ಸಾಲು ಮರದ ತಿಮ್ಮಕ್ಕ ನಿಧನ : ಸಾರ್ವಜನಿಕ ರಜೆ ಬಗ್ಗೆ ಸರ್ಕಾರದ ಸ್ಪಷ್ಟನೆ

1 Min Read

 

ಬೆಂಗಳೂರು: ಸಾಕಷ್ಟು ಸಲ ನಂಬುವಂತೆಯೇ ಇರುವ ಸುಳ್ಳು ಸುದ್ದಿಗಳು ಹರಿದಾಡಿವೆ. ಇಂದು ಕೂಡ ಅಂಥದ್ದೊಂದು ಲೆಪಟರ್ ಹೆಡ್ ಹರಿದಾಡುತ್ತಿದೆ. ಸಾಕುಮರದ ತಿಮ್ಮಕ್ಕ ಉಸಿರಾಟದ ಸಮಸ್ಯೆಯಿಂದ ಎಲ್ಲರನ್ನು ಬಿಟ್ಟು ಆ ಹಿರಿ ಜೀವನ ಹೊರಟಿದೆ. ಈ ದುಃಖದ ಸಂದರ್ಭದಲ್ಲೂ ಕಿಡಿಗೇಡಿಗಳು ಸುಳ್ಳು ಸುದ್ದಿಗಳ ಆಟವಾಡಿದ್ದಾರೆ.

ಸಾಲುಮರದ ತಿಮ್ಮಕ್ಕ ನಿಧನದ ಸುದ್ದಿ ಕೇಳಿದ ಕೂಡಲೇ ಸಿಎಂ ಸಿದ್ದರಾಮಯ್ಯ ಅವರು ಆಸ್ಪತ್ರೆಗೆ ಹೋಗಿದ್ದರು. ಬಳಿಕ ಸಕಲ ಸರ್ಕಾರು ಗೌರವಗಳೊಂದಿಗೆ ಅಂತ್ಯಕ್ರಿಯೆ ನಡೆಯಲಿದೆ ಎಂಬುದನ್ನು ಘೋಷಣೆ ಮಾಡಿದ್ದರು. ಆದರೆ ಸಂಜೆ ವೇಳೆಗೆ ಎಲ್ಲಾ ಶಾಲಾ ಕಾಲೇಜುಗಳಿಗೆ ರಜೆ ಎಂಬ ಸುದ್ದಿ ಹರಿದಾಡುತ್ತಿದೆ. ಅ ಆದೇಶದ ಪ್ರತಿಯನ್ನು ಕಂಡ ಹಲವರು ಸತ್ಯವಿರಬಹುದೇನೋ ಎಂದುಕೊಂಡರು. ರಜೆ ಇರಬಹುದು ಎಂಬ ಅಂದಾಜನ್ನು ಮಾಡಿದರು. ಯಾಕಂದ್ರೆ ಆ ಆದೇಶದ ಪ್ರತಿ ಸರ್ಕಾರದಿಂದಾನೇ ಹೊರಡಿಸಿರುವಂತೆಯೇ ಇದೆ.

ಹಾಗಾದ್ರೆ ಆ ಆದೇಶ ಪ್ರತಿಯಲ್ಲಿ ಏನಿದೆ ಎಂಬುದನ್ನು ನೋಡುವುದಾದರೆ, ಸಾಲು ಮರದ ತಿಮ್ಮಕ್ಕರವರು ದಿನಾಂಕ: 14.11.2025 ರ ಶುಕ್ರವಾರ ಬೆಳಗಿನ ಜಾವ 02:30ಕ್ಕೆ ನಿಧನರಾದ ವಿಷಯವನ್ನು ಕರ್ನಾಟಕ ರಾಜ್ಯ ಸರ್ಕಾರವು ತೀವ್ರ ಸಂತಾಪದಿಂದ ಈ ಮೂಲಕ ಪ್ರಕಟಿಸಿದೆ. ಮುಂದುವರೆದು ದಿ: 15.11.20250 ದಿವಂಗತರ ಅಂತ್ಯಕ್ರಿಯೆಯನ್ನು ಶನಿವಾರದಂದು ಹುಟ್ಟೂರಾದ ಮಂಡ್ಯ ಜಿಲ್ಲೆಯ ಮದ್ದೂರು ತಾಲ್ಲೂಕಿನ ಸೊಮನಹಳ್ಳಿ ಸ್ವಗ್ರಾಮದಲ್ಲಿ ಸಕಲ ಸರ್ಕಾರಿ ಗೌರವಗಳೊಂದಿಗೆ ನೆರವೇರಿಸಲಾಗುವುದು. ದಿವಂಗತರ ಗೌರವಾರ್ಥವಾಗಿ ದಿನಾಂಕ.15.11.2025 ರ ಶನಿವಾರದಂದು ರಾಜ್ಯಾದ್ಯಂತ ಎಲ್ಲಾ ಸರ್ಕಾರಿ ಕಚೇರಿಗಳಿಗೆ ಮತ್ತು ಎಲ್ಲಾ, ಶಾಲಾ ಕಾಲೇಜುಗಳಿಗೆ (ಎಲ್ಲಾ ಅನುದಾನಿತ ವಿದ್ಯಾ ಸಂಸ್ಥೆಗಳು ಸೇರಿದಂತೆ) ಸಾರ್ವಜನಿಕ ರಜೆಯನ್ನು ಘೋಷಿಸಲಾಗಿದೆ.

ಕರ್ನಾಟಕ ರಾಜ್ಯಪಾಲರ ಆಜ್ಞಾನುಸಾರ ಮತ್ತು ಅವರ ಹೆಸರಿನಲ್ಲಿ ಎಂದು ಸರ್ಕಾರದ ಉಪ ಕಾರ್ಯದರ್ಶಿ ಅವರ ಸಹಿಯನ್ನು ಮಾಡಲಾಗಿದೆ. ಆದರೆ ಇದು ಸುಳ್ಳು ಆದೇಶ ಎಂಬುದು ತಿಳಿದು ಬಂದಿದೆ.

Share This Article
Enable Notifications OK No thanks