ಸುದ್ದಿಒನ್, ಚಿತ್ರದುರ್ಗ, ಡಿಸೆಂಬರ್. 26 : ನಗರದ ವಿದ್ಯಾನಗರ ನಿವಾಸಿ ಹಾಗೂ ಸಪ್ತಗಿರಿ ಬಸ್ ಮಾಲೀಕರಾದ ಜಿ.ಆರ್. ಅಶ್ವಥ್ ರೆಡ್ಡಿ ಯವರ ಪುತ್ರಿ ಸಿರಿ (36 ವರ್ಷ) ಇಂದು (ಡಿಸೆಂಬರ್. 26, ಶುಕ್ರವಾರ) ಮಧ್ಯಾನ್ಹ ಅನಾರೋಗ್ಯದಿಂದ ನಿಧನರಾದರು.
ಮೃತರು ಪತಿ, ಓರ್ವ ಮಗಳು ಸೇರಿದಂತೆ ಅಪಾರ ಬಂಧು ಬಳಗದವರನ್ನು ಅಗಲಿದ್ದಾರೆ. ಸಂಜೆ 7 ಗಂಟೆಯವರೆಗೂ ನಗರದ ವಿದ್ಯಾ ನಗರದ ನಿವಾಸದಲ್ಲಿ ಮೃತರ ಅಂತಿಮ ದರ್ಶನಕ್ಕೆ ವ್ಯವಸ್ಥೆ ಕಲ್ಪಿಸಲಾಗಿದ್ದು, ನಂತರ ದಾವಣಗೆರೆ ಜಿಲ್ಲೆಯ ಹರಿಹರ ತಾಲೂಕಿನ ಬಾತಿ ಸಮೀಪದ ದೊಗ್ಗಳ್ಳಿ ಗ್ರಾಮಕ್ಕೆ ಕರೆದೊಯ್ಯಲಾಗುವುದು. ಅಂತ್ಯಕ್ರಿಯೆ ನಾಳೆ (ಡಿಸೆಂಬರ್. 27 ರ ಶನಿವಾರ) ಮಧ್ಯಾನ್ಹ ದೊಗ್ಗಳ್ಳಿಯ ಮೃತರ ತೋಟದಲ್ಲಿ ನೆರವೇರಿಸಲಾಗುವು ಎಂದು ಕುಟುಂಬದ ಮೂಲಗಳು ತಿಳಿಸಿವೆ. (ಜಿ.ಆರ್. ಅಶ್ವಥ್ ರೆಡ್ಡಿ – 8660111191)




