Kannada news ಚಿತ್ರದುರ್ಗ ದಾವಣಗೆರೆ ಬೆಂಗಳೂರು ರಾಜಕೀಯ ಚುನಾವಣೆ ಮಳೆ ಕ್ರಿಕೆಟ್ ಭಾರತ ಚಿನ್ನ ಬೆಳ್ಳಿ ಹವಾಮಾನ ಕ್ರಿಕೆಟ್  ಕನ್ನಡ ನ್ಯೂಸ್

32ನೇ ಫಲ ಪುಷ್ಪ ಪ್ರದರ್ಶನ : ಸತತ 32ನೇ ರೋಲಿಂಗ್ ಶೀಲ್ಡ್ ಪಡೆದ ಶ್ರೀ ಬೃಹನ್ಮಠ ಮತ್ತು ಅಂಗಸಂಸ್ಥೆಗಳು

---Advertisement---

ಸುದ್ದಿಒನ್, ಚಿತ್ರದುರ್ಗ, ಫೆ. 18 : ಐತಿಹಾಸಿಕ ಚಿತ್ರದುರ್ಗದ ಶ್ರೀ ಜಗದ್ಗುರು ಮುರುಘರಾಜೇಂದ್ರ ಬೃಹನ್ಮಠದ ಮತ್ತು ಎಸ್.ಜೆ.ಎಂ. ವಿದ್ಯಾಪೀಠದ ಅಂಗಸಂಸ್ಥೆಗಳಲ್ಲಿ ನಿರ್ಮಾಣ ಮಾಡಿರುವ ಬೃಹತ್, ಮಧ್ಯಮ ಹಾಗೂ ಉತ್ತಮ ಗಾತ್ರದ ಉದ್ಯಾನವನಗಳು ಗಮನಸೆಳೆಯುತ್ತಿವೆ. ಅಂತಹ ಉದ್ಯಾನವನಗಳಿಗೆಲ್ಲ ಸೇರಿ ಈ ಬಾರಿಯ ಫಲಪುಷ್ಪ ಪ್ರದರ್ಶನದಲ್ಲಿ ರೋಲಿಂಗ್ ಶೀಲ್ಡ್ ಪಡೆದಿರುವುದು ಒಂದು ವಿಶೇಷವಾಗಿದೆ.

 

ಫೆಬ್ರವರಿ 15 ರಿಂದ 17 ರವರೆಗೆ ನಗರದ ವಿ.ಪಿ.ಬಡಾವಣೆಯ ತೋಟಗಾರಿಕೆ ಇಲಾಖೆಯ ಆವರಣದಲ್ಲಿ 32ನೇ ವರ್ಷದ ಫಲಪುಷ್ಪ ಪ್ರದರ್ಶನ ನಡೆಯಿತು. ಶ್ರೀ ಜಗದ್ಗುರು ಮುರುಘರಾಜೇಂದ್ರ ಬೃಹನ್ಮಠ ಹಾಗೂ ಎಸ್.ಜೆ.ಎಂ. ವಿದ್ಯಾಪೀಠದ ಶಾಲಾ ಕಾಲೇಜುಗಳಲ್ಲಿನ ಉದ್ಯಾನವನಗಳ ಉತ್ತಮ ನಿರ್ವಹಣೆಗಾಗಿ ಸತತ 31ವರ್ಷಗಳಿಂದಲೂ ರೋಲಿಂಗ್ ಶೀಲ್ಡ್ ಪಡೆದ ಹೆಗ್ಗಳಿಕೆ ಪಾತ್ರವಾಗಿದೆ. ಈ ಬಾರಿಯೂ ಸಿಬ್ಬಂದಿಯು ಪಾರಿತೋಷಕ ಪಡೆದಿರುವುದಕ್ಕೆ ಆಡಳಿತ ಮಂಡಳಿಯ ಅಧ್ಯಕ್ಷರಾದ ಶಿವಯೋಗಿ. ಸಿ. ಕಳಸದ ಐಎಎಸ್(ನಿವೃತ್ತ) ಹಾಗೂ ಸದಸ್ಯರಾದ ಡಾ. ಬಸವಕುಮಾರ ಮಹಾಸ್ವಾಮಿಗಳು ಸಂತಸ ವ್ಯಕ್ತಪಡಿಸಿ, ನಿರ್ವಹಿಸಿದ ಎಲ್ಲರಿಗೂ ಧನ್ಯವಾದ ಹೇಳಿದ್ದಾರೆ.

ಭಾಗವಹಿಸಿದ ಉದ್ಯಾನವನಗಳ ಪೈಕಿ ಶ್ರೀ ಜಗದ್ಗುರು ಮುರುಘರಾಜೇಂದ್ರ ಬೃಹನ್ಮಠ ಬೃಹತ್ ಗಾತ್ರದ ಉದ್ಯಾನವನ, ಶ್ರೀ ಬಸವೇಶ್ವರ ವೈದ್ಯಕೀಯ ಮಹಾವಿದ್ಯಾಲಯ ಭಾರಿ ಗಾತ್ರದ ಉದ್ಯಾನವನ, ಶ್ರೀ ಜಗದ್ಗುರು ಮಲ್ಲಿಕಾರ್ಜುನ ಮುರುಘರಾಜೇಂದ್ರ ತಾಂತ್ರಿಕ ಮಹಾವಿದ್ಯಾಲಯದ ಉದ್ಯಾನವನ ಉತ್ತಮ ಗಾತ್ರದ್ದು, ಎಸ್‍ಜೆಎಂ ಫಾರ್ಮಸಿ ಕಾಲೇಜು ಮಧ್ಯಮ, ಬಿಚ್ಚುಗತ್ತಿ ಭರಮಣ್ಣನಾಯಕ ಉದ್ಯಾನವನ ಮಧ್ಯಮ, ಬಸವೇಶ್ವರ ವೈದ್ಯಕೀಯ ಮಹಾವಿದ್ಯಾಲಯದ ಕೊರೇನಿಕ್ಸ್ ಉದ್ಯಾನವನ ಮಧ್ಯಮ, ಬಸವೇಶ್ವರ ವೈದ್ಯಕೀಯ ಕ್ವಾಟ್ರಸ್ ಉದ್ಯಾನವನ ಮಧ್ಯಮ, ಬಸವೇಶ್ವರ ವೈದ್ಯಕೀಯ ವಿದ್ಯಾರ್ಥಿಗಳ ಉದ್ಯಾನವನ, ಎಸ್.ಜೆ.ಎಂ. ದಂತ ಮಹಾವಿದ್ಯಾಲಯ ಉದ್ಯಾನವನ ಉತ್ತಮ ಗಾತ್ರ, ಬಸವೇಶ್ವರ ವೈದ್ಯಕೀಯ ಮಹಾವಿದ್ಯಾಲಯ ಹಾಗೂ ಆಸ್ಪತ್ರೆ ಉದ್ಯಾನವನ ಭಾರಿ ಗಾತ್ರ, ಎಸ್.ಜೆ.ಎಂ. ಪಾಲಿಟೆಕ್ನಿಕ್ ಉದ್ಯಾನವನ ಮಧ್ಯಮಗಾತ್ರ, ಎಸ್.ಜೆ.ಎಂ. ಇಂಜಿನಿಯರಿಂಗ್ ವಿದ್ಯಾರ್ಥಿನಿಯರ ವಿದ್ಯಾರ್ಥಿ ನಿಲಯ, ಎಸ್.ಜೆ.ಎಂ. ಉದ್ಯೋಗಸ್ಥ ಮಹಿಳೆಯರ ಉದ್ಯಾನವನ ಹಾಗೂ ಎಸ್.ಜೆ.ಎಂ. ದಂತ ಮಹಿಳಾ ವಿದ್ಯಾರ್ಥಿ ನಿಲಯ ಇವುಗಳು ಸೇರಿವೆ ಎಂದು ಶ್ರೀಮಠದ ಪ್ರಕಟಣೆ ತಿಳಿಸಿದೆ.

suddionenews

ಕನ್ನಡ ಸುದ್ದಿಗಳ ವಿಶ್ವಾಸಾರ್ಹ ಮೂಲ — suddione.com ನಲ್ಲಿ ಓದಿ ರಾಷ್ಟ್ರೀಯ, ಅಂತರರಾಷ್ಟ್ರೀಯ, ರಾಜಕೀಯ, ಕ್ರೀಡೆ, ಮನರಂಜನೆ, ವಾಣಿಜ್ಯ, ಶಿಕ್ಷಣ ಮತ್ತು ತಂತ್ರಜ್ಞಾನಕ್ಕೆ ಸಂಬಂಧಿಸಿದ ಪ್ರತಿಯೊಂದು ಪ್ರಮುಖ ಅಪ್‌ಡೇಟ್. ನೀವು ಯಾವಾಗಲೂ ಅಪ್‌ಡೇಟ್ ಆಗಿರಲು ನಾವು ವೇಗವಾದ, ನಿಖರವಾದ ಮತ್ತು ನಿಷ್ಪಕ್ಷಪಾತವಾದ ಸುದ್ದಿಗಳನ್ನು ಸರಳ ಹಾಗೂ ಸ್ಪಷ್ಟ ಭಾಷೆಯಲ್ಲಿ ನೀಡುತ್ತೇವೆ. ಸಂಪಾದಕರು: ನಾಗೇಂದ್ರ ರೆಡ್ಡಿ ಪಿ.ಎಲ್

Join WhatsApp

Join Now

Join Telegram

Join Now

Leave a Comment

🏫 ಅಡ್ಮಿಷನ್ ಓಪನ್
🔒

ಇಂಡಿಯನ್ ಇಂಟರ್ ನ್ಯಾಷನಲ್ ಸ್ಕೂಲ್

ಸ್ವಾಗತ...