ಜಮೀರ್ ಅಹ್ಮದ್ ಇಲಾಖೆಯಲ್ಲಿ ಅಕ್ರಮಗಳ ಸದ್ದು ಕೇಳಿಸ್ತಾ ಇದೆ. ಕರ್ನಾಟಕ ರಿಯಲ್ ಎಸ್ಟೇಟ್ ನಿಯಂತ್ರಣ ಪ್ರಾಧಿಕಾರದಲ್ಲಿ ಭಾರೀ ಭ್ರಷ್ಟಾಚಾರ ಆರೋಪ ಕೇಳಿಬಂದಿದೆ. ಈ ಎಲ್ಲಾ ವಿಚಾರಗಳು ಗೊತ್ತಿದ್ದರೂ ರಿಯಲ್ ಎಸ್ಟೇಟ್ ನಿಯಂತ್ರಣ ಪ್ರಾಧಿಕಾರದ ಅಧ್ಯಕ್ಷರು, ಸಚಿವರು ಸೈಲೆಂಟ್ ಆಗಿದ್ದಾರೆ ಎಂಬ ಆರೋಪವೂ ಕೇಳಿ ಬರುತ್ತಿದೆ. ಸಚಿವ ಜಮೀರ್ ಅಹ್ಮದ್ ಅಣತಿಯಂತೆಯೇ ಅಧ್ಯಕ್ಷ ರಾಕೇಶ್ ಸಿಂಗ್ ಕೆಲಸ ಮಾಡಿದ್ದಾರೆ ಎನ್ನಲಾಗಿದೆ.
ರೇರಾ ಅಡಿಯಲ್ಲಿ ಬಿಲ್ಡರ್ ಹಾಗೂ ಪ್ರಾಜೆಕ್ಟ್ ನ ವಿರುದ್ಧ ಲೆಕ್ಕಕ್ಕೆ ಸಿಗದಷ್ಟು ದೂರುಗಳು ದಾಖಲಾಗಿವೆ. ಆದ್ರೆ ರೇರಾ ಜನಸಾಮಾನ್ಯರ, ಗ್ರಾಹಕರ ಪರ ನಿಲ್ಲುತ್ತಿಲ್ಲ. ಸಕಾಲಕ್ಕೆ ಪ್ಲ್ಯಾಟ್ ಹಸ್ತಾಂತರ ಮಾಡದಿದ್ರೂ ಬಿಲ್ಡರ್ ಗಳ ಮೇಲೆ ಯಾವುದೇ ಕ್ರಮಗಳಿಲ್ಲ. ನಿಗದಿತ ಅವಧಿಗೆ ಯೋಜನೆ ಪೂರ್ಣಗೊಳಿಸದಿದ್ದರು ಮೌನವಾಗಿದೆ. ಪ್ರಾಧಿಕಾರದಲ್ಲಿ ದಾಖಲಾಗಿರುವ ದೂರುಗಳನ್ನು ಇತ್ಯರ್ಥವೇ ಮಾಡಿಲ್ಲ ಎಂಬ ಆರೋಪವೂ ಇದೆ.
ಈ ಸಂಬಂಧ ಈಗಾಗಲೇ ಸಾಕಷ್ಟು ದೂರುಗಳು ದಾಖಲಾಗಿವೆ. ರಾಜ್ಯದಲ್ಲಿ ರೇರಾ ಕಾಯ್ದೆ ಜಾರಿಯಾಗಿ ಒಟ್ಟು 8 ವರ್ಷಗಳಾಗಿವರ. ಆದರೆ ಬಹುತೇಕ ದೂರುಗಳು ಇತ್ಐರ್ಥವಾಗಿಲ್ಲ. ಹಾಗೇ ಉಳಿದ ದೂರುಗಳಲ್ಲಿ ಅದರಲ್ಲೂ ಕಳೆದ 8 ವರ್ಷದಲ್ಲಿ ರೇರಾ ಅಡಿ ಬರೋಬ್ಬರಿ 12,165 ದೂರುಗಳು ದಾಖಲಾಗಿವೆ. ಸಾವಿರಾರು ದೂರುಗಳು ದಾಖಲಾದ್ರೂ ರೇರಾ ನಿರ್ಲಕ್ಷ್ಯ ಮಾಡಿದೆ. ದೂರುಗಳನ್ನ ವಿಲೇವಾರಿ ಮಾಡೋದಕ್ಕೂ ಸಹ ನಿರ್ಲಕ್ಷ್ಯ ಮಾಡಿದೆ. ಮಾಹಿತಿಗಳ ಪ್ರಕಾರ, ಇನ್ನೂ 2 ಸಾವಿರದಷ್ಟು ಕೇಸ್ಗಳು ಬಾಕಿ ಇವೆ. ಇನ್ನು, ವಿಲೇವಾರಿ ಆದ ಹಲವು ಕೇಸ್ಗಳಲ್ಲಿ ಆದೇಶವೇ ನೀಡಿಲ್ಲ ಎನ್ನಲಾಗಿದೆ. ಸದ್ಯ ಜಮೀರ್ ಅಹ್ಮದ್ ವಸತಿ ಇಲಾಖೆಯಲ್ಲಿ ಇಷ್ಟೊಂದು ಭ್ರಷ್ಟಾಚಾರ ಕೇಳಿ ಬಂದಿದೆ.
















