞಾನಕ್ಕೆ ಸಂಬಂಧಿಸಿದ ಪ್ರತಿಯೊಂದು ಪ್ರಮುಖ ಅಪ್‌ಡೇಟ್. ನೀವು ಯಾವಾಗಲೂ ಅಪ್‌ಡೇಟ್ ಆಗಿರಲು ನಾವು ವೇಗವಾದ, ನಿಖರವಾದ ಮತ್ತು ನಿಷ್ಪಕ್ಷಪಾತವಾದ ಸುದ್ದಿಗಳನ್ನು ಸರಳ ಹಾಗೂ ಸ್ಪಷ್ಟ ಭಾಷೆಯಲ್ಲಿ ನೀಡುತ್ತೇವೆ. ಸಂಪಾದಕರು: ನಾಗೇಂದ್ರ ರೆಡ್ಡಿ ಪಿ.ಎಲ್

Join WhatsApp

Join Now

Join Telegram

Join Now
🏫 ಅಡ್ಮಿಷನ್ ಓಪನ್
🔒

ಇಂಡಿಯನ್ ಇಂಟರ್ ನ್ಯಾಷನಲ್ ಸ್ಕೂಲ್

ಸ್ವಾಗತ...