Kannada news ಚಿತ್ರದುರ್ಗ ದಾವಣಗೆರೆ ಬೆಂಗಳೂರು ರಾಜಕೀಯ ಚುನಾವಣೆ ಮಳೆ ಕ್ರಿಕೆಟ್ ಭಾರತ ಚಿನ್ನ ಬೆಳ್ಳಿ ಹವಾಮಾನ ಕ್ರಿಕೆಟ್  ಕನ್ನಡ ನ್ಯೂಸ್

2ನೇ ರನ್ನರ್ ಅಪ್ ಆದ ಅಶ್ವಿನಿ : 14 ಲಕ್ಷ ಬಹುಮಾನ..!

---Advertisement---

ಬಿಗ್ ಬಾಸ್ ಮನೆಗೆ ಬಂದಾಗಿನಿಂದ ರೆಸ್ಪೆಕ್ಟ್.. ರೆಸ್ಪೆಕ್ಟ್ ವಿಚಾರದಲ್ಲಿ ಹೆಚ್ಚು ಸದ್ದು ಮಾಡಿದ್ದ ಅಶ್ವಿನಿ ಫಿನಾಲೆ ವೇದಿಕೆಯಿಂದ ಹೊರಗೆ ಬಂದಿದ್ದಾರೆ. ಫಸ್ಟ್ ರನ್ನರ್ ಅಪ್ ಆದ್ರೂ ಆಗೇ ಆಗ್ತಾರೆ ಅಂದುಕೊಳ್ಳುತ್ತಿರುವಾಗಲೇ ಎರಡನೇ ರನ್ನರ್ ಅಪ್ ಆಗಿ ಹೊರ ಬಂದಿದ್ದಾರೆ.

ಅಶ್ವಿನಿ ಅವರಿಗೆ ಬಿಗ್ ಬಾಸ್ ಕಡೆಯಿಂದ ಒಂದಷ್ಟು ಬಹುಮಾನ ಸಿಕ್ಕಿದೆ. ವಾಕ್ ಮೇಟ್ ಫುಟ್ ವೇರ್ ಕಡೆಯಿಂದ 7 ಲಕ್ಷ, ಇಕೋ ಪ್ಲಾನೆಟ್ ವತಿಯಿಂದ 2 ಲಕ್ಷ, ಶ್ರೀಕೃಷ್ಣ ಹಳ್ಳಿ ತುಪ್ಪ ಕಡೆಯಿಂದ 5 ಲಕ್ಷ ಬಹುಮಾನ ಸಿಕ್ಕಿದ್ದು ಒಟ್ಟು 14 ಲಕ್ಷ ಹಣ ಬಹುಮಾನವಾಗಿ ಸಿಕ್ಕಿದೆ.

ವೇದಿಕೆ ಮೇಲಿಂದ ಕೆಳಗೆ ಬರುವಾಗ ಅಶ್ವಿನಜ ಅವರು ರಕ್ಷಿತಾಗೆ ಮತ್ತೊಮ್ಮೆ ಕ್ಷಮೆ ಕೇಳಿ, ಗಿಲ್ಲಿಯನ್ನ ಮಾವನ ಮಗ ಎಂದು ರೇಗಿಸಿದರು. ಆರಂಭದಿಂದಾನೂ ಅಶ್ವಿನಿ ಅವರನ್ನ ಸಿಕ್ಕಾಪಟ್ಟೆ ಗೇಲಿ ಮಾಡಿದ್ದೆ ಗಿಲ್ಲಿ ನಟ. ವಾದ ವಿವಾದಕ್ಕೆ ಇಳಿದರೆ ದೊಡ್ಡ ದೊಡ್ಡ ಮಾತುಗಳು ಮನೆಯಲ್ಲಿ ಬರ್ತಾ ಇದ್ವು. ಇದೀಗ ಬಿಗ್ ಬಾಸ್ ಮುಗಿದಿದ್ದು, ಅಶ್ವಿನಿ ಅವರು ಎರಡನೇ ರನ್ನರ್ ಅಪ್ ಆಗಿದ್ದಾರೆ.

ವೇದಿಕೆ ಮೇಲೆ ಸ್ವಲ್ಪ ಎಮೋಷನಲ್ ಆದಂತ ಅಶ್ವಿನಿ ಅವರು, ಆರ್ಟಿಸ್ಟ್ ಜೀವನ ಒಂದು ಕಡೆ ಹೋರಾಟದ ಜೀವನ ಮತ್ತೊಂದು ಕಡೆ. ನನ್ನ ತಂದೆ ತಾಯಿ ಹೇಳಿಕೊಟ್ಟ ಗುಣಗಳನ್ನೆಲ್ಲ ಅನುಸರಿಸಿದೆ. ವೀಕೆಂಡ್ ನಲ್ಲಿ ನೀವೂ ಬಂದು ಹೇಳಿದಾಗ ನಾನು ತಪ್ಪು ಮಾಡಬಾರದಿತ್ತು ಅಂತ. ಆದರೆ ಇಂದು ಖುಷಿಯಾಗಿ ಹೋಗ್ತೀನಿ ಎಂದಿದ್ದಾರೆ. ಅಶ್ವಿನಿ ಅವರ ಅಭಿಮಾನಿಗಳು ಕೊಂಚ ಬೇಸರವೂ ಆಗಿದ್ದಾರೆ.

suddionenews

ಕನ್ನಡ ಸುದ್ದಿಗಳ ವಿಶ್ವಾಸಾರ್ಹ ಮೂಲ — suddione.com ನಲ್ಲಿ ಓದಿ ರಾಷ್ಟ್ರೀಯ, ಅಂತರರಾಷ್ಟ್ರೀಯ, ರಾಜಕೀಯ, ಕ್ರೀಡೆ, ಮನರಂಜನೆ, ವಾಣಿಜ್ಯ, ಶಿಕ್ಷಣ ಮತ್ತು ತಂತ್ರಜ್ಞಾನಕ್ಕೆ ಸಂಬಂಧಿಸಿದ ಪ್ರತಿಯೊಂದು ಪ್ರಮುಖ ಅಪ್‌ಡೇಟ್. ನೀವು ಯಾವಾಗಲೂ ಅಪ್‌ಡೇಟ್ ಆಗಿರಲು ನಾವು ವೇಗವಾದ, ನಿಖರವಾದ ಮತ್ತು ನಿಷ್ಪಕ್ಷಪಾತವಾದ ಸುದ್ದಿಗಳನ್ನು ಸರಳ ಹಾಗೂ ಸ್ಪಷ್ಟ ಭಾಷೆಯಲ್ಲಿ ನೀಡುತ್ತೇವೆ. ಸಂಪಾದಕರು: ನಾಗೇಂದ್ರ ರೆಡ್ಡಿ ಪಿ.ಎಲ್

Join WhatsApp

Join Now

Join Telegram

Join Now