Kannada news ಚಿತ್ರದುರ್ಗ ದಾವಣಗೆರೆ ಬೆಂಗಳೂರು ರಾಜಕೀಯ ಚುನಾವಣೆ ಮಳೆ ಕ್ರಿಕೆಟ್ ಭಾರತ ಚಿನ್ನ ಬೆಳ್ಳಿ ಹವಾಮಾನ ಕ್ರಿಕೆಟ್  ಕನ್ನಡ ನ್ಯೂಸ್

ರಾಜಕಾರಣಿಗಳು ಕಾಲಿಗೆ ಬಿದ್ದರು ಮತ ಹಾಕಲ್ಲ : ಗಿಲ್ಲಿ ಗೆಲುವಿನ ಬಗ್ಗೆ ಹನುಮಂತ ಹೇಳಿದ್ದೇನು..?

---Advertisement---

ಹಾವೇರಿ: ಈ ಬಾರಿಯ ಬಿಗ್ ಬಾಸ್ ನಲ್ಲಿ ಮಂಡ್ಯ ಹೈದ ಗಿಲ್ಲಿ ನಟ ಗೆಲುವು ಸಾಧಿಸಿದ್ದಾರೆ. ಕಪ್ ಗೆದ್ದು ಕೋಟ್ಯಾಂತರ ಜನರ ಮನಸ್ಸನ್ನ ಗೆದ್ದಿದ್ದಾರೆ. ಕಳೆದ ಸೀಸನ್ ನಲ್ಲಿ ಹನುಮಂತ ಗೆದ್ದಿದ್ದರು. ಈ ಬಾರಿಯ ಗೆಲುವಿನ ಬಗ್ಗೆ ಹನುಮಂತ ಪ್ರತಿಕ್ರಿಯೆ ನೀಡಿದ್ದಾರೆ. ಗಿಲ್ಲಿ ಗೆಲುವಿನ ಬಗ್ಗೆ ಸಂತಸವನ್ನ ವ್ಯಕ್ತಪಡಿಸಿದ್ದಾರೆ. ರಾಜಕಾರಣಿಗಳು ಕಾಲಿಗೆ ಬಿದ್ದರೂ ಜನರು ಮತ ಹಾಕಲ್ಲ, ಆದರೆ ಕೋಟ್ಯಾಂತರ ಜನ ವೋಟ್ ಮಾಡಿ, ಗಿಲ್ಲಿಯನ್ನ ಗೆಲ್ಲಿಸಿದ್ದಾರೆ ಒಳ್ಳೆಯದಾಗಲಿ ಎಂದಿದ್ದಾರೆ.

 

ಗಿಲ್ಲಿ ನಟ ಗೆದ್ದದ್ದು ತುಂಬಾ ಖುಷಿಯಾಗಿದೆ. ಅವರೇ ಗೆಲ್ಲುತ್ತಾರೆ ಅಂತ ನಾನು ಹೇಳಿದ್ದೆ. ಬಿಗ್ ಬಾಸ್ ನಲ್ಲಿ ಯಾವುದೇ ತಾರತಮ್ಯ ಮಾಡಲ್ಲ. ಹೆಚ್ಚು ವೋಟ್ ಬಂದವರನ್ನೇ ಗೆಲ್ಲಿಸುವುದು. ರಾಜಕಾರಣಿಗಳು ಕಾಲು ಬಿದ್ದರು ವೋಟ್ ಹಾಕುವುದಿಲ್ಲ. ಕರುನಾಡಿನ ಕೋಟ್ಯಾಂತರ ಜನರು ವೋಟ್ ಹಾಕಿ, ಗೆಲ್ಲಿಸಿದ್ದಾರೆ. ಒಳ್ಳೆಯದೇ ಆಗಲಿ. ಬಿಗ್ ಬಾಸ್ ನಲ್ಲಿ ಸುದೀಪ್ ಸರ್ ಇದ್ದರೇನೆ ಚೆಂದ. ಸುದೀಪ್ ಸರ್ ಇದ್ದರೆ ಶೋ ನೋಡಲು ಚಂದ. ಗಿಲ್ಲಿ ನಟ ಐದಾರು ಶೋನಲ್ಲಿ ಭಾಗವಹಿಸಿದ್ದರು, ನಾನು ಸಹ ವಿನ್ನರ್ ಆಗಿರಲಿಲ್ಲ. ಈಗ ಗಿಲ್ಲಿ ಅಣ್ಣ ವಿನ್ನರ್ ಆಗಿದ್ದಾರೆ. ನಾನು ವಿನ್ನರ್ ಆಗಿದ್ದೆ ಎಂಬ ಮಾತನ್ನ ಹೇಳಿದ್ದಾರೆ.

ಈ ಬಾರಿಯ ಬಿಗ್ ಬಾಸ್ ಶೋನಲ್ಲಿ ಗಿಲ್ಲಿಗೆ ಹೆಚ್ಚು ವೋಟ್ ಗಳು ಬಂದಿದ್ದವು. ಹತ್ತಿರತ್ತಿರ 37 ಕೋಟಿ ವೋಟ್ ಅದಾಗಿದ್ದವು‌. ಎರಡನೇ ಸ್ಥಾನದಲ್ಲಿ ರಕ್ಷಿತಾ ಇದ್ದು, ಮೂರನೇ ಸ್ಥಾನಕ್ಕೆ ಅಶ್ವಿನಿ ಅವರು ತೃಪ್ತಿ ಪಟ್ಟುಕೊಂಡಿದ್ದಾರೆ.

suddionenews

ಕನ್ನಡ ಸುದ್ದಿಗಳ ವಿಶ್ವಾಸಾರ್ಹ ಮೂಲ — suddione.com ನಲ್ಲಿ ಓದಿ ರಾಷ್ಟ್ರೀಯ, ಅಂತರರಾಷ್ಟ್ರೀಯ, ರಾಜಕೀಯ, ಕ್ರೀಡೆ, ಮನರಂಜನೆ, ವಾಣಿಜ್ಯ, ಶಿಕ್ಷಣ ಮತ್ತು ತಂತ್ರಜ್ಞಾನಕ್ಕೆ ಸಂಬಂಧಿಸಿದ ಪ್ರತಿಯೊಂದು ಪ್ರಮುಖ ಅಪ್‌ಡೇಟ್. ನೀವು ಯಾವಾಗಲೂ ಅಪ್‌ಡೇಟ್ ಆಗಿರಲು ನಾವು ವೇಗವಾದ, ನಿಖರವಾದ ಮತ್ತು ನಿಷ್ಪಕ್ಷಪಾತವಾದ ಸುದ್ದಿಗಳನ್ನು ಸರಳ ಹಾಗೂ ಸ್ಪಷ್ಟ ಭಾಷೆಯಲ್ಲಿ ನೀಡುತ್ತೇವೆ. ಸಂಪಾದಕರು: ನಾಗೇಂದ್ರ ರೆಡ್ಡಿ ಪಿ.ಎಲ್

Join WhatsApp

Join Now

Join Telegram

Join Now
🏫 ಅಡ್ಮಿಷನ್ ಓಪನ್
🔒

ಇಂಡಿಯನ್ ಇಂಟರ್ ನ್ಯಾಷನಲ್ ಸ್ಕೂಲ್

ಸ್ವಾಗತ...