Kannada news ಚಿತ್ರದುರ್ಗ ದಾವಣಗೆರೆ ಬೆಂಗಳೂರು ರಾಜಕೀಯ ಚುನಾವಣೆ ಮಳೆ ಕ್ರಿಕೆಟ್ ಭಾರತ ಚಿನ್ನ ಬೆಳ್ಳಿ ಹವಾಮಾನ ಕ್ರಿಕೆಟ್  ಕನ್ನಡ ನ್ಯೂಸ್

ಚಿತ್ರದುರ್ಗ | ಭೀಮಸಮುದ್ರದಲ್ಲಿ ಭಜನಾ ಕಮ್ಮಟ ; ಜಿ. ಎಸ್. ಅನಿತ್ ಕುಮಾರ್ ಅವರಿಂದ ಉದ್ಘಾಟನೆ

---Advertisement---

ಸುದ್ದಿಒನ್, ಚಿತ್ರದುರ್ಗ, ಜನವರಿ. 16 : ಇತ್ತೀಚಿನ ದಿನಗಳಲ್ಲಿ ಫೇಸ್ಬುಕ್, ಇನ್ಸ್ಟಾಗ್ರಾಮ್, ಮೊಬೈಲ್, ಟಿವಿ ಧಾರವಾಹಿಗಳು ಮತ್ತು ಮಾಧ್ಯಮಗಳಿಗೆ ಜನರು ವ್ಯಸನಿಗಳಾಗಿದ್ದಾರೆ. ಆದರೆ ಸಂಕ್ರಾಂತಿಯ ಪ್ರಯುಕ್ತ ಭಜನಾ ಕಮ್ಮಟ ಕಾರ್ಯಕ್ರಮ ಆಯೋಜನೆ ಮಾಡಿರುವುದು ಸ್ವಾಗತಾರ್ಹ ಎಂದು

ಜಿ. ಎಸ್. ಅನಿತ್ ಕುಮಾರ್ ಹೇಳಿದರು.

ತಾಲ್ಲೂಕಿನ ಭೀಮಸಮುದ್ರ ಗ್ರಾಮದ ತುರೆಬೈಲು ಕಾಲೋನಿಯ ಉತ್ಸವಾಂಬ ಸೇವಾ ಸಮಿತಿ ಹಾಗೂ ಶ್ರೀ ಪಾಂಡುರಂಗ ಭಜನಾ ಮಂಡಳಿ ವತಿಯಿಂದ 5ನೇ ವರ್ಷದ ವಾರ್ಷಿಕೋತ್ಸವ ಹಾಗೂ ಭಜನಾ ಕಮ್ಮಟ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.

ಗ್ರಾಮದಲ್ಲಿ ಭಜನಾ ಕಮ್ಮಟ ಮಗುವಾಗಿ ಹುಟ್ಟಿ ಯುವಕನಾಗಿ ಬೆಳೆದು ಮುಂದೆ ಸಾಗುತ್ತಿರುವ ಈ ಭಜನಾ ತಂಡವು ಮುಂದೆ ಸಾಗುತ್ತಿದೆ. ಈ ಕಾರ್ಯಕ್ರಮ ಆಯೋಜಿಸಿದ ಸಂಘಕ್ಕೆ ತುಂಬು ಹೃದಯದ ಧನ್ಯವಾದಗಳು ಮುಂದಿನ ಪೀಳಿಗೆಗೆ ಇದೊಂದು ಮಾದರಿಯಾಗಲಿ ಎಂದು ತಿಳಿಸಿದರು.

ಲಾವಣಿ ಪದದ ಯುಗ ಧರ್ಮ ರಾಮಣ್ಣ ಮಾತನಾಡಿ ಒಂದನೇ ತರಗತಿಯಲ್ಲಿ ಐದು ಸರಿ ಫೇಲ್ ಆಗಿ ದೈವಾನುಗ್ರಹದಿಂದ ಲಾವಣಿ ಪದದ ಮೂಲಕ ಸುಮಾರು ಈ ಕಾರ್ಯಕ್ರಮವನ್ನು ಸೇರಿ 16032 ಕಾರ್ಯಕ್ರಮಗಳನ್ನು ನೀಡಿದ್ದೇನೆ. ನಾನು ನಮ್ಮ ಗ್ರಾಮದಲ್ಲಿ ಒಂದು ವರ್ಷಕ್ಕೆ 15 ರೂಪಾಯಿ ಸಂಬಳ ಇದ್ದು ಐದು ವರ್ಷ ಬೇರೆಯವರ ಮನೆಯಲ್ಲಿ ಕೆಲಸ ಮಾಡಿ ನಮ್ಮ ಗ್ರಾಮದಲ್ಲಿ ನಾಟಕ ತಂಡದ ಮೂಲಕ ಹಾಸ್ಯ ಪಾತ್ರವನ್ನು ನೀಡಿದರು. ಅಲ್ಲಿಂದ ಪ್ರಾರಂಭವಾದ ಕಾರ್ಯಕ್ರಮ ಲಾವಣಿ ಪದದ ಮೂಲಕ ಪ್ರಾರಂಭಗೊಂಡು ಕರ್ನಾಟಕ ಸೇರಿದಂತೆ ದೇಶದ ಹಲವು ರಾಜ್ಯಗಳಿಗೆ ಕಾರ್ಯಕ್ರಮ ನೀಡುತ್ತಾ ಬಂದಿದ್ದೇನೆ.
ಇತ್ತೀಚಿನ ದಿನಗಳಲ್ಲಿ ಹಳ್ಳಿ ಗಳಲ್ಲಿ ಜನಪದ ನಶಿಸಿ ಹೋಗುತ್ತಿದೆ‌. ಆದರೆ ಯುವಕರು ಇಂತಹ ಕಾರ್ಯಕ್ರಮ ಮಾಡುತ್ತಿರುವುದು ಒಳ್ಳೆಯ ಕೆಲಸ.
1982 ಭೀಮಸಮುದ್ರ ಗ್ರಾಮದಲ್ಲಿ ತರಳುಬಾಳು ಹುಣ್ಣಿಮೆ ನಡೆದಿತ್ತು. ಅಂದು ಈ ಗ್ರಾಮಕ್ಕೆ ಆಗಮಿಸಿದ್ದ ಸಿರಿಗೆರೆ ತರಳುಬಾಳು ಮಠದ ಹಿರಿಯ ಗುರುಗಳಾದ ಶಿವಕುಮಾರ ಶಿವಾಚಾರ್ಯ ಮಹಾಸ್ವಾಮಿಗಳು ಜೊತೆಯಲ್ಲಿ ಸುಮಾರು 20 ವರ್ಷಗಳ ಕಾಲ ತರಳುಬಾಳು ಕಾರ್ಯಕ್ರಮದಲ್ಲಿ ವೇದಿಕೆ ಕೊಟ್ಟು ಇಲ್ಲಿಯವರೆಗೆ ನಡೆದುಕೊಂಡು ಬಂದಿದೆ. ಅವರಿಗೆ ತುಂಬು ಹೃದಯದ ಧನ್ಯವಾದಗಳು ತಿಳಿಸಿದರು.

ಈ ಕಾರ್ಯಕ್ರಮವನ್ನು ದೀಪ ಬೆಳಗಿಸುವುದರ ಮೂಲಕ ಕಾರ್ಯಕ್ರಮಕ್ಕೆ ಚಾಲನೆ ನೀಡಲಾಯಿತು.
ಸಂಕ್ರಾಂತಿ ಹಬ್ಬದ ಪ್ರಯುಕ್ತ ಹಮ್ಮಿಕೊಂಡಿದ್ದ ಭಜನಾ ಕುಮಟದಲ್ಲಿ ಕಾರ್ಯಕ್ರಮಕ್ಕೆ ಸುಮಾರು 19 ತಂಡಗಳು ಪಾಲ್ಗೊಂಡಿದ್ದವು.

ಸಂಜೆ 7:00 ಗಂಟೆಯಿಂದ ಯಿಂದ ಅನ್ನ ಸಂತರ್ಪಣಾ ಕಾರ್ಯಕ್ರಮವನ್ನು ಏರ್ಪಡಿಸಲಾಗಿತ್ತು. ಸುಮಾರು 2000ಕ್ಕೂ ಹೆಚ್ಚು ಜನ ಈ ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದರು.

ಈ ಕಾರ್ಯಕ್ರಮದಲ್ಲಿ ಶಿಕ್ಷಣ ಇಲಾಖೆಯ ಸಮಯೋಜಕರಾದ ಲೋಕೇಶ್, ಧರ್ಮಸ್ಥಳ ಸಂಘದ ನಿರ್ದೇಶಕರಾದ ಕಮಲೇಶ್, ಸಂಘದ ವ್ಯವಸ್ಥಾಪಕರಾದ ಚಂದ್ ರವಿಚಂದ್ರ, ಗ್ರಾಮದ ಉದ್ಯಮಿಗಳು ಹಾಗೂ ಕೃಷಿಕರಾದ ಬಿಟಿ ಪುಟ್ಟಪ್ಪ, BT ಶಂಕ್ರಮೂರ್ತಿ, ಸಾಸಲು ದೇವಕುಮಾರ್, ಶಾಂತಲಾ ಬಿ ಟಿ ವೀರೇಶ್, ಟಿ ಜಿ ಅರುಣ್ ಕುಮಾರ್, ಶರತ್ ಪಟೇಲ್, ಡಿ ಜಿ ಮಲ್ಲಿಕಾರ್ಜುನ್ ಮತ್ತಿತರರು ಭಾಗವಹಿಸಿದ್ದರು.

suddionenews

ಕನ್ನಡ ಸುದ್ದಿಗಳ ವಿಶ್ವಾಸಾರ್ಹ ಮೂಲ — suddione.com ನಲ್ಲಿ ಓದಿ ರಾಷ್ಟ್ರೀಯ, ಅಂತರರಾಷ್ಟ್ರೀಯ, ರಾಜಕೀಯ, ಕ್ರೀಡೆ, ಮನರಂಜನೆ, ವಾಣಿಜ್ಯ, ಶಿಕ್ಷಣ ಮತ್ತು ತಂತ್ರಜ್ಞಾನಕ್ಕೆ ಸಂಬಂಧಿಸಿದ ಪ್ರತಿಯೊಂದು ಪ್ರಮುಖ ಅಪ್‌ಡೇಟ್. ನೀವು ಯಾವಾಗಲೂ ಅಪ್‌ಡೇಟ್ ಆಗಿರಲು ನಾವು ವೇಗವಾದ, ನಿಖರವಾದ ಮತ್ತು ನಿಷ್ಪಕ್ಷಪಾತವಾದ ಸುದ್ದಿಗಳನ್ನು ಸರಳ ಹಾಗೂ ಸ್ಪಷ್ಟ ಭಾಷೆಯಲ್ಲಿ ನೀಡುತ್ತೇವೆ. ಸಂಪಾದಕರು: ನಾಗೇಂದ್ರ ರೆಡ್ಡಿ ಪಿ.ಎಲ್

Join WhatsApp

Join Now

Join Telegram

Join Now