ಬೆಳಗಾವಿ: ಮಾದಿಗ ಮೀಸಲಾತಿ ಹೋರಾಟಕ್ಕೆ ಸಿಕ್ಕ ಜಯದ ಬಗ್ಗೆ ಸಚಿವ ಮುನಿಯಪ್ಪ ಸಂತಸ ಹಂಚಿಕೊಂಡಿದ್ದಾರೆ. ಬೆಳಗಾವಿಯಲ್ಲಿ ಮಾತನಾಡಿದ ಅವರು, ಸುಮಾರು 35 ವರ್ಷಗಳ ಕಾಲ ಮಾದಿಗ ಮೀಸಲಾತಿ ಹೋರಾಟಕ್ಕೆ, ಮಾದುಗ ಮೀಸಲಾತಿ ಹೋರಾಟ ಸಮಿತಿ, ಮಾದಿಗ ದಂಡೋರ ಮತ್ತು ಹಲವು ಮಾದಿಗ ಸಂಘ ಸಂಸ್ಥೆಗಳ ಹೋರಾಟ, ದಲಿತ ಸಂಘ ಸಂಸ್ಥೆಗಳ ಹೋರಾಟಕ್ಕೆ ಫಲ ಸಿಕ್ಕಿದೆ ಎಂದಿದ್ದಾರೆ.
ಈ ಹಿನ್ನಲೆ ಮೊಟ್ಟ ಮೊದಲನೆಯದಾಗಿ ಹೋರಾಟಗಾರರಿಗೆ ಧನ್ಯವಾದಗಳನ್ನ ಸಲ್ಲಿಸುತ್ತೇನೆ. ಬಹಳ ಮುಖ್ಯವಾಗಿ ನಮ್ಮ ಮುಖ್ಯಮಂತ್ರಿಗಳಾದ ಸಿದ್ದರಾಮಯ್ಯ ಅವರು ಹಾಗೂ ಡಿಸಿಎಂ ಡಿಕೆ ಶಿವಕುಮಾರ್ ಅವರು, ಸಮಾಜ ಕಲ್ಯಾಣ ಸಚಿವರು ಮಹಾದೇವಪ್ಪ, ಪರಮೇಶ್ವರ್, ಶಿವರಾಜ್ ತಂಗಡಗಿ, ಪ್ರಿಯಾಂಕ್ ಖರ್ಗೆ ಅವರು ಎಲ್ಲಾ ಸಚಿವರು ಕೂಡ ಕ್ಯಾಬಿನೆಟ್ ಡಿಸಿಷನ್ ಆದ ಮೇಲೆ ಈ ಬಿಲ್ ಪಾಸ್ ಮಾಡಿದ್ದಾರೆ.
ವಿರೋಧ ಪಕ್ಷದ ಎಲ್ಲಾ ಶಾಸಕರು ಕೂಡ ಇದನ್ನ ಸ್ವಾಗತ ಮಾಡಿದ್ದಾರೆ. ಇದೊಂದು ಚರಿತ್ರೆಯಾದಂತ 35 ವರ್ಷಗಳ ಹೋರಾಟಕ್ಕೆ, ಸಮಾಜದಲ್ಲಿ ಶೋಷಣೆಗೆ ಒಳಗಾಗಿದ್ದಂತ ಮಾದಿಗ ಸಮುದಾಯ, 101 ಜಾತಿಗಳಲ್ಲಿ ಬಹಳಷ್ಟು ಹಿಂದುಳಿದವರು ಎಂದರೆ ಈ ಮಾದಿಗ ಸಮುದಾಯ. ಅವರಿಗೆ ಇಂದು ಈ ಕಾಂಗ್ರೆಸ್ ಸರ್ಕಾರ, ಒಂದು ಇತಿಹಾಸದ ತೀರ್ಮಾನ ನೀಡಿದೆ. ಸರ್ವೋಚ್ಛ ನ್ಯಾಯಾಲಯದ ತೀರ್ಮಾನವನ್ನ ಯಥಾವತ್ತಾಗಿ ಜಾರಿಗೆ ತಂದಿದೆ. ಭರ್ತಿ ವಿಚಾರದ ಬಗ್ಗೆ ನ್ಯಾಯಾಲಯ ಹೇಳಿದೆ. ಬಾಬಾ ಸಾಹೇಬ್ ಅಂಬೇಡ್ಕರ್ ಅವರ ಸಂವಿಧಾನದಲ್ಲಿ 16/4A ಅಲ್ಲಿ ಕೂಡ ಮೀಸಲಾತಿ ನೀಡಲು ತಿಳಿಸಿದೆ. ಎಂದು ಮಾದಿಗ ಸಮುದಾಯದ ಹೋರಾಟಕ್ಕೆ ಸಿಕ್ಕ ಜಯದ ಬಗ್ಗೆ ಮಾತನಾಡಿದ್ದಾರೆ.




