ವಾರಗಟ್ಟಲೇ ಬಸ್ ನಲ್ಲಿ ಓಡಾಡುವ ಪ್ಲ್ಯಾನ್ ಹಾಕಿಕೊಂಡ ಮಹಿಳೆಯರಿಗೆ ಗಂಡಂದಿರ ವಿಚಾರವಾಗಿ ಸಲಹೆ ನೀಡಿದ ಶಾಸಕ..!

1 Min Read

 

ದಾವಣಗೆರೆ : ಇಂದಿನಿಂದ ರಾಜ್ಯದಲ್ಲಿ ಉಚಿತ ಬಸ್ ಸೇವೆ ಆರಂಭಗೊಂಡಿದೆ. ಕಾಂಗ್ರೆಸ್ ಕೊಟ್ಟ ಭರವಸೆಗಳಲ್ಲಿ ಶಕ್ತಿ ಯೋಜನೆಗೆ ಇಂದಿನಿಂದ ಚಾಲನೆ ಸಿಕ್ಕಿದೆ. ಬಸ್ ಗಳಲ್ಲಿ ಆಧಾರ್ ಕಾರ್ಡ್ ತೋರಿಸಿ ರಾಜ್ಯದ ಒಳಗೆ ಎಲ್ಲಿಂದ ಎಲ್ಲಿಗೆ ಬೇಕಾದರೂ ಓಡಾಡಬಹುದಾಗಿದೆ. ಇದು ಮಹಿಳೆಯರಿಗೆ ಮಾತ್ರ. ಬಸ್ ಫ್ರೀ ಇರುವ ಕಾರಣ ರಾಜ್ಯದಲ್ಲಿಯೇ ಓಡಾಡಲು ಮಹಿಳೆಯರು ಪ್ಲ್ಯಾನ್ ಮಾಡಿಕೊಂಡಿದ್ದಾರೆ. ಅಂತವರಿಗೆ ಕಾಂಗ್ರೆಸ್ ಶಾಸಕ ಕಿವಿ ಮಾತು ಹೇಳಿದ್ದಾರೆ.

ಮಾಯಕೊಂಡ ಶಾಸಕ ಬಸವಂತಪ್ಪ ಅವರು ಮಾತನಾಡಿ, ಬಸ್ ಫ್ರೀ ಇದೆ ಅಂತ ವಾರಗಟ್ಟಲೇ ಓಡಾಡಬೇಡಿ. ಏನೇ ಕೆಲಸ ಇದ್ದರೂ ಎರಡು ದಿನದಲ್ಲಿ ಮುಗಿಸಿಕೊಂಡು ಬನ್ನಿ. ಇಲ್ಲವಾದರೆ ನಿಮ್ಮ ಗಂಡಂದಿರು ಬೇರೆ ದಾರಿ ಹಿಡಿಯುತ್ತಾರೆ. ನಿಮ್ಮ ಗಂಡಂದಿರಿಗೆ ಅಡುಗೆ ಮಾಡಿ ಹಾಕುವವರು ಯಾರು..? ಅದಕ್ಕೆ ಎರಡೇ ದಿನದಲ್ಲಿ ವಾಪಾಸ್ ಬಂದು ಬಿಡಿ ಎಂದು ಸಲಹೆ ನೀಡಿದ್ದಾರೆ.

ಆಸ್ಪತ್ರೆ ಆಗಲಿ, ದೇವಸ್ಥಾನಕ್ಕಾಗಲೀ, ನಿಮ್ಮ ಸಂಬಂಧಿಕರ ಮನೆಗೆ ಆಗಲೀ ಸುಖಾ ಸುಮ್ಮನೆ ಹೋಗಬೇಡಿ. ಬಸ್ ಫ್ರೀ ಇದೆ ಅಂತ ಹೋಗುವ ಬದಲು ಅವಶ್ಯಕತೆ ಇದ್ದಾಗ ಮಾತ್ರ ಹೋಗಿ ಎಂದಿದ್ದಾರೆ.

Share This Article
Leave a Comment

Leave a Reply

Your email address will not be published. Required fields are marked *