ಹನಿಟ್ರ್ಯಾಪ್ ಪ್ರಕರಣದ ಸದ್ದು ; ಸಚಿವಕಾಂಕ್ಷಿಗಳಿಗೂ ಆಯ್ತಾ ನಿರಾಸೆ..?

1 Min Read

 

ನವದೆಹಲಿ; ಸಿಎಂ ಸಿದ್ದರಾಮಯ್ಯ ಅವರು ದೆಹಲಿಯ ಪ್ರವಾಸದಲ್ಲಿದ್ದು, ಹೈಕಮಾಂಡ್ ನಾಯಕರಿಗೆ ರಾಜ್ಯದಲ್ಲಾಗುತ್ತಿರುವ ಬೆಳವಣಿಗೆಯ ವರದಿಯನ್ನು ಒಪ್ಪಿಸುತ್ತಿದ್ದಾರೆ. ಕಾಂಗ್ರೆಸ್ ಸರ್ಕಾರದಲ್ಲಿ ಸದ್ಯಕ್ಕೆ ಅಧಿಕಾರದ ನಿರೀಕ್ಷೆಯಲ್ಲಿ ಸಾಕಷ್ಟು ಮಂದಿ ಇದ್ದಾರೆ. ನಾವೂ ಸಚಿವರಾಗ್ತೀವಿ ಅಂತ ಕಾಯ್ತಾ ಇದ್ದಾರೆ. ಆದರೆ ಈಗ ನೋಡಿದ್ರೆ ಹೈಕಮಾಂಡ್ ಸಚಿವ ಸಂಪುಟ ಪುನರ್ ರಚನೆಗೂ ಬ್ರೇಕ್ ಹಾಕಿದೆ. ನಾಲ್ಕು ಪ್ರಮುಖ ಅಜೆಂಡಾಗಳೊಂದಿಗೆ ಸಿಎಂ ಮತ್ತು ಡಿಸಿಎಂ ದೆಹಲಿಗೆ ತೆರಳಿದ್ದಾರೆ. ಅದರಲ್ಲಿ ಸಚಿವ ಸಂಪುಟ ಪುನರಾರಚನೆಯೂ ಒಂದು. ರಾಹುಲ್ ಗಾಂಧಿ ಜೊತೆ ಭೇಟಿ ವೇಳೆ ಸದ್ಯಕ್ಕೆ ಸಂಪುಟ ಸರ್ಜರಿಗೆ ಕೈ ಹಾಕೋದು ಬೇಡ ಎಂಬ ಚರ್ಚೆ ಆಗಿದ್ಯಂತೆ.

ದೆಹಲಿಯಲ್ಲಿ ಎಐಸಿಸಿ ಪ್ರಧಾನ ಕಾರ್ಯದರ್ಶಿಯನ್ನು ಭೇಟಿಯಾದ ಸಿಎಂ ಸಿದ್ದರಾಮಯ್ಯ ಅವರು ಒನ್ ಟು ಒನ್ ಸಭೆ ನಡೆಸಿದ್ದಾರೆ. ಸುಮಾರು ಅರ್ಧ ಗಂಟೆಗಳ ಕಾಲ ಕೂತು ನಡೆಸಿದ್ದಾರೆ. ಸುಮಾರು ಅರ್ಧ ಗಂಟೆಗೂ ಹೆಚ್ಚಿನ ಕಾಲ ವೇಣುಗೋಪಾಲ್ ಜೊತೆಗೆ ಎಂಎಲ್ಸಿ ನಾಮ ನಿರ್ದೇಶನ, ಪಿಸಿಸಿ ಅಧ್ಯಕ್ಷರ ನೇಮಕ ಸಂಬಂಧ ಚರ್ಚೆ ನಡೆಸಿದ್ದಾರೆ.

ಹೈಕಮಾಂಡ್ ನಾಯಕರ ಜೊತೆಗೆ ಕೆಲವೊಂದು ವಿಚಾರಗಳು ಚರ್ಚೆಯಾಗಿದ್ದು, ನಾಗೇಂದ್ರಗೆ ಅವಕಾಶ ಮಾಡಿಕೊಡಬೇಕು ಎಂಬ ತೀರ್ಮಾನದ ಬಗ್ಗೆಯೂ ಚರ್ಚೆಯಾಗಿದೆ. ಆದರೆ ನಾಗೇಂದ್ರ ವಿಚಾರದಲ್ಲಿ ಈ ಹಿಂದೆಯೇ ಈ ನಿರ್ಧಾರವಾಗಿತ್ತು. ಒಬ್ಬರಿಗೆ ಅವಕಾಶ ಮಾಡಿಕೊಟ್ಟರೆ. ಬೇರೆ ಸಂದೇಶ ರವಾನೆಯಾಗುತ್ತದೆ ಎಂಬ ಚರ್ಚೆಯೂ ನಡೆದಿದೆ. ಹಾಗೇ ಸರ್ಕಾರದ ಎರಡನೇ ವರ್ಷದ ಆಚರಣೆ ಬಳಿಕ ಸಂಪುಟಕ್ಕೆ ಕೈ ಹಾಕೋಣಾ ಎಂಬುದು ರಾಹುಲ್ ಗಾಂಧಿ ಜೊತೆಯಲ್ಲಿ ಸಿದ್ದರಾಮಯ್ಯ ನಡೆಸಿದ ಚರ್ಚೆಯಲ್ಲಿ ಅಭಿಪ್ರಾಯ ತಿಳಿಸಲಾಗಿದೆ.

Share This Article
Leave a Comment

Leave a Reply

Your email address will not be published. Required fields are marked *

Enable Notifications OK No thanks