ಸುದ್ದಿಒನ್, ಚಿತ್ರದುರ್ಗ. ಫೆ. 06 : ಖ್ಯಾತ ಜ್ಯೋತಿಷಿ ಮಹರ್ಷಿ ಆನಂದ ಗುರೂಜಿ ಅವರು ನಾಳೆ (ಫೆಬ್ರವರಿ. 07) ಚಿತ್ರದುರ್ಗ ನಗರಕ್ಕೆ ಆಗಮಿಸಲಿದ್ದಾರೆ.
ನಗರದ ಬುರುಜನಹಟ್ಟಿಯ ಸಾವಂತನರಹಟ್ಟಿಯಲ್ಲಿನ ಶ್ರೀ ಪಾಲ್ಗುಣೇಶ್ವರಸ್ವಾಮಿ ಪ್ರಸನ್ನ ಶ್ರೀ ಪಾಲ್ಗುಣೇಶ್ವರ ಮತ್ತು ಶ್ರೀ ಆಂಜನೇಯಸ್ವಾಮಿ ಸೇವಾ ಸಮಿತಿವತಿಯಿಂದ ಮಹಾಶಿವರಾತ್ರಿ ಹಬ್ಬದ ಪ್ರಯುಕ್ತ ಶ್ರೀ ಪಾಲ್ಗುಣೇಶ್ವರ ದೇವಸ್ಥಾನದಲ್ಲಿ ಫೆ. 06 ರಿಂದ 15ರವರೆಗೆ ಪ್ರತಿ ದಿನ ವಿವಿಧ ರೀತಿಯ ಕಾರ್ಯಕ್ರಮಗಳು ನಡೆಯಲಿವೆ.

ನಾಳೆ (ಫೆ. 07 ನೇ ಶನಿವಾರದಂದು) ಬೆಳಗ್ಗೆ 10 ಗಂಟೆಗೆ ಶ್ರೀ ಪಾಲ್ಗುಣೇಶ್ವರ ಸ್ವಾಮಿಯ ದೇವಸ್ಥಾನದಲ್ಲಿ ವಿಶೇಷ ಪೂಜೆ ನಡೆಯಲಿದೆ. ನಂತರ ಸಂಜೆ 5 ಗಂಟೆಗೆ ಹಳೇ ಮಾಧ್ಯಮಿಕ ಶಾಲಾ ಆವರಣದಲ್ಲಿ ನಡೆಯುವ ಧಾರ್ಮಿಕ ಕಾರ್ಯಕ್ರಮದಲ್ಲಿ ಅವರು ಭಾಗವಹಿಸಲಿದ್ದಾರೆ.












