ಹಾವೇರಿ: ಈ ಬಾರಿಯ ಬಿಗ್ ಬಾಸ್ ನಲ್ಲಿ ಮಂಡ್ಯ ಹೈದ ಗಿಲ್ಲಿ ನಟ ಗೆಲುವು ಸಾಧಿಸಿದ್ದಾರೆ. ಕಪ್ ಗೆದ್ದು ಕೋಟ್ಯಾಂತರ ಜನರ ಮನಸ್ಸನ್ನ ಗೆದ್ದಿದ್ದಾರೆ. ಕಳೆದ ಸೀಸನ್ ನಲ್ಲಿ ಹನುಮಂತ ಗೆದ್ದಿದ್ದರು. ಈ ಬಾರಿಯ ಗೆಲುವಿನ ಬಗ್ಗೆ ಹನುಮಂತ ಪ್ರತಿಕ್ರಿಯೆ ನೀಡಿದ್ದಾರೆ. ಗಿಲ್ಲಿ ಗೆಲುವಿನ ಬಗ್ಗೆ ಸಂತಸವನ್ನ ವ್ಯಕ್ತಪಡಿಸಿದ್ದಾರೆ. ರಾಜಕಾರಣಿಗಳು ಕಾಲಿಗೆ ಬಿದ್ದರೂ ಜನರು ಮತ ಹಾಕಲ್ಲ, ಆದರೆ ಕೋಟ್ಯಾಂತರ ಜನ ವೋಟ್ ಮಾಡಿ, ಗಿಲ್ಲಿಯನ್ನ ಗೆಲ್ಲಿಸಿದ್ದಾರೆ ಒಳ್ಳೆಯದಾಗಲಿ ಎಂದಿದ್ದಾರೆ.
ಗಿಲ್ಲಿ ನಟ ಗೆದ್ದದ್ದು ತುಂಬಾ ಖುಷಿಯಾಗಿದೆ. ಅವರೇ ಗೆಲ್ಲುತ್ತಾರೆ ಅಂತ ನಾನು ಹೇಳಿದ್ದೆ. ಬಿಗ್ ಬಾಸ್ ನಲ್ಲಿ ಯಾವುದೇ ತಾರತಮ್ಯ ಮಾಡಲ್ಲ. ಹೆಚ್ಚು ವೋಟ್ ಬಂದವರನ್ನೇ ಗೆಲ್ಲಿಸುವುದು. ರಾಜಕಾರಣಿಗಳು ಕಾಲು ಬಿದ್ದರು ವೋಟ್ ಹಾಕುವುದಿಲ್ಲ. ಕರುನಾಡಿನ ಕೋಟ್ಯಾಂತರ ಜನರು ವೋಟ್ ಹಾಕಿ, ಗೆಲ್ಲಿಸಿದ್ದಾರೆ. ಒಳ್ಳೆಯದೇ ಆಗಲಿ. ಬಿಗ್ ಬಾಸ್ ನಲ್ಲಿ ಸುದೀಪ್ ಸರ್ ಇದ್ದರೇನೆ ಚೆಂದ. ಸುದೀಪ್ ಸರ್ ಇದ್ದರೆ ಶೋ ನೋಡಲು ಚಂದ. ಗಿಲ್ಲಿ ನಟ ಐದಾರು ಶೋನಲ್ಲಿ ಭಾಗವಹಿಸಿದ್ದರು, ನಾನು ಸಹ ವಿನ್ನರ್ ಆಗಿರಲಿಲ್ಲ. ಈಗ ಗಿಲ್ಲಿ ಅಣ್ಣ ವಿನ್ನರ್ ಆಗಿದ್ದಾರೆ. ನಾನು ವಿನ್ನರ್ ಆಗಿದ್ದೆ ಎಂಬ ಮಾತನ್ನ ಹೇಳಿದ್ದಾರೆ.
ಈ ಬಾರಿಯ ಬಿಗ್ ಬಾಸ್ ಶೋನಲ್ಲಿ ಗಿಲ್ಲಿಗೆ ಹೆಚ್ಚು ವೋಟ್ ಗಳು ಬಂದಿದ್ದವು. ಹತ್ತಿರತ್ತಿರ 37 ಕೋಟಿ ವೋಟ್ ಅದಾಗಿದ್ದವು. ಎರಡನೇ ಸ್ಥಾನದಲ್ಲಿ ರಕ್ಷಿತಾ ಇದ್ದು, ಮೂರನೇ ಸ್ಥಾನಕ್ಕೆ ಅಶ್ವಿನಿ ಅವರು ತೃಪ್ತಿ ಪಟ್ಟುಕೊಂಡಿದ್ದಾರೆ.
















