Kannada news ಚಿತ್ರದುರ್ಗ ದಾವಣಗೆರೆ ಬೆಂಗಳೂರು ರಾಜಕೀಯ ಚುನಾವಣೆ ಮಳೆ ಕ್ರಿಕೆಟ್ ಭಾರತ ಚಿನ್ನ ಬೆಳ್ಳಿ ಹವಾಮಾನ ಕ್ರಿಕೆಟ್  ಕನ್ನಡ ನ್ಯೂಸ್

ತಂದೆ ತನ್ನೆಲ್ಲಾ ಆಸ್ತಿಯನ್ನು ಒಬ್ಬನೇ ಮಗನ ಹೆಸರಿಗೆ ಮಾಡಿ ಉಳಿದ ಮಕ್ಕಳಿಗೆ ಕೊಡದೆ ಇರಬಹುದೇ? ಕಾನೂನು ಹೇಳಿಕೆ ಇಲ್ಲಿದೆ‌

---Advertisement---

ತಂದೆ ತನ್ನ ಸಂಪೂರ್ಣ ಆಸ್ತಿಯನ್ನು ಒಬ್ಬನೇ ಮಗನಿಗೆ ನೀಡಿ ಉಳಿದ ಮಕ್ಕಳಿಗೆ ಕೊಡದೆ ಇರಬಹುದೇ?ಈ ಬಗ್ಗೆ ಕಾನೂನು ಏನು ಹೇಳುತ್ತದೆ ಎಂಬ ಸಂಪೂರ್ಣ ಮಾಹಿತಿ ಇಲ್ಲಿದೆ.ಆಸ್ತಿಯ ಹಕ್ಕು ಅದು ಯಾವ ರೀತಿಯ ಆಸ್ತಿ ಎಂಬುದರ ಮೇಲೆ ನಿರ್ಧಾರವಾಗುತ್ತದೆ. ಭಾರತೀಯ ಕಾನೂನಿನ ಪ್ರಕಾರ ಆಸ್ತಿಗಳನ್ನು ಪ್ರಮುಖವಾಗಿ ಎರಡು ವರ್ಗಗಳಾಗಿ ವಿಂಗಡಿಸಲಾಗಿದೆ. ಸ್ವಯಾರ್ಜಿತ ಆಸ್ತಿ, ಪಿತ್ರಾರ್ಜಿತ ಆಸ್ತಿ.ಎರಡಕ್ಕೂ ನಿಯಮಗಳು ವಿಭಿನ್ನವಾಗಿವೆ.

ತಂದೆಗೆ ತನ್ನ ತಂದೆ, ತಾತ ಅಥವಾ ಮುತ್ತಾತನಿಂದ ಪರಂಪರೆಯಾಗಿ ಬಂದ ಆಸ್ತಿ ಮತ್ತು ನಾಲ್ಕು ತಲೆಮಾರುಗಳಿಂದ ಹಂಚಿಕೆಯಾಗದ ಆಸ್ತಿಯನ್ನು ಪಿತ್ರಾರ್ಜಿತ ಆಸ್ತಿ ಎನ್ನಲಾಗುತ್ತದೆ.ಈ ಆಸ್ತಿಯಲ್ಲಿ ಮಕ್ಕಳಿಗೆ (ಮಗ ಮತ್ತು ಮಗಳು) ಹುಟ್ಟಿನಿಂದಲೇ ಸಮಾನ ಹಕ್ಕಿರುತ್ತದೆ.ತಂದೆ ತನ್ನಿಷ್ಟದಂತೆ ಈ ಆಸ್ತಿಯನ್ನು ಒಬ್ಬನೇ ಮಗನ ಹೆಸರಿಗೆ ಬರೆಯಲು ಸಾಧ್ಯವಿಲ್ಲ.ಒಂದು ವೇಳೆ ತಂದೆ ಈ ಆಸ್ತಿಯನ್ನು ಮಾರಾಟ ಮಾಡಬೇಕೆಂದರೆ ಅಥವಾ ಒಬ್ಬನ ಹೆಸರಿಗೆ ಮಾಡಬೇಕೆಂದರೆ ಉಳಿದ ಎಲ್ಲಾ ವಾರಸುದಾರರ (ಮಕ್ಕಳ) ಲಿಖಿತ ಒಪ್ಪಿಗೆ ಕಡ್ಡಾಯ.

ಹಿಂದೂ ಉತ್ತರಾಧಿಕಾರ ಕಾಯ್ದೆ (ತಿದ್ದುಪಡಿ) 2005 ಮತ್ತು ಸುಪ್ರೀಂ ಕೋರ್ಟ್‌ನ ಮಹತ್ವದ ತೀರ್ಪಿನ ಪ್ರಕಾರ, ಹೆಣ್ಣುಮಕ್ಕಳು ಸಹ ಗಂಡುಮಕ್ಕಳಂತೆ ಆಸ್ತಿಯಲ್ಲಿ ಸಮಾನ ಪಾಲುದಾರರು. ಪಿತ್ರಾರ್ಜಿತ ಆಸ್ತಿಯಲ್ಲಿ ಮಗಳಿಗೆ ಮಗನಷ್ಟೇ ಸಮಾನ ಪಾಲಿದೆ. ಮಗಳಿಗೆ ಮದುವೆಯಾಗಿದ್ದರೂ ಸಹ ಆಕೆಯ ಹಕ್ಕನ್ನು ಕಸಿದುಕೊಳ್ಳಲು ಸಾಧ್ಯವಿಲ್ಲ.

ತಂದೆ ತನ್ನ ಸ್ವಂತ ದುಡಿಮೆ, ಆದಾಯ ಅಥವಾ ಪರಿಶ್ರಮದಿಂದ ಆಸ್ತಿ ಖರೀದಿಸಿದ್ದರೆ ಅದನ್ನು ‘ಸ್ವಯಾರ್ಜಿತ ಆಸ್ತಿ’ ಎನ್ನಲಾಗುತ್ತದೆ. ಈ ಆಸ್ತಿಗೆ ತಂದೆಯೇ ಸಂಪೂರ್ಣ ಮಾಲೀಕ.ತಂದೆ ತನ್ನ ಇಚ್ಛೆಯಂತೆ ಈ ಆಸ್ತಿಯನ್ನು ಒಬ್ಬ ಮಗನಿಗೆ, ಮಗಳಿಗೆ ಅಥವಾ ಯಾವುದೇ ಮೂರನೇ ವ್ಯಕ್ತಿಗೆ ನೀಡಬಹುದು.ತಂದೆ ಜೀವಂತವಿರುವಾಗ ಮಕ್ಕಳು ಈ ಆಸ್ತಿಯ ಮೇಲೆ ಹಕ್ಕು ಸಾಧಿಸಲು ಸಾಧ್ಯವಿಲ್ಲ.ಇದಕ್ಕಾಗಿ ತಂದೆ ಅಧಿಕೃತವಾಗಿ ‘ವಿಲ್’ (ವಸಿಯತ್ತು) ಅಥವಾ ‘ಗಿಫ್ಟ್ ಡೀಡ್’ (ದಾನ ಪತ್ರ) ಮಾಡಿರಬೇಕು.

ತಂದೆ ಕೇವಲ ತನ್ನ ಸ್ವಯಾರ್ಜಿತ ಆಸ್ತಿಯನ್ನು ಮಾತ್ರ ಒಬ್ಬನೇ ಮಗನ ಹೆಸರಿಗೆ ಬರೆಯಬಹುದು. ಒಂದು ವೇಳೆ ತಂದೆ ಯಾವುದೇ ‘ವಿಲ್’ ಮಾಡದೆ ಮರಣ ಹೊಂದಿದರೆ, ಆಗ ಅವರ ಸ್ವಯಾರ್ಜಿತ ಆಸ್ತಿಯೂ ಸಹ ಅವರ ಪತ್ನಿ ಮತ್ತು ಎಲ್ಲಾ ಮಕ್ಕಳಿಗೆ (ಗಂಡು ಮತ್ತು ಹೆಣ್ಣು) ಸಮಾನವಾಗಿ ಹಂಚಿಕೆಯಾಗುತ್ತದೆ.

suddionenews

ಕನ್ನಡ ಸುದ್ದಿಗಳ ವಿಶ್ವಾಸಾರ್ಹ ಮೂಲ — suddione.com ನಲ್ಲಿ ಓದಿ ರಾಷ್ಟ್ರೀಯ, ಅಂತರರಾಷ್ಟ್ರೀಯ, ರಾಜಕೀಯ, ಕ್ರೀಡೆ, ಮನರಂಜನೆ, ವಾಣಿಜ್ಯ, ಶಿಕ್ಷಣ ಮತ್ತು ತಂತ್ರಜ್ಞಾನಕ್ಕೆ ಸಂಬಂಧಿಸಿದ ಪ್ರತಿಯೊಂದು ಪ್ರಮುಖ ಅಪ್‌ಡೇಟ್. ನೀವು ಯಾವಾಗಲೂ ಅಪ್‌ಡೇಟ್ ಆಗಿರಲು ನಾವು ವೇಗವಾದ, ನಿಖರವಾದ ಮತ್ತು ನಿಷ್ಪಕ್ಷಪಾತವಾದ ಸುದ್ದಿಗಳನ್ನು ಸರಳ ಹಾಗೂ ಸ್ಪಷ್ಟ ಭಾಷೆಯಲ್ಲಿ ನೀಡುತ್ತೇವೆ. ಸಂಪಾದಕರು: ನಾಗೇಂದ್ರ ರೆಡ್ಡಿ ಪಿ.ಎಲ್

Join WhatsApp

Join Now

Join Telegram

Join Now