ದರ್ಶನ್ ಭೇಟಿ ಮಾಡಿದ್ದೆ : DGP ಅಲೋಕ್ ಕುಮಾರ್ ಹೇಳಿದ್ದೇನು..?

1 Min Read

ಆನೇಕಲ್: ಪರಪ್ಪನ ಅಗ್ರಹಾರದ ಜವಬ್ದಾರಿ ಈಗ ಅಲೋಕ್ ಕುಮಾರ್ ಅವರ ಹೆಗಲ ಮೇಲಿದೆ. ಹೀಗಾಗಿ ಡಿಜಿಪಿ ಅಲೋಕ್ ಕುಮಾರ್ ಪರಪ್ಪನ ಅಗ್ರಹಾರಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ದರ್ಶನ್ ಅವರು ಕೂಡ ಪರಪ್ಪನ ಅಗ್ರಹಾರದಲ್ಲಿಯೇ ಇದ್ದಾರೆ. ಈ ಸಂಬಂಧ ದರ್ಶನ್ ಅವರನ್ನು ಅಲೋಕ್ ಕುಮಾರ್ ಭೇಟಿಯಾದ್ರಾ..? ಏನು ಮಾತಾಡಿರಬಹುದು ಎಂಬ ಕುತೂಹಲ ಸಹಜವಾಗಿಯೇ ಎಲ್ಲರಿಗೂ ಇದೆ‌. ಆ ಬಗ್ಗೆ ಅಲೋಕ್ ಕುಮಾರ್ ಪ್ರತಿಕ್ರಿಯೆ ನೀಡಿದ್ದಾರೆ.

ಅವರು ಯಾವ ಕುಂದು ಕೊರತೆಗಳನ್ನು ನಮ್ಮ ಬಳಿ ಹೇಳಿಲ್ಲ. ಇಯರಿಂಗ್ ಬಗ್ಗೆ ಮಾತನಾಡಿದೆವು. ಡೇಟ್ಸ್ ಹೇಗಿದೆ..? ಅದರ ಸಮಸ್ಯೆ ಏನಾಗ್ತಿದೆ ಎಂಬೆಲ್ಲಾ ವಿಚಾರಗಳನ್ನ ಕೇಳಿದೆವು. ಯಾವುದೇ ಸಮಸ್ಯೆ ಆಗಿಲ್ಲ ಎಂಬುದನ್ನ ಅವರು ಹೇಳಿದರು. ಆನಂತರ 17ನೇ ತಾರೀಕಿಗೇನೆ ಅವರ ಇಯರಿಂಗ್ ಇದೆ ಎಂಬ ಮಾಹಿತಿಯನ್ನು ತಿಳಿಸಿದರು.

ಇನ್ನು ದರ್ಶನ್ ಅವರಿಗೆ ಬಿಸಿಲು ತಾಗದೆ ದೇಹದಲ್ಲಿ ಫಂಗಸ್ ಆಗಿದೆ ಎಂಬೆಲ್ಲಾ ದೂರುಗಳನ್ನು ವಕೀಲರು ಕೋರ್ಟ್ ನಲ್ಲಿ ಹೇಳಿದ್ದರು. ಈ ಬಗ್ಗೆ ಅಲೋಕ್ ಕುಮಾರ್ ಪ್ರತಿಕ್ರಿಯೆ ನೀಡಿದ್ದು, ಇಲ್ಲ ಆ ರೀತಿಯಾದಂತ ವಿಚಾರ ಏನು ಹೇಳಿಲ್ಲ. ನಾನು ಆರು ಜನರನ್ನು ಕೂಡ ಕೇಳಿದೆ. ನಾನು ಮುಖ್ಯವಾಗಿ ಕೇಳಿದ್ದು ಡೇಟ್ಸ್ ಬಗ್ಗೆಯೆ. ಬ್ಲಾಕಿಂಗ್ ಸಿಸ್ಟಮ್ ಟಿಸಿಎಲ್ ಅವರನ್ನ ಕರೆಸಿ ಸಮಸ್ಯೆಯನ್ನ ಹೇಳಿದ್ದೇನೆ. ನಾನು ಈ ಹಿಂದೆ ಇದ್ದಾಗಲೂ ಇದೆ ಸಮಸ್ಯೆ ಇತ್ತು. ನೆಟ್ವರ್ಕ್ ಸರಿ ಮಾಡುವುದಕ್ಕೆ ಸೂಚನೆ ನೀಡಿದ್ದೇನೆ ಎಂದು ಅಲೋಕ್ ಕುಮಾರ್ ತಿಳಿಸಿದ್ದಾರೆ. ಜೈಲಿಗೆ ಹೋಗಿ ಎಚ್ಚರಿಕೆ ಕೂಡ ನೀಡಿದ್ದಾರೆ. ಸಿಗರೇಟ್, ಬೀಡಿ ಸಿಗಲ್ಲ ಇನ್ಮುಂದೆ ಅಂದಿದ್ದಾರೆ.

Share This Article
Enable Notifications OK No thanks